ಟೀಮ್‌ ಇಂಡಿಯಾ ಆಟಗಾರರು ಏಲಿಯನ್ಸ್‌ಗಳಾ? ಪಾಕ್‌ ಪ್ರವಾಸಕ್ಕೆ ನಿರಾಕರಿಸಿದ ಭಾರತಕ್ಕೆ ವೇಗಿ ಜುನೈದ್‌ ಖಾನ್‌ ಪ್ರಶ್ನೆ! ವಿಶ್ವದ ಎಲ್ಲಾ ದೇಶದ ಆಟಗಾರರು ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್‌ ಆಡುತ್ತಾರೆ. ಟೀಮ್‌ ಇಂಡಿಯಾ ಆಟಗಾರರು ಭದ್ರತಾ ಕಾರಣ ನೀಡುತ್ತಾರೆ. ಅವರೇನು ಬೇರೆ ಜಗತ್ತಿನಿಂದ ಬರುವ ಏಲಿಯನ್ಸ್‌ಗಳಾ? ಎಂದು ಪಾಕಿಸ್ತಾನದ ವೇಗಿ ಜುನೈದ್‌ ಖಾನ್‌ ಪ್ರಶ್ನೆ ಮಾಡಿದ್ದಾರೆ. ನವದೆಹಲಿ (ಮೇ.12):ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಪ್ರತಿ ಬಾರಿಯೂ ಭದ್ರತಾ ಕಾರಣ ನೀಡುವ ಟೀಮ್‌ ಇಂಡಿಯಾ ಬಗ್ಗೆ ಪಾಕಿಸ್ತಾನದ ವೇಗಿ ಜುನೈದ್‌ ಖಾನ್‌ ಕಿಡಿಕಾರಿದ್ದಾರೆ. ವಿಶ್ವದ ಉಳಿದೆಲ್ಲಾ ದೇಶಗಳಿಗೆ ಪಾಕಿಸ್ತಾನಕ್ಕೆ ಬಂದು ಆಡಲು ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಕೇವಲ ಭಾರತಕ್ಕೆ ಮಾತ್ರವೇ ಯಾಕೆ ಸಮಸ್ಯೆ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಭಾರತ ತಂಡ 2009ರಿಂದಲೂ ಭದ್ರತಾ ಕಾರಣ ನೀಡಿ ಪಾಕಿಸ್ತಾನಕ್ಕೆ ಪ್ರವಾಸ್ಲ. ಕೈಗೊಂಡಿಲ್ಲ. ಆದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಇತ್ತೀಚೆಗೆ ಪಾಕಿಸ್ತಾನ ಪ್ರವಾಸ ಕೈಗೊಂಡು ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಡಿದೆ. ಎಲ್ಲಿಯೂ ಈ ತಂಡಗಳಿಗೆ ಭದ್ರತಾ ಸಮಸ್ಯೆಗಳು ಉದ್ಭವವಾಗಿರಲಿಲ್ಲ. 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ಪರವಾಗಿ ಆಡಿದ್ದ ಜುನೈದ್‌ ಖಾನ್‌, ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳದೆ ಇರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.ಪಾಕಿಸ್ತಾನದಲ್ಲಿ ಈಗಿನ ಪರಿಸ್ಥಿತಿ ಉತ್ತಮವಾಗಿದೆ. ವಿಶ್ವದ ಇತರ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ಗಳು ಈಗಾಗಲೇ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್‌ ಸರಣಿ ಆಡಿವೆ. ಈ ಯಾವ ತಂಡಕ್ಕೂ ಯಾವುದೇ ಭದ್ರತಾ ಸಮಸ್ಯೆಗಳು ಎದುರಾಗಿರಲಿಲ್ಲ. ಹಾಗಾಗಿ ಭಾರತ ತಂಡಕ್ಕೆ ಮಾತ್ರವೇ ಈ ಸಮಸ್ಯೆ ಎದುರಾಗುವುದು ಹೇಗೆ? ಇದಕ್ಕೆ ಏನು ಕಾರಣ? ಯಾವ ದೇಶದ ಆಟಗಾರರಿಗೂ ಇರದ ಭದ್ರತಾ ಸಮಸ್ಯೆ ಟೀಮ್‌ ಇಂಡಿಯಾ ಆಟಗಾರರಿಗೆ ಬರಲು ಅವರೇನು ಬೇರೆ ಜಗತ್ತಿನಿಂದ ಬರುವ ಏಲಿಯನ್ಸ್‌ಗಳೇ?' ಎಂದು ಕ್ರಿಕೆಟ್‌ ಪಾಕಿಸ್ತಾನಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಮತ್ತೆ ಪಾಕಿಸ್ತಾನ ಪ್ರವಾಸವನ್ನು ಪ್ರಾರಂಭಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಖಾನ್‌ ಹೇಳಿದ್ದಾರೆ.ಭಾರತವು ಪಾಕಿಸ್ತಾನಕ್ಕೆ ಹಿಂತಿರುಗಿ ಕ್ರಿಕೆಟ್ ಆಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಖಾನ್ ಹೇಳಿದರು. ಇದು ಕ್ರಿಕೆಟ್ ಆಟಕ್ಕೂ ಒಳ್ಳೆಯದು ಮತ್ತು ಪಾಕಿಸ್ತಾನದ ಜನರಿಗೆ ಒಳ್ಳೆಯದು ಎಂದಿದ್ದಾರೆ. ಐಸಿಸಿ ಪಾಕಿಸ್ತಾನದಲ್ಲಿ ಭದ್ರತೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದೆ ಮತ್ತು ದೇಶವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಲು ಸುರಕ್ಷಿತವಾಗಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದೆ. ಆದಾಗ್ಯೂ, ಅಂತಿಮವಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ವೈಯಕ್ತಿಕ ಮಂಡಳಿಗಳಿಗೆ ಬಿಟ್ಟಿದೆ.ಪಾಕಿಸ್ತಾನ ಪ್ರವಾಸದ ಬಗ್ಗೆ ಭಾರತ ತನ್ನ ನಿಲುವು ಬದಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಹಾಗಿದ್ದರೂ ಜುನೈದ್‌ ಖಾನ್‌ ಅವರ ಕಾಮೆಂಟ್‌ಗಳು ಈ ವಿಷಯವು ಪಾಕಿಸ್ತಾನದ ಕ್ರಿಕೆಟ್‌ಗೆ ಇನ್ನೂ ಪ್ರಮುಖ ಕಳವಳವಾಗಿದೆ ಎಂಬುದನ್ನು ನೆನಪಿಸುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಇರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಜುನೈದ್‌ ಖಾನ್‌ ಒತ್ತಿ ಹೇಳಿದ್ದಾರೆ. ಇತ್ತೀಚಿನ ಹಿನ್ನಡೆಗಳಿಂದ ಹಿಂಜರಿಯದೆ, ಖಾನ್ ಅವರು ಕ್ರಿಕೆಟ್ ಶಕ್ತಿಯಾಗಿ ಪಾಕಿಸ್ತಾನದ ಸ್ಥಾನವನ್ನು ಹೆಮ್ಮೆಯಿಂದ ನೋಡಿದ್ದಾರೆ. ಏಕದಿನ ಶ್ರೇಯಾಂಕದಲ್ಲಿ ತಂಡದ ಉತ್ತಮ ಶ್ರೇಯಾಂಕ ಇದಕ್ಕೆ ಕಾರಣ ಎಂದಿದ್ದಾರೆ. : ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ ಕುಸ್ತಿಪಟುಗಳು!ಹಾಗಿದ್ದರೂ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನ ನಂ.1 ಸ್ಥಾನದಲ್ಲಿ ಉಳಿದುಕೊಂಡಿದ್ದು ಬಹಳಕಡಿಮೆ ಸಮಯ. ನ್ಯೂಜಿಲೆಂಡ್‌ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಸೋಲು ಕಂಡ ಬಳಿಕ ಶ್ರೇಯಾಂಕದಲ್ಲ ಕೆಳಕ್ಕೆ ಇಳಿದಿತ್ತು. 'ವಿರಾಟ್‌ ಮ್ಯಾಮ್‌ ಎಂದು ನೀವ್ಯಾಕೆ ಕರೆಯಬಾರದು...' ಕ್ಯಾಮರಾಮೆನ್‌ಗೆ ಕಾಲೆಳೆದ ವಿರಾಟ್‌ ಕೊಹ್ಲಿ!