ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಕಲಾಪ ನಡೆಯುವ ವೇಳೆಯೇ ನುಗ್ಗಿದ ಅಪರಿಚಿತರು ನವದೆಹಲಿ,ಡಿಸೆಂಬರ್,13,2023(..): ಲೋಕಸಭೆ ಕಲಾಪ ವೇಳೆ ಭಾರಿ ಭದ್ರತಾ ಲೋಪ ಕಂಡು ಬಂದಿದ್ದು, ಕಲಾಪ ನಡೆಯುವ ವೇಳೆಯೇ ಅಪರಿಚಿತ ವ್ಯಕ್ತಿಗಳು ನುಗ್ಗಿದ ಘಟನೆ ನಡೆದಿದೆ.ಕಲಾಪ ನಡೆಯುತ್ತಿದ್ದಾಗಲೇ ಗ್ಯಾಲರಿಗೆ ಅಪರಿಚಿತ ಯುವಕರು ನುಗ್ಗಿದ್ದು, ಈ ವೇಳೇ ಸಂಸದರು ಹೆದರಿ ಲೋಕಸಭೆಯಿಂದ ಹೊರ ಓಡಿಹೋಗಿದ್ದಾರೆ.ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ ಲೋಕಸಭೆಯಲ್ಲಿ ಗೊಂದಲ ಉಂಟಾಯಿತು. ಭದ್ರತಾ ಪ್ರೋಟೋಕಾಲ್ಗಳನ್ನು ತ್ವರಿತವಾಗಿ ಸಕ್ರಿಯಗೊಳಿಸಿದ್ದರಿಂದ ಹಠಾತ್ ಒಳನುಸುಳುವಿಕೆಯು ಸದನವನ್ನು ಮುಂದೂಡಲಾಗಿದೆ ಅಂತ ತಿಳಿದು ಬಂದಿದೆ.