ಅರುಂಧತಿ ಮೂವಿಗೆ ಫಸ್ಟ್ ಚಾಯ್ಸ್ ಅನುಷ್ಕಾ ಶೆಟ್ಟಿ ಅಲ್ಲ.. ಗೋಲ್ಡನ್ ಚಾನ್ಸ್ ಮಿಸ್ ಮಾಡ್ಕೊಂಡ ಕಿಚ್ಚನ ಹೀರೋಯಿನ್! ಕನ್ನಡತಿ ಅನುಷ್ಕಾ ಶೆಟ್ಟಿ ವೃತ್ತಿಜೀವನದಲ್ಲಿ ಮೈಲಿಗಲ್ಲು ಮೂಡಿಸಿದ ಸಿನಿಮಾ ಅರುಂಧತಿ. ಆದರೆ, ತೆಲುಗಿನ ಬ್ಲಾಕ್ ಬಸ್ಟರ್ ಅಂಡ್ ಸೂಪರ್ ಹಿಟ್ ಹಾರರ್ ಸಿನಿಮಾ ಅರುಂಧತಿ ಸಿನಿಮಾಗೆ ನಟಿ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ. ಕಿಚ್ಚ ಸುದೀಪನ ಈ ಹೀರೋಯಿನ್ ಅರುಂಧತಿ ಸಿನಿಮಾ ತಿರಸ್ಕರಿಸಿ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದ್ದಾಳೆಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಕನ್ನಡತಿ ಅನುಷ್ಕಾ ಶೆಟ್ಟಿ ವೃತ್ತಿಜೀವನದಲ್ಲಿ ಮೈಲಿಗಲ್ಲು ಮೂಡಿಸಿದ ಸಿನಿಮಾ ಅರುಂಧತಿ. ಆದರೆ, ತೆಲುಗಿನ ಬ್ಲಾಕ್ ಬಸ್ಟರ್ ಅಂಡ್ ಸೂಪರ್ ಹಿಟ್ ಹಾರರ್ ಸಿನಿಮಾ ಅರುಂಧತಿ ಸಿನಿಮಾಗೆ ನಟಿ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ. ಕಿಚ್ಚ ಸುದೀಪನ ಈ ಹೀರೋಯಿನ್ ಅರುಂಧತಿ ಸಿನಿಮಾ ತಿರಸ್ಕರಿಸಿ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡಿದ್ದಾಳೆಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಮಂಗಳೂರು ಬೆಡಗಿ, ಕನ್ನಡತಿ ಅನುಷ್ಕಾ ಶೆಟ್ಟಿ ವೃತ್ತಿಜೀವನದಲ್ಲಿ ಅರುಂಧತಿ ಚಿತ್ರವು ಒಂದು ಮೈಲಿಗಲ್ಲು. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರವು ಸೂಪರ್ ಹಿಟ್ ಆಗಿತ್ತು. ಹಾರರ್ ಹಿನ್ನೆಲೆಯಲ್ಲಿ ಬಂದ ಈ ಚಿತ್ರದಲ್ಲಿ ಅನುಷ್ಕಾ ಮತ್ತು ಸೋನು ಸೂದ್ ಉತ್ತಮವಾಗಿ ನಟಿಸಿದ್ದಾರೆ. ಅನುಷ್ಕಾಳನ್ನು ನಿರ್ದೇಶಕ ಕೋಡಿ ರಾಮಕೃಷ್ಣ ಪವರ್‌ಫುಲ್ ಸೂಪರ್ ವುಮನ್ ಆಗಿ ತೋರಿಸಿದ್ದಾರೆ. ಈ ಚಿತ್ರದ ಮೂಲಕ ದೊಡ್ಡ ಮಟ್ಟದ ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಆದರೆ. ಅರುಂಧತಿ ಚಿತ್ರಕ್ಕೆ ಮೊದಲ ಆಯ್ಕೆ ಅನುಷ್ಕಾ ಶೆಟ್ಟಿ ಅಲ್ಲವಂತೆ. ಇದು ನಿಜಕ್ಕೂ ಶಾಕಿಂಗ್ ಎಂದೇ ಹೇಳಬಹುದು. ಏಕೆಂದರೆ ಇಷ್ಟೊಂದು ಪವರ್‌ಫುಲ್ ಸಿನಿಮಾಗೆ ಅನುಷ್ಕಾ ಬಿಟ್ಟು ಬೇರೆ ಹೀರೋಯಿನ್‌ ಆಯ್ಕೆ ಮಾಡಿದ್ದರೂ ಅದನ್ನು ಮಿಸ್ ಮಾಡಿಕೊಂಡವರು ಯಾರು ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ಆ ನಟಿ ಬೇರೆ ಯಾರೂ ಅಲ್ಲ... ನಟ ಕಿಚ್ಚ ಸುದೀಪನ ಗೂಳಿ ಸಿನಿಮಾದಲ್ಲಿ ನಟಿಸಿದ್ದ ಮಮತಾ ಮೋಹನ್ ದಾಸ್. ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಕೆಲವು ತಿಂಗಳುಗಳ ಕಾಲ ಮಮತಾ ಮೋಹನ್ ದಾಸ್ ಸಿನಿಮಾಗೆ ಡೇಟ್ ಕೊಡುವುದಕ್ಕಾಗಿ ಬೆನ್ನು ಬಿದ್ದು ಪ್ರಯತ್ನ ಮಾಡಿದ್ದರು. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಅರುಂಧತಿ ಎಂಬ ಸಿನಿಮಾ ಮಾಡುತ್ತಿದ್ದೇನೆ. ಅದರಲ್ಲಿ ನೀನೇ ಮುಖ್ಯ ನಟಿ ಎಂದು ಮಮತಾ ಮೋಹನ್ ದಾಸ್‌ಗೆ ಹೇಳಿದ್ದರು. ಇದಕ್ಕೆ ನಾನೂ ಒಪ್ಪಿಕೊಂಡಿದ್ದೆ ಎಂದು ಮಮತಾ ಅವರು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ, ಬಿಟ್ಟಿದ್ಯಾಕೆ ಗೊತ್ತಾ.? ಇಲ್ಲಿದೆ ಮಾಹಿತಿ.. ಮಮತಾ ಮೋಹನ್ ದಾಸ್ ಅವರು ಮಾತನಾಡುತ್ತಾ, ಮೊದಲು ನಾನು ಅರುಂಧತಿ ಚಿತ್ರಕ್ಕೆ ಒಪ್ಪಿಕೊಂಡೆ. ಆದರೆ, ಕೆಲವರು ಅದು ಒಳ್ಳೆಯ ನಿರ್ಮಾಣ ಸಂಸ್ಥೆಯಲ್ಲ. ಅವರ ಬಳಿ ಬಜೆಟ್ ಇಲ್ಲ ಎಂದು ನೆಗೆಟಿವ್ ಆಗಿ ಹೇಳಿದರು. ಇದರಿಂದ ಅವರ ಮಾತು ಕೇಳಿ ನಾನು ಆ ಚಿತ್ರದಿಂದ ಹೊರಬಂದೆನು. ಆದರೂ, ಶ್ಯಾಮ್ ಪ್ರಸಾದ್ ರೆಡ್ಡಿ ನನಗಾಗಿ ತುಂಬಾ ಪ್ರಯತ್ನಿಸಿದರು. ಆದರೆ ನಾನು ನಟಿಸಲು ಸಾಧ್ಯವಾಗಲ್ಲ ಎಂದು ಹೇಳಿದೆ. ಇದೇ ವೇಳೆಗೆ ಜ್ಯೂ.ಎನ್‌ಟಿಆರ್ ನಟನೆಯ ಯಮದೊಂಗ ಸಿನಿಮಾದ ಆಫರ್ ಬಂದಿತ್ತು ಎಂದು ತಿಳಿಸಿದರು. ಇದಾದ ವರ್ಷದ ನಂತರ ಯಮದೊಂಗ ಚಿತ್ರದಲ್ಲಿ ಅವಕಾಶ ಸಿಕ್ಕಿತು. ರಾಜಮೌಳಿ ಸರ್ ನನ್ನನ್ನು ಯಾವುದೋ ಸಿನಿಮಾದಲ್ಲಿ ನೋಡಿ ಆಯ್ಕೆ ಮಾಡಿದ್ದರು. ಆಡಿಷನ್‌ಗೆ ಹೋದರೆ ಫೈನಲ್ ಮಾಡಿದರು. ಆಗ ರಾಜಮೌಳಿ ಸರ್ ನನ್ನ ಜೊತೆ ಒಂದು ಮಾತು ಹೇಳಿದರು. ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಸಿನಿಮಾ ಯಾಕೆ ರಿಜೆಕ್ಟ್ ಮಾಡಿದ್ದೀರಿ ಎಂದು ಕೇಳಿದರು. ಅನೇಕರು ನೆಗೆಟಿವ್ ಆಗಿ ಹೇಳಿದ್ದಾರೆ ಎಂದು ಹೇಳಿದೆ. ನೀವು ತುಂಬಾ ದೊಡ್ಡ ತಪ್ಪು ಮಾಡಿದ್ದೀರಿ. ಗೋಲ್ಡನ್ ಅವಕಾಶವನ್ನು ಕಳೆದುಕೊಂಡಿದ್ದೀರಿ ಎಂದು ರಾಜಮೌಳಿ ಹೇಳಿದರು. ಅರುಂಧತಿ ಸಿನಿಮಾ ಬಿಡುಗಡೆಯಾದ ನಂತರ ನೋಡಿದರೆ ರಾಜಮೌಳಿ ಅವರು ಹೇಳಿದ್ದ ಮಾತು ಸತ್ಯ ಎನಿಸಿತು. ಆ ಚಿತ್ರದ ಮೂಲಕ ಅನುಷ್ಕಾ ವೃತ್ತಿಜೀವನವೇ ಬದಲಾಯಿತು. ಆ ಸಮಯದಲ್ಲಿ ನನಗೆ ಇಂಡಸ್ಟ್ರಿ ಬಗ್ಗೆ ಏನೂ ತಿಳಿದಿರಲಿಲ್ಲ. ಅದಕ್ಕೆ ಅಕ್ಕ ಪಕ್ಕದವರು ಹೇಳಿದ್ದನ್ನು ಕೇಳಿ ಅರುಂಧತಿ ಚಿತ್ರವನ್ನು ಬಿಟ್ಟುಕೊಟ್ಟೆ ಎಂದು ಮಮತಾ ಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.