: ದುಬೈಗೆ ಹಾರಿದ್ರಾ ಪ್ರಜ್ವಲ್‌ ರೇವಣ್ಣ? ಬೆಂಗಳೂರಿಗೆ ಬರೋದು ಡೌಟಾ..? ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಯಿಂದ ದುಬೈಗೆ ಹೋಗಿದ್ದಾರೆ ಎನ್ನಲಾಗಿದೆ. ದುಬೈನಿಂದ ನೇರವಾಗಿ ಬೆಂಗಳೂರಿಗೆ ಬರುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆಯಾದರೂ ಖಚಿತ ಮಾಹಿತಿ ತಿಳಿದುಬಂದಿಲ್ಲ. ಪ್ರಜ್ವಲ್‌ ರೇವಣ್ಣ ( ) ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ದಿನ ದಿನವೂ ಹೊಸ ಹೊಸ ಬೆಳವಣಿಗೆ ಆಗುತ್ತಿದೆ. ಈ ನಡುವೆ ಜರ್ಮನಿಯಲ್ಲಿ ಇದ್ದ ಪ್ರಜ್ವಲ್‌ ರೇವಣ್ಣ( ) ಅವರು ದುಬೈಗೆ () ಹೋಗಿದ್ದಾರೆ ಎನ್ನಲಾಗಿದೆ. ಹಾಗೆಯೇ ದುಬೈನಿಂದ ನೇರವಾಗಿ ಬೆಂಗಳೂರಿಗೆ() ಬರುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಈ ನಡುವೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲ ಕಾಲಾವಕಾಶ ಕೇಳಿದ್ದು, ಮೊನ್ನೆ ರಾತ್ರಿಯೇ ಪ್ರಜ್ವಲ್ ದುಬೈಗೆ ತೆರಳಿರುವ ಬಗ್ಗೆ ಮಾಹಿತಿ ಇದೆ. ಇದರ ಜೊತೆಗೆ ನಾನು ಬೆಂಗಳೂರಲ್ಲಿ ಇಲ್ಲ ಎಂದು ಟ್ವೀಟ್ ಮಾಡಿದ್ದು, ಅವರು ಎಲ್ಲಿದ್ದಾರೆ ಎಂದು ಈವರೆಗೂ ಸಹ ಯಾವುದೇ ಖಚಿತ ಮಾಹಿತಿಯೇ ಇಲ್ಲ ಎನ್ನಲಾಗಿದೆ. ಅದರಲ್ಲೂ ಪ್ರಜ್ವಲ್ ಬಗ್ಗೆ ಕುಟುಂಬಸ್ಥರಿಂದಲೂ ಮಾಹಿತಿ ಸಿಗುತ್ತಿಲ್ಲವಾದ್ದರಿಂದ ಎಸ್‌ಐಟಿಗೆ () ತಲೆನೋವಾಗಿ ಪರಿಣಮಿಸಿದೆ. ಮಹತ್ವದ ವಿಚಾರ ಏನೆಂದರೆ ಮೇ 15 ಮಧ್ಯಾಹ್ನ 12.30ಕ್ಕೆ ರಿಟರ್ನ್ ಟಿಕೆಟ್ ಬುಕ್ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ರಾಜ್ಯದಲ್ಲಿ ಆಗುತ್ತಿರುವ ತೀವ್ರತರದ ಬದಲಾವಣೆಗಳನ್ನು ಗಮನಿಸಿದ್ರೆ ಅವರು ಬೆಂಗಳೂರಿಗೆ ಬರುತ್ತಾರಾ ಅಥವಾ ಮತ್ತೆ ಜರ್ಮನಿಗೆ ತೆರಳುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಿದೆ.ಇದನ್ನೂ ವೀಕ್ಷಿಸಿ:: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ? ಪ್ರಜ್ವಲ್‌ ರೇವಣ್ಣ ( ) ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ದಿನ ದಿನವೂ ಹೊಸ ಹೊಸ ಬೆಳವಣಿಗೆ ಆಗುತ್ತಿದೆ. ಈ ನಡುವೆ ಜರ್ಮನಿಯಲ್ಲಿ ಇದ್ದ ಪ್ರಜ್ವಲ್‌ ರೇವಣ್ಣ( ) ಅವರು ದುಬೈಗೆ () ಹೋಗಿದ್ದಾರೆ ಎನ್ನಲಾಗಿದೆ. ಹಾಗೆಯೇ ದುಬೈನಿಂದ ನೇರವಾಗಿ ಬೆಂಗಳೂರಿಗೆ() ಬರುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಈ ನಡುವೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲ ಕಾಲಾವಕಾಶ ಕೇಳಿದ್ದು, ಮೊನ್ನೆ ರಾತ್ರಿಯೇ ಪ್ರಜ್ವಲ್ ದುಬೈಗೆ ತೆರಳಿರುವ ಬಗ್ಗೆ ಮಾಹಿತಿ ಇದೆ. ಇದರ ಜೊತೆಗೆ ನಾನು ಬೆಂಗಳೂರಲ್ಲಿ ಇಲ್ಲ ಎಂದು ಟ್ವೀಟ್ ಮಾಡಿದ್ದು, ಅವರು ಎಲ್ಲಿದ್ದಾರೆ ಎಂದು ಈವರೆಗೂ ಸಹ ಯಾವುದೇ ಖಚಿತ ಮಾಹಿತಿಯೇ ಇಲ್ಲ ಎನ್ನಲಾಗಿದೆ. ಅದರಲ್ಲೂ ಪ್ರಜ್ವಲ್ ಬಗ್ಗೆ ಕುಟುಂಬಸ್ಥರಿಂದಲೂ ಮಾಹಿತಿ ಸಿಗುತ್ತಿಲ್ಲವಾದ್ದರಿಂದ ಎಸ್‌ಐಟಿಗೆ () ತಲೆನೋವಾಗಿ ಪರಿಣಮಿಸಿದೆ. ಮಹತ್ವದ ವಿಚಾರ ಏನೆಂದರೆ ಮೇ 15 ಮಧ್ಯಾಹ್ನ 12.30ಕ್ಕೆ ರಿಟರ್ನ್ ಟಿಕೆಟ್ ಬುಕ್ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ರಾಜ್ಯದಲ್ಲಿ ಆಗುತ್ತಿರುವ ತೀವ್ರತರದ ಬದಲಾವಣೆಗಳನ್ನು ಗಮನಿಸಿದ್ರೆ ಅವರು ಬೆಂಗಳೂರಿಗೆ ಬರುತ್ತಾರಾ ಅಥವಾ ಮತ್ತೆ ಜರ್ಮನಿಗೆ ತೆರಳುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಇದನ್ನೂ ವೀಕ್ಷಿಸಿ:: ಸಂಜೀವಿನಿಯಾಗಿದ್ದ ಕೊರೊನಾ ಲಸಿಕೆಯೇ ಜೀವಕ್ಕೆ ಕುತ್ತು ತರುತ್ತಾ? ಹೃದಯಾಘಾತ ಸಮಸ್ಯೆಗೆ ಕೋವಿಶೀಲ್ಡ್ ಕಾರಣನಾ?