: ರೆಸ್ಲರ್‌ಗಳಿಂದ ಏಷ್ಯನ್‌ ಗೇಮ್ಸ್‌ ಬಾಯ್ಕಾಟ್‌ ಬೆದರಿಕೆ! ಈ ಎಲ್ಲಾ ಸಮಸ್ಯೆಗಳು ಪರಿಹಾರವಾದಾಗ ಮಾತ್ರ ನಾವು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತೇವೆ ಎಂದು ಒಲಿಂಪಿಕ್‌ ಪದಕ ವಿಜೇತ ರೆಸ್ಲರ್‌ ಸಾಕ್ಷಿ ಮಲೀಕ್‌ ಶನಿವಾರ ಹೇಳಿದ್ದಾರೆ. ನವದೆಹಲಿ (ಜೂ.10):ಈಗ ನಮ್ಮ ನಡುವೆ ಇರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿದಲ್ಲಿ ಮಾತ್ರವೇ ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ನಾನು ಹಾಗೂ ಇತರ ರೆಸ್ಲರ್‌ಗಳು ಸ್ಪರ್ಧೆ ಮಾಡಲಿದ್ದೇವೆ ಎಂದು ಒಲಿಂಪಿಕ್‌ ಪದಕ ವಿಜೇತ ಮಹಿಳಾ ರೆಸ್ಲರ್‌ ಸಾಕ್ಷಿ ಮಲೀಕ್‌ ಶನಿವಾರ ಹೇಳಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್‌ ಹಾಗೂ ಅದರ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್ ಅವರ ವಿರುದ್ಧ ಎದುರಾಗಿರುವ ಸಮಸ್ಯೆಗಳನ್ನು ಉದ್ದೇಶಿಸಿ ಸಾಕ್ಷಿ ಮಲೀಕ್‌ ಮಾತನಾಡಿದ್ದಾರೆ. 'ಈ ಕುರಿತಾದ ಎಲ್ಲಾ ಸಮಸ್ಯೆಗಳು ಬಗೆಹರಿದಲ್ಲಿ ಮಾತ್ರವೇ ನಾವೆಲ್ಲರೂ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧೆ ಮಾಡಲಿದ್ದೇವೆ' ಎಂದು ಸಾಕ್ಷಿ ಮಲೀಕ್‌ ಹೇಳಿರುವ ವಿಡಿಯೋವನ್ನು ಎಎನ್‌ಐ ತನ್ನ ಟ್ವಿಟರ್‌ ಪುಟದಲ್ಲಿ ಪ್ರಕಟ ಮಾಡಿದೆ. ಪ್ರತಿದಿನ ಮಾನಸಿಕವಾಗಿ ನಾವು ಹಾಯ ಹಂತದಲ್ಲಿ ಹೋಗುತ್ತಿದ್ದೇವೆ ಅನ್ನೋದು ನಿಮಗೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಆಕೆ ಹೇಳಿದ್ದಾರೆ. ಪೊಲೀಸರ ಜೊತೆಗೆ ಪ್ರತಿ ದಿನ ರೆಸ್ಲರ್‌ಗಳ ಗುದ್ದಾಟದ ಬಗ್ಗೆ ಮಾತನಾಡುವಾಗ ಸಾಕ್ಷಿ ಈ ಮಾತನ್ನು ಹೇಳಿದ್ದಾರೆ. ಸಾಕ್ಷಿ ಮತ್ತು ಇತರ ಕುಸ್ತಿಪಟುಗಳು ಸೋನೆಪತ್‌ನಲ್ಲಿನ ಮಹಾ ಪಂಚಾಯತ್‌ಗೆ ಹಾಜರಾಗಿದ್ದರು. ಇದಕ್ಕೂ ಮುನ್ನ ಮಾತನಾಡಿದ ಕುಸ್ತಿಪಟು ಬಜರಂಗ್ ಪುನಿಯಾ, ಖಾಪ್ ಪಂಚಾಯತ್‌ಗಳೊಂದಿಗೆ ಚರ್ಚಿಸಿದ ನಂತರವೇ ಧರಣಿಯಲ್ಲಿರುವ ಆಟಗಾರರು ತಮ್ಮ ಮುಂದಿನ ಕ್ರಮವನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು. ಇದಕ್ಕೂ ಮುನ್ನ ರಾಕೇಶ್ ಟಿಕಾಯತ್ ನೇತೃತ್ವದ 'ಖಾಪ್ ಮಹಾಪಂಚಾಯತ್' ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿತು ಮತ್ತು ಅದರ ಬೇಡಿಕೆಯ ಮೇರೆಗೆ ಕಾರ್ಯನಿರ್ವಹಿಸಲು ಸರ್ಕಾರಕ್ಕೆ ಜೂನ್ 9 ರವರೆಗೆ ಸಮಯ ನೀಡಿತ್ತು. ಇತ್ತೀಚಿನ ಬೆಳವಣಿಗೆಯಲ್ಲಿ, ಮಹಿಳಾ ಕುಸ್ತಿಪಟುವನ್ನು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ನಿವಾಸಕ್ಕೆ ದೆಹಲಿ ಪೊಲೀಸರು "ದೃಶ್ಯವನ್ನು ಮರುಸೃಷ್ಟಿಸಲು ಮತ್ತು ಅವರು ಕಿರುಕುಳವನ್ನು ಎದುರಿಸಿದ ಸ್ಥಳಗಳನ್ನು ನೆನಪಿಸಿಕೊಳ್ಳಲು" ಕರೆದೊಯ್ದ ತನಿಖೆ ಮಾಡಿದ್ದಾರೆ. "ಮಧ್ಯಾಹ್ನ 1.30 ಕ್ಕೆ ಮಹಿಳಾ ಅಧಿಕಾರಿಗಳು ಮಹಿಳಾ ಕುಸ್ತಿಪಟುವನ್ನು ದೆಹಲಿಯಲ್ಲಿರುವ ಬ್ರಿಜ್ ಭೂಷಣ್ ಅವರ ಅಧಿಕೃತ ನಿವಾಸಕ್ಕೆ ಕರೆದೊಯ್ದರು. ಅವರು ಅರ್ಧ ಗಂಟೆ ಅಲ್ಲಿಯೇ ಇದ್ದರು. ಅವರು ದೃಶ್ಯವನ್ನು ಮರುಸೃಷ್ಟಿಸಲು ಮತ್ತು ಕಿರುಕುಳವನ್ನು ಎದುರಿಸಿದ ಸ್ಥಳಗಳನ್ನು ಮರುಸೃಷ್ಟಿ ಮಾಡುವಂತೆ ಕೇಳಿಕೊಂಡರು" ಎಂದು ಪಿಟಿಐ ವರದಿ ಮಾಡಿದೆ. ಇದಕ್ಕೂ ಮುನ್ನ "ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಕ್ಕಾಗಿ" ಅಧಿಕಾರಿಗಳು ಅವರನ್ನು ಬಂಧಿಸಿದಾಗ ಕುಸ್ತಿಪಟುಗಳು ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದರು. ಹೊಸ ಸಂಸತ್ತಿನ ಉದ್ಘಾಟನೆಯ ದಿನದಂದು ಮುತ್ತಿಗೆ ಹಾಕುವ ವೇಳೆ ಈ ಘಟನೆ ನಡೆಸಿದೆ. ಸಂಸತ್ ಆವರಣದ ಬಳಿ ಮಹಿಳಾ ಮಹಾ ಪಂಚಾಯಿತಿ ನಡೆಸುವ ಉದ್ದೇಶದಿಂದ ಕುಸ್ತಿಪಟುಗಳು ಮೆರವಣಿಗೆ ನಡೆಸಿದರು. ಆದಾಗ್ಯೂ, ದೆಹಲಿ ಪೊಲೀಸರು ಅವರನ್ನು ಬಂಧಿಸಿ ಪ್ರತ್ಯೇಕ ಸ್ಥಳಗಳಿಗೆ ಕರೆದೊಯ್ದರು ಮತ್ತು ಪ್ರತಿಭಟನಾ ಸ್ಥಳದಲ್ಲಿ ಟೆಂಟ್‌ಗಳನ್ನು ತೆರವುಗೊಳಿಸಿದ್ದರು. : ಕುಸ್ತಿ​ಪ​ಟು​ಗಳನ್ನು ಬೆಂಬ​ಲಿ​ಸಿ ಮತ್ತೆ ಮಹಾ​ಪಂಚಾ​​ಯ​ತ್‌ ಈ ವಾರದ ಆರಂಭದಲ್ಲಿ, ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದರು. ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಜೂನ್ 15 ರ ಮೊದಲು ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದರು. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, "ಕುಸ್ತಿ ಫೆಡರೇಶನ್‌ನ ಆಂತರಿಕ ದೂರು ಸಮಿತಿಯನ್ನು ರಚಿಸಲಾಗುವುದು. ಅದರ ನೇತೃತ್ವವನ್ನು ಮಹಿಳೆಯೇ ವಹಿಸುತ್ತಾರೆ. ನಾವು ಕುಸ್ತಿಪಟುಗಳ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ನಾವು ಒತ್ತಾಯಿಸಿದ್ದೇವೆ ಎಂದಿದ್ದರು. : ಕುಸ್ತಿಪಟುಗಳಿಗೆ ನ್ಯಾಯ ಸಿಗಲಿ, ಶೀಘ್ರ ಚಾರ್ಜ್​ಶೀ​ಟ್‌ ಸಲ್ಲಿ​ಕೆ: ಅನುರಾಗ್ ಠಾಕೂರ್