‘ಕೈ’ ಸರಕಾರದ ಅಕ್ರಮಗಳ ಕುರಿತು ಪ್ರಧಾನಿ, ಗೃಹ ಸಚಿವರಿಗೆ ದಾಖಲೆ ಸಮೇತ ದೂರು ನೀಡುವೆ: ಮಾಜಿ ಸಿಎಂ ಎಚ್ಡಿಕೆ ಬೆಂಗಳೂರು, ಆಗಸ್ಟ್ 05, 2023 (..): ಗೃಹ ಇಲಾಖೆಯಲ್ಲೂ ವ್ಯಾಪಕ ವರ್ಗಾವಣೆ ನಡೆದಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯಲ್ಲೂ ವ್ಯಾಪಕ ವರ್ಗಾವಣೆ ನಡೆದಿವೆ. ಸರಕಾರದ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದರು. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವರ್ಸಸ್ ಕಾಂಗ್ರೆಸ್ ನಾಯಕರ ನಡುವೆ ವಾಗ್ಯುದ್ಧ ಮುಂದುವರಿದಿದೆ. ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ ವಿಚಾರಗಳನ್ನು ಕೆಲವು ದಾಖಲೆಗಳ ಸಮೇತ ನಾನು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸುತ್ತಿದ್ದೇನೆ. ನಾನು, ಅವರ ಸಮಯ ಕೇಳಿದ್ದು ವೈಯಕ್ತಿಕವಾಗಿ ಭೇಟಿಯಾಗಿ ವಿವರಿಸುತ್ತೇನೆ. ವರ್ಗಾವಣೆ ದಂಧೆಯಲ್ಲಿ ಒಂದು ಸಾವಿರ ಕೋಟಿಗಿಂತ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಒಂದೊಂದು ಪೋಸ್ಟ್ ಗೆ 3-4 ಜನರಿಗೆ ಲೆಟರ್ ಕೊಟ್ಟಿದ್ದಾರೆ ಎಂದು ದೂರಿದರು. ಆಎಲ್ಲಾದಾಖಲೆಗಳಸಂಗ್ರಹಮಾಡಿದ್ದೇನೆ.ನೈಸ್ಹಗರಣದದಾಖಲೆಗಳನ್ನುದೆಹಲಿಯಲ್ಲಿಬಿಡುಗಡೆಮಡುತ್ತೇನೆ.ಪ್ರಧಾನಿಮೋದಿಯವರಿಗೆಪ್ರಶ್ನೆಮಾಡುತ್ತೇನೆ.ನಾನುದಾಖಲೆಕೊಡುತ್ತೇನೆಎಂದರು. ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ. ಕೈ ಸರಕಾರಕ್ಕೆ ಬುದ್ಧಿ ಕಲಿಸುತ್ತೇನೆ. ಕಾಂಗ್ರೆಸ್ ಪಕ್ಷದ ಜಾಹೀರಾತನ್ನು ನೋಡಿದೆ. ಕಾಂಗ್ರೆಸ್, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ನೀವು ಗೃಹಜ್ಯೋತಿ ಕೊಟ್ಟ ನಂತರವೇ ಜನ ಕರೆಂಟನ್ನು ನೋಡಿದ್ದಾ?” ಎಂದು ಟೀಕಿಸಿದರು.