ಬದನೆಕಾಯಿ- ಗೋಬಿ ತಿಂದ್ರೆ ಗುಳ್ಳೆ ಮತ್ತೆ ಇನ್ಫೆಕ್ಷನ್ ಆಗುತ್ತೆ: ಕಾಯಿಲೆ ಎಂದು ಕಾಲೆಳೆದವರಿಗೆ ಉತ್ತರ ಕೊಟ್ಟ ಧನುಶ್ರೀ ಇದ್ದಕ್ಕಿದ್ದಂತೆ ಸಣ್ಣಗಾದ ಧನುಶ್ರೀ....ಕಾಯಿಲೆ ಎಂದು ಕಾಲೆಳೆದವರಿಗೆ ಉತ್ತರ ಕೊಟ್ಟ ಸುಂದರಿ.. ಇದ್ದಕ್ಕಿದ್ದಂತೆ ಸಣ್ಣಗಾದ ಧನುಶ್ರೀ....ಕಾಯಿಲೆ ಎಂದು ಕಾಲೆಳೆದವರಿಗೆ ಉತ್ತರ ಕೊಟ್ಟ ಸುಂದರಿ.. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದ ಧನುಶ್ರೀ ಈಗ ಸೋಷಿಯಲ್ ಮೀಡಿಯಾ ಸ್ಟಾರ್. ಲೈಫ್‌ಸ್ಟೈಲ್, ಫ್ಯಾಷನ್ ಮತ್ತು ಬ್ಯುಸಿಸೆನ್‌ ಪ್ರತಿಯೊಂದನ್ನು ಹಂಚಿಕೊಳ್ಳುತ್ತಾರೆ. ಕಳೆದ ಒಂದೆರಡು ವರ್ಷಗಳಿಂದ ಧನುಶ್ರೀ ಸಿಕ್ಕಾಪಟ್ಟೆ ದಪ್ಪಗಾಗಿದ್ದರು. ಹೀಗಾಗಿ ಟ್ರೋಲ್ ಎದುರಿಸಿ ಸಾಕಾಗಿ ಪರ್ಸನಲ್ ಟ್ರೈನರ್‌ನ ಪಡೆದು ವರ್ಕೌಟ್ ಆಂಡ್ ಡಯಟ್ ಮಾಡಿ ಸಣ್ಣಗಾಗಿದ್ದಾರೆ. ವರ್ಕೌಟ್ ಮತ್ತು ಡಯಟ್‌ನಿಂದ ಧನುಶ್ರೀ ಸುಮಾರು 10ರಿಂದ 12 ಕೆಜಿ ಸಣ್ಣಗಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಫಿಟ್ ಆಗಬೇಕು ಅನಿಸಿದ್ದು ಖಂಡಿತಾ ಆರೋಗ್ಯದ ದೃಷ್ಠಿಯಿಂದ. ಬದನೆಕಾಯಿ ಮತ್ತು ಗೋಬಿ ತಿಂದರೆ ದೇಹಕ್ಕೆ ಅಗಿ ಬರೋದಿಲ್ಲ ತುಂಬಾ ಬೇಗ ಅಲರ್ಜಿ ರಿಯಾಕ್ಷನ್ ಆಗಿ ಮುಖದಲ್ಲಿ ಗುಳ್ಳೆ ಮತ್ತು ಪಾದದಲ್ಲಿ ಇನ್ಫೆಕ್ಷನ್‌ ಕಾಣಿಸಿಕೊಳ್ಳುತ್ತದೆ ಎಂದು ಧನುಶ್ರೀ ಹೇಳಿದ್ದಾರೆ. ವೈದ್ಯರ ಜೊತೆ ಆಗಾಗ ಸಂಪರ್ಕ ಮಾಡಿ ನನ್ನ ಆರೋಗ್ಯದ ಬಗ್ಗೆ ಅಪ್‌ಡೇಟ್ ಮಾಡುತ್ತಿರುತ್ತೀನಿ. ಹೀಗಾಗಿ ನನ್ನ ಇಷ್ಟವಾದ ತರಕಾರಿ ಬದನೆಕಾಯಿಯನ್ನು ಸಂಪೂರ್ಣವಾಗಿ ಬಿಡುವ ಪರಿಸ್ಥಿತಿ ಎದುರಾಗಿದೆ. ಜಿಮ್‌ನಲ್ಲಿ ಪರ್ಸನಲ್‌ ಟ್ರೈನರ್‌ ಪಡೆಯಬೇಕಾ ಬೇಡ್ವಾ ಎಂದು ಅನೇಕರಿಗೆ ಗೊಂದಲ ಇರುತ್ತದೆ. ನಾನು ಸೂಕ್ಷವಾಗಿ ಗಮನಿಸಿದ ನಂತರ ಒಳ್ಳೆ ಟ್ರೈನರ್ ಮತ್ತು ಡಯಟ್‌ ಮೇಲೆ ಇನ್‌ವೆಸ್ಟ್‌ ಮಾಡಿದರೆ ಫಲಿತಾಂಶ ಸಿಗುತ್ತದೆ.