ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂದುಶ್ರೀ ರವೀಂದ್ರ; - ಆಗ್ತಿದೆ ಅಂತ ಕೋಕಿಲಾ ಅಜ್ಜಿ ಚಿಂತೆ! ಚಿಕಿತ್ಸೆಗೆಂದು ಹೋಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂದುಶ್ರೀ. ಲಕ್ಷ್ಮಿ ಬಂದಿದ್ದಾಳೆ ಅಂತ ಕೋಕಿಲಾ ಅಜ್ಜಿ ಫುಲ್ ಖುಷಿ.... ಚಿಕಿತ್ಸೆಗೆಂದು ಹೋಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂದುಶ್ರೀ. ಲಕ್ಷ್ಮಿ ಬಂದಿದ್ದಾಳೆ ಅಂತ ಕೋಕಿಲಾ ಅಜ್ಜಿ ಫುಲ್ ಖುಷಿ.... ಕನ್ನಡದ ಮೊದಲ ಮಹಿಳಾ ವೆಂಟ್ರಿಲೋಕ್ವಿಸ್ಟ್‌ ಇಂದುಶ್ರೀ ರವೀಂದ್ರ ( ) ಏಪ್ರಿಲ್ 8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇಂದುಶ್ರೀ ಏಪ್ರಿಲ್ 8ರಂದು ಜೆನರಲ್ ಚೆಕಪ್‌ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಆಗ ಎಮರ್ಚೆನ್ಸಿ ಆಪರೇಷನ್ ಮಾಡಿದ್ದಾರೆ. ಮಧ್ಯಾಹ್ಮ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾದ ಇಂದುಶ್ರೀ ಸುಮಾರು 3.28ರಂದು ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ. ನಮ್ಮ ಮನೆಯ ಪುಟ್ಟಿ ಎಂದು ಇಂದು ಬರೆದುಕೊಂಡಿದ್ದಾರೆ. ಆಪರೇಷನ್‌ಗೂ ಮುನ್ನ ಕೋಕಿಲಾ ಅಜ್ಜಿ ಎಂಟ್ರಿ ಕೊಟ್ಟಿದ್ದರು, ಆಗ ಸದಾ ಸೆಕ್ಷನ್‌ನಲ್ಲಿ ಇದ್ದವಳು ಈಗ ಸೆಕ್ಷನ್‌ ಮಾಡಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಪ್ರಿನ್ಸ್‌ಸೆಸ್‌ಗಳ ಫ್ಯಾಮಿಲಿಗೆ ಸ್ವಾಗತ ಇಂದು ಎಂದು ಆರ್‌ಕೆ ಪುನೀತಾ ಕಾಮೆಂಟ್ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಇಂದುಶ್ರೀ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದರು. 2017ರಲ್ಲಿ ಇಂದುಶ್ರೀ ರವೀಂದ್ರ ಮತ್ತು ಅಶ್ವತ್ಥ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಥೈಲ್ಯಾಂಡ್‌, ಜರ್ಮನಿ, ಫ್ರಾನ್ಸ್‌, ಇಂಡಿಯಾ ಸೇರಿಂದತೆ ಹಲವೆಡೆ ಪ್ರದರ್ಶನ ನೀಡಿದ್ದಾರೆ.