ಮೈಸೂರು ಎಸ್.ಪಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳು ವರ್ಗಾವಣೆ. ಬೆಂಗಳೂರು,ಡಿಸೆಂಬರ್,21,2022(..):ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಎಸ್.ಪಿ ಆರ್.ಚೇತನ್ ಅವರನ್ನ ಗುಪ್ತಚರ ವಿಭಾಗದ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಟ್ಕರ್ ಅವರನ್ನ ವರ್ಗಾಯಿಸಲಾಗಿದೆ. ಶಿವಪ್ರಕಾಶ್ ಅವರನ್ನ ಸಿಸಿಬಿ ಬೆಂಗಳೂರು ವಿಭಾಗದ ಎಐಜಿಪಿಯಾಗಿ, ಎಂ. ಮುತ್ತುರಾಜ್ ಅವರನ್ನ ಮೈಸೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಹಾಗೂ ಬಾಬುಸಾಬ್ ನೇಮೆಗೌಡ ಅವರನ್ನ ಗದಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. : - - - - - . .