: ಆಕರ್ಷಕ ಶತಕ ಚಚ್ಚಿದ ದೇವದತ್ ಪಡಿಕ್ಕಲ್, ಬೃಹತ್ ಮೊತ್ತದತ್ತ ಕರ್ನಾಟಕ * ಪುದುಚೆರಿ ವಿರುದ್ದ ಮನಮೋಹಕ ಶತಕ ಚಚ್ಚಿದ ದೇವದತ್ ಪಡಿಕ್ಕಲ್ * ಮೊದಲ ದಿನದಾಟವೇ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ * ಮೊದಲ ದಿನದಾಟದಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 293 ರನ್ ಬಾರಿಸಿದ ಕರ್ನಾಟಕ ಚೆನ್ನೈ(ಫೆ.03): ಕರ್ನಾಟಕ ಹಾಗೂ ಪುದುಚೆರಿ ತಂಡಗಳ ನಡುವಿನ ರಣಜಿ ಟ್ರೋಫಿ ( ) ಟೂರ್ನಿಯ ಮೊದಲ ದಿನವೇ ದೇವದತ್ ಪಡಿಕ್ಕಲ್ ( ) ಪಡಿಕ್ಕಲ್ ಅಜೇಯ ಶತಕ ಬಾರಿಸುವ ಮೂಲಕ ಅಬ್ಬರಿಸಿದ್ದಾರೆ. ಪರಿಣಾಮ ಕರ್ನಾಟಕ ಕ್ರಿಕೆಟ್ ತಂಡವು ( ) ಮೊದಲ ದಿನದಾಟದಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 293 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡಲಾರಂಭಿಸಿದೆ. ದೇವದತ್ ಪಡಿಕ್ಕಲ್ ಅಜೇಯ 161 ರನ್ ಬಾರಿಸಿದರೆ, ನಾಯಕ ಮನೀಶ್ ಪಾಂಡೆ ( ) 21 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಲ್ಲಿನ ಶಿವಸುಬ್ರಮಣ್ಯ ನಾಡಾರ್ ಎಂಜಿನಿಯರ್ ಕಾಲೇಜ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ತಂಡವು ( ) ಮೊದಲು ಬೌಲಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿತು. ಪುದುಚೆರಿ ತಂಡದ ನಾಯಕ ದಾಮೋಧರನ್ ರೋಹಿತ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಪುದುಚೆರಿ ಬೌಲರ್‌ಗಳು ಆರಂಭದಲ್ಲಿ ಯಶಸ್ವಿಯಾದರು. ಕರ್ನಾಟಕ ತಂಡವು 39 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆರಂಭಿಕ ಬ್ಯಾಟರ್ ರವಿಕುಮಾರ್ ಸಮರ್ಥ್ 51 ಎಸೆತಗಳನ್ನು ಎದುರಿಸಿ 11 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಮಾಜಿ ನಾಯಕ ಕರುಣ್ ನಾಯರ್ ( ) ಬ್ಯಾಟಿಂಗ್ ಕೇವಲ 6 ರನ್‌ಗಳಿಗೆ ಸೀಮಿತವಾಯಿತು. ಈ ಇಬ್ಬರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಆಶಿತ್ ರಾಜೀವ್ ಯಶಸ್ವಿಯಾದರು. ಆಸರೆಯಾದ ಪಡಿಕ್ಕಲ್-ಸಿದ್ದಾರ್ಥ್‌:ಆರಂಭದಲ್ಲೇ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜ್ಯ ತಂಡಕ್ಕೆ ಮೂರನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದ ಕೃಷ್ಣಮೂರ್ತಿ ಸಿದ್ದಾರ್ಥ್‌ 168 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 85 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. : ಕ್ವಾರ್ಟರ್‌ ಫೈನಲ್‌ಗೇರುವ ತವಕದಲ್ಲಿ ಕರ್ನಾಟಕ ತಂಡ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಪಡಿಕ್ಕಲ್‌:ರಣಜಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ಎಡಗೈ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ದೇವದತ್ ಪಡಿಕ್ಕಲ್‌ ಒಟ್ಟು 277 ಎಸೆತಗಳನ್ನು ಎದುರಿಸಿ 20 ಶತಕ ಹಾಗೂ 2 ಸಿಕ್ಸರ್‌ ಸಹಿತ ಅಜೇಯ 161 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ ಇನ್ನು ಮತ್ತೊಂದು ತುದಿಯಲ್ಲಿ ಚುರುಕಾದ ಬ್ಯಾಟಿಂಗ್ ನಡೆಸಿದ ನಾಯಕ ಮನೀಶ್ ಪಾಂಡೆ 33 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್‌ ನೆರವಿನೊಂದಿಗೆ 21 ರನ್‌ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನವೂ ಈ ಜೋಡಿ ಕೆಲ ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿದರೆ, ಕರ್ನಾಟಕ ತಂಡವು ಅನಾಯಾಸವಾಗಿ ನಾನೂರರ ಗಡಿ ದಾಟಲಿದೆ. ಇನ್ನು ಪುದುಚೆರಿ ತಂಡದ ಪರ ಆಶಿತ್ ರಾಜೀವ್ 2 ವಿಕೆಟ್ ಪಡೆದರೆ, ಸಾಗರ್ ಉದೇಶಿ ಒಂದು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ತಂಡ: 293/3 (ಮೊದಲ ಇನಿಂಗ್ಸ್)ದೇವದತ್ ಪಡಿಕ್ಕಲ್‌: 161*ಕೃಷ್ಣಮೂರ್ತಿ ಸಿದ್ದಾರ್ಥ್: 85 ಆಶಿತ್ ರಾಜೀವ್: 37/2 (* ಮೊದಲ ದಿನದಾಟ ಮುಕ್ತಾಯದ ವೇಳೆಗೆ)