ಚೆನ್ನೈನಲ್ಲಿ ಈ ಬಾರಿ ಈ ಪರಿ ಮಳೆಯಾಗ್ತಿರೋದೇಕೆ? ಕರ್ನಾಟಕದ ನೀರು ಬೇಡ್ವಾ ಅವರಿಗೆ? ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈ. ಇಲ್ಲಿನ ಭಾರೀ ಮಳೆ ಆಗಾಗ್ಗೆ ಜನ ಜೀವನ ಅಸ್ತವ್ಯಸ್ತ ಮಾಡುತ್ತದೆ.ಕರಾವಳಿ ನಗರ ಚೆನ್ನೈನಲ್ಲಿ ಹವಾಮಾನ ಮತ್ತು ಭೌಗೋಳಿಕ ಅಂಶಗಳಿಂದ ಗಮನಾರ್ಹ ಮಳೆಯಾಗುತ್ತಿದ್ದು, ಇದಕ್ಕೆ ಅನೇಕ ಕಾರಣಗಳು ಇಲ್ಲಿವೆ. ಚೆನ್ನೈಗೆ ನೀರು ಬಿಡುವಷ್ಟು ಈ ಸಲ ರಾಜ್ಯದ ಜಲಾಶಯಗಳು ತುಂಬಿದ್ದು, ಮಳೆ ನೀರು ಬೇಡ್ವಾ ಕೇಳುತ್ತಿದೆ ಸೋಷಿಯಲ್ ಮೀಡಿಯಾ. ದಕ್ಷಿಣ ಭಾರತದ ಪ್ರಮುಖ ನಗರ ಚೆನ್ನೈ. ಇಲ್ಲಿನ ಭಾರೀ ಮಳೆ ಆಗಾಗ್ಗೆ ಜನ ಜೀವನ ಅಸ್ತವ್ಯಸ್ತ ಮಾಡುತ್ತದೆ.ಕರಾವಳಿ ನಗರ ಚೆನ್ನೈನಲ್ಲಿ ಹವಾಮಾನ ಮತ್ತು ಭೌಗೋಳಿಕ ಅಂಶಗಳಿಂದ ಗಮನಾರ್ಹ ಮಳೆಯಾಗುತ್ತಿದ್ದು, ಇದಕ್ಕೆ ಅನೇಕ ಕಾರಣಗಳು ಇಲ್ಲಿವೆ. ಚೆನ್ನೈಗೆ ನೀರು ಬಿಡುವಷ್ಟು ಈ ಸಲ ರಾಜ್ಯದ ಜಲಾಶಯಗಳು ತುಂಬಿದ್ದು, ಮಳೆ ನೀರು ಬೇಡ್ವಾ ಕೇಳುತ್ತಿದೆ ಸೋಷಿಯಲ್ ಮೀಡಿಯಾ. ಆಗ್ನೇಯ ಕರಾವಳಿಯಲ್ಲಿರುವ ಚೆನ್ನೈ ಬೆಂಗಾಲಿ ಕೊಲ್ಲಿಯಿಂದ ಬೀಸುವ ತೇವಾಂಶದಿಂದ ಕೂಡಿದ ಗಾಳಿಗೆ ಗುರಿಯಾಗುತ್ತದೆ. ಈ ಮಾರುತಗಳು ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆಯಾಗುವಂತೆ ನೋಡಿ ಕೊಳ್ಳುತ್ತದೆ. ಚೆನ್ನೈಗೆ ಆಗ್ನೇಯ ಮಾನ್ಸೂನ್ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಭಾರೀ ಮಳೆಯನ್ನು ತರುತ್ತದೆ ಮತ್ತು ಈಶಾನ್ಯ ಮಾನ್ಸೂನ್ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಗರದ ಮೇಲೆ ಪರಿಣಾಮ ಬೀರುತ್ತದೆ. ಈ ಕರಾವಳಿ ನಗರವು ಬಂಗಾಳ ಕೊಲ್ಲಿಗೆ ಹತ್ತಿರದಲ್ಲಿದೆ. ಅಂದರೆ ಚೆನ್ನೈ ಕೊಲ್ಲಿಯ ಹವಾಮಾನ ವ್ಯವಸ್ಥೆಯಿಂದ ನೇರವಾಗಿ ಪ್ರಭಾವಿತವಾಗಿದ್ದು, ಚಂಡಮಾರುತಗಳು ಮತ್ತು ವಾಯುಭಾರ ಕುಸಿತದಿಂದ ವಿಪರೀತ ಮಳೆಗೆ ಕಾರಣವಾಗುತ್ತದೆ. ಚೆನ್ನೈನ ಹೆಚ್ಚಿನ ಹ್ಯೂಮಿಡಿಟಿ ಮಟ್ಟವು ಮೋಡಗಳ ರಚನೆಗೆ ಮತ್ತು ಮಳೆಗೆ ಅನುಕೂಲವಾಗುತ್ತದೆ. ನಗರಗಳ ಉಷ್ಣವಲಯದ ಹವಾಮಾನವು ಮಳೆಯಲ್ಲಿನ ತೇವಾಂಶವು ಸುಲಭವಾಗಿ ಘನೀಕರಿಸಲು ಸಹಾಯಕಾರಿ. ವ್ಯಾಪಕ ಕಾಂಕ್ರೀಟ್, ಆಸ್ಫಾಲ್ಟ್ ಮೇಲ್ಮೈಗಳಿರೋ ಚೆನ್ನೈನಲ್ಲಿ ಶಾಖವೂ ಹೆಚ್ಚು. ಗುಡುಗು ಸಹಿತ ಮಳೆಯಾಗುವುದಲ್ಲದೇ, ಚಂಡಮಾರುತವನ್ನೂ ,ಸೃಷ್ಟಿಸುತ್ತದೆ. ಚೆನ್ನೈನ ಉಷ್ಣವಲಯದ ಹವಾಮಾನ ಹೆಚ್ಚಿನ ತಾಪಮಾನ ಮತ್ತು ಆಗಾಗ್ಗೆ ಮಳೆಯಿಂದ ಕೂಡಿದೆ. ಈ ಹವಾಮಾನವು ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ನೈಸರ್ಗಕ ವಿಕೋಪದಂಥ ಮಳೆಗೆ ಕಾರಣವಾಗುತ್ತದೆ. ವಾಯುಭಾರ ಕುಸಿತಿದಂದ ಹವಾಮಾನದ ಬದಲಾವಣೆ ಜೊತೆಗೆ ನೈಋತ್ಯದಿಂದ ವಾಯುವ್ಯದ ಕಡೆಗೆ ಬೀಸುವ ಗಾಳಿಯೂ ನಗರದಲ್ಲಿ ವಿಪರೀತ ಮಳೆಗೆ ಕಾರಣವಾಗುತ್ತದೆ.