ಇಷ್ಟು ದಿನ ಜನರ ಕಿವಿಗೆ ಜೆಡಿಎಸ್ , ಕಾಂಗ್ರೆಸ್ ನವರು ಹೂ ಇಟ್ಟಿದ್ದಾರೆ- ಸಿಎಂ ಬೊಮ್ಮಾಯಿ ಟಾಂಗ್: ಬಜೆಟ್ ಮಂಡನೆ ಆರಂಭ ಬೆಂಗಳೂರು,ಫೆಬ್ರವರಿ,17,2023(..):ಇಷ್ಟು ದಿನ ಜೆಡಿಎಸ್ ಕಾಂಗ್ರೆಸ್ ಜನರಿಗೆ ಹೂ ಇಡುತ್ತಿದ್ದರು: ಈಗ ಜನರೇ ಹೂ ಇಡುತ್ತಿದ್ದಾರೆ ಎಂದು ಬಜೆಟ್ ಮಂಡನೆ ಆರಂಭಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು ಬಜೆಟ್ ಮಂಡನೆ ಆರಂಭಕ್ಕೂ ಮುನ್ನ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಮಗ್ರೆಸ್ ಜೆಡಿಎಸ್ ಇಷ್ಟು ದಿನ ಜನರ ಕಿವಿಗೆ ಹೂವು ಇಡುತ್ತಿದ್ದರು. ಹಳೇ ಕಾಲ ಹೋಗುತ್ತಿರುವ ಜತೆಗೆ ಹೊಸ ಕಾಲ ಬರುತ್ತಲಿದೆ. ಬರುತಲಿದೆ ಹೊಸ ದೃಷ್ಠಿ ಎಂದು ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ ಪ್ರಸ್ತಾಪಿಸಿದರು. ಸಿಎಂ ಬೊಮ್ಮಾಯಿ ಮಾತಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಗದ್ದಲವನ್ನುಂಟುಮಾಡಿದವು. ಸದ್ಯ ಬಜೆಟ್ ಮಂಡನೆ ಆರಂಭವಾಗಿದೆ. : - – –