2022: ಕೆಕೆಆರ್​​ಗೆ ಆತನೊಬ್ಬನೇ ಬಿಗ್ ಬಾಸ್​..! * ಕೋಲ್ಕತಾ ನೈಟ್ ರೈಡರ್ಸ್ ಈ ಬಾರಿ ಪ್ಲೇ ಆಫ್‌ಗೇರಲು ವಿಫಲ * ಕೆಕೆಆರ್ ಸಿಇಒ ವೆಂಕಿ ಮೈಸೂರ್ ಮೇಲೆ ನಾಯಕ ಶ್ರೇಯಸ್ ಅಯ್ಯರ್ ಅಸಮಾಧಾನ * ಶ್ರೇಯಸ್ ಮತ್ತು ಸಂಬಂಧ ಹದಗೆಟ್ಟಿದೆ ಅನ್ನೋದು ಈಗ ಜಗಜ್ಜಾಹಿರು ಮುಂಬೈ(ಮೇ.11): ಆಯ್ತು, ಈಗ ಸರದಿ, ರವೀಂದ್ರ ಜಡೇಜಾನನ್ನು ಕ್ಯಾಪ್ಟನ್ ಮಾಡಿದ್ದ ಫ್ರಾಂಚೈಸಿ, ದಿಢೀರ್ ಅಂತ ಕೆಳೆಗಿಸಿ, ಮತ್ತೆ ಧೋನಿ ಕ್ಯಾಪ್ಟನ್ ಮಾಡಿ, ಏನೂ ಆಗಿಲ್ಲವೇನೋ ಅನ್ನೋ ಹಾಗೆ ಸೈಲೆಂಟ್ ಆಗಿ ಇದ್ದಾರೆ. ನಾಯಕತ್ವದ ವಿವಾದ ತಣ್ಣಗಾದ ಬೆನ್ನಲ್ಲೇ ಈಗ ನಾಯಕ ಅಸಮಾಧಾನ ಹೊರಹಾಕಿದ್ದಾನೆ. ಸ್ಫೋಟಕ ಹೇಳಿಕೆ ನೀಡೋ ಮೂಲಕ ವಿವಾದ ಸೃಷ್ಟಿಸಿದ್ದಾನೆ. ತಂಡ 12 ಪಂದ್ಯಗಳಲ್ಲಿ ಐದು ಗೆದ್ದು ಏಳನ್ನು ಸೋತು 10 ಅಂಕಗಳಿಸಿದೆ. ಉಳಿದ ಎರಡು ಗೆದ್ದರೂ ಪ್ಲೇ ಆಫ್​ಗೆ ಹೋಗಲ್ಲ. ಮೊನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಆ ಸ್ಟೇಟ್​ಮೆಂಟ್​ ​ನಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದೆ. ಪ್ಲೇಯಿಂಗ್​-11ನಲ್ಲಿ ಸಿಇಒ ಹಸ್ತಕ್ಷೇಪ ಯಾಕೆ..?: ಐಪಿಎಲ್​ನಲ್ಲಿ ತಂಡದ ಪ್ಲೇಯಿಂಗ್-11 ಅನ್ನ ಕೋಚ್ ಮತ್ತು ಕ್ಯಾಪ್ಟನ್​ ನಿರ್ಧರಿಸುತ್ತಾರೆ. ಆದರೆ KKRನಲ್ಲಿ ಮಾತ್ರ ಪ್ಲೇಯಿಂಗ್-11 ಆಯ್ಕೆ ಮಾಡುವಾಗ ವೆಂಕಿ ಮೈಸೂರ್ ಹಸ್ತಕ್ಷೇಪ ಇರುತ್ತದೆ ಎಂದು ಶ್ರೇಯಸ್ ಹೇಳೋ ಮೂಲ್ಕ ಹೊಸ ವಿವಾದವನ್ನ ಸೃಷ್ಟಿಸಿದ್ದಾರೆ. ತಂಡದ ಪ್ಲೇಯಿಂಗ್​-11 ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಈ ಮೀಟಿಂಗ್​ನಲ್ಲಿ ಕೋಚ್​ ಜೊತೆ ಟೀಮ್ ಕೂಡ ಇರುತ್ತಾರೆ ಎಂದು ಸಹ ಅಯ್ಯರ್ ಹೇಳಿದ್ದಾರೆ. ಈಗ ಪ್ಲೇಯಿಂಗ್-11ನಲ್ಲಿ ಕೆಲ್ಸ ಏನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ನಾಯಕ ಮತ್ತು ಕೋಚ್​ಗೆ ಆಟಗಾರರ ಸ್ಟ್ರೆಂಥ್ & ವೀಕ್ನೆಸ್ ಗೊತ್ತಿರುತ್ತೆ. ಅವರ ಮನಸ್ಥಿತಿಯನ್ನೂ ಅರಿತಿರುತ್ತಾರೆ. ಜೊತೆಗೆ ಮ್ಯಾಚ್ ಸೋತ್ರೆ ಅವರೇ ಹೊಣೆ ಆಗ್ತಾರೆ. ಹೀಗಿರುವಾಗ ಪ್ಲೇಯಿಂಗ್-11ನಲ್ಲಿ ಹಸ್ತಕ್ಷೇಪ ಮಾಡಿದ್ರೆ ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಜೊತೆಗೆ ಸೋಲಿನ ಹೊಣೆಯನ್ನ ಯಾರು ಒಪ್ಪಿಕೊಳ್ತಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಸತತ ಸೋಲಿನಿಂದ ಹತಾಶರಾದ್ರಾ ಶ್ರೇಯಸ್..?: ಕಳೆದ ವರ್ಷ ಇಂಜುರಿಯಾಗಿದ್ದರಿಂದ ಶ್ರೇಯಸ್ ಅಯ್ಯರ್, ಭಾರತದಲ್ಲಿ ನಡೆದ ಮೊದಲಾರ್ಧ ಐಪಿಎಲ್ ಆಡಲಿಲ್ಲ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ ಪಂತ್ ಲೀಡ್ ಮಾಡಿದ್ರು. ಯುಎಇನಲ್ಲಿ ನಡೆದ ಉಳಿದಾರ್ಧವನ್ನ ಶ್ರೇಯಸ್ ಆಡಿದರಾದ್ರೂ ಕೇವಲ ಆಟಗಾರನಾಗಿ ಆಡಿದ್ರು. ನಾಯಕನಾದರೆ ಮಾತ್ರ ಡೆಲ್ಲಿಯಲ್ಲಿ ಇರ್ತಿನಿ. ಇಲ್ಲದಿದ್ದರೆ ನನ್ನನ್ನ ರಿಟೈನ್ ಮಾಡಬೇಡಿ ಅಂತ ಡೆಲ್ಲಿ ಫ್ರಾಂಚೈಸಿಗೆ ಶ್ರೇಯಸ್ ಹೇಳಿದ್ದರಿಂದ ರಿಟೈನ್ ಮಾಡದೆ ಬಿಡ್​ಗೆ ಬಿಡಲಾಯ್ತು. ಬಿಡ್​​​ನಲ್ಲಿ 12.25 ಕೋಟಿಗೆ ಪಾಲಾದ್ರು. : ಬ್ಯಾಟಿಂಗ್ ಸೂರ್ಯನಿಗೆ ಕವಿದಿದೆ ಕ್ರಿಕೆಟ್ ಗ್ರಹಣ..! ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ, ಟೀಂ ಇಂಡಿಯಾ ಚುಕ್ಕಾಣಿ ಹಿಡಿಯುವ ಪ್ಲಾನ್ ಶ್ರೇಯಸ್ ಅವರದ್ದಾಗಿತ್ತು. ಆದ್ರೆ ಅವರ ನಾಯಕತ್ವದಲ್ಲಿ ಲೀಗ್​ನಿಂದಲೇ ಹೊರಬಿದ್ದಿದೆ. ಇದರ ನೇರ ಹೊಣೆಯನ್ನ ಕ್ಯಾಪ್ಟನ್ ಹೊರಬೇಕು. ಆದ್ರೆ ಆಡುವ ಹನ್ನೊಂದರ ಬಳಗ ಹಸ್ತಕ್ಷೇಪ ಮಾಡಿದ್ದರಿಂದಲೇ ಕಳಪೆ ಪ್ರದರ್ಶನ ನೀಡಿತು. ಇದರಲ್ಲಿ ನನ್ನದೇನು ಪಾತ್ರವಿಲ್ಲ ಅನ್ನೋದನ್ನ ಶ್ರೇಯಸ್​ ನಾಜೂಕಾಗಿ ಹೇಳಿ, ಫ್ರಾಂಚೈಸಿ ಜೊತೆ ಕಿರಿಕ್ ಮಾಡಿದ್ದಾರೆ. ಶ್ರೇಯಸ್ ಮತ್ತು ಸಂಬಂಧ ಹದಗೆಟ್ಟಿದೆ ಅನ್ನೋದು ಈಗ ಜಗಜ್ಜಾಹಿರವಾಗಿದೆ. ಅಲ್ಲಿಗೆ ಮುಂದಿನ ಸೀಸನ್​ನಲ್ಲಿ ಶ್ರೇಯಸ್​ ಟೀಮ್​ನಲ್ಲಿ ಇರೋದಿಲ್ಲ, ಇದ್ದರೂ ನಾಯಕನಾಗಿ ಇರೋದಿಲ್ಲ ಅನ್ನೋದು ಕನ್ಫರ್ಮ್​. ಯಾಕಂದರೆ ಕೋಚ್​ ಮೆಕ್ಕಲಂ ಜೊತೆ ಕಿತ್ತಾಡಿಕೊಂಡಿದ್ದ ಶ್ರೇಯಸ್, ಈಗ ಜೊತೆಯೂ ಕಿರಿಕ್​. ವೆಂಕಿ ಬಿಗ್​ಬಾಸ್ ಅನ್ನೋದನ್ನ ಮರಿಬೇಡಿ.