ಗುಜರಾತಿನ ಈ ಸಾವಿರಾರು ವರ್ಷ ಹಳೆಯ ಸೂರ್ಯ ದೇವಾಲಯದಲ್ಲಿ ಅಡಗಿವೆ ಬಾಹ್ಯಾಕಾಶದ ರಹಸ್ಯ 1000 ವರ್ಷಕ್ಕಿಂದ ಹಳೆಯದಾದ ಗುಜರಾತ್ನ ಮೊಧೇರಾದ ಈ ಸೂರ್ಯ ದೇವಾಲಯವು ಬಾಹ್ಯಾಕಾಶದ ರಹಸ್ಯಗಳನ್ನು ಮತ್ತು ಸೂರ್ಯ ಮತ್ತು ಭೂಮಿಯ ಸಂಬಂಧವನ್ನು ನಿಖರವಾಗಿ ತೋರಿಸುತ್ತದೆ. ಈ ದೇವಾಲಯವನ್ನು ನಿರ್ಮಿಸಲು ಬಳಸಿದ ವೈಜ್ಞಾನಿಕ ವಿಧಾನಗಳು ಇಂದಿನ ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟು ಮಾಡುತ್ತೆ. 1000 ವರ್ಷಕ್ಕಿಂದ ಹಳೆಯದಾದ ಗುಜರಾತ್ನ ಮೊಧೇರಾದ ಈ ಸೂರ್ಯ ದೇವಾಲಯವು ಬಾಹ್ಯಾಕಾಶದ ರಹಸ್ಯಗಳನ್ನು ಮತ್ತು ಸೂರ್ಯ ಮತ್ತು ಭೂಮಿಯ ಸಂಬಂಧವನ್ನು ನಿಖರವಾಗಿ ತೋರಿಸುತ್ತದೆ. ಈ ದೇವಾಲಯವನ್ನು ನಿರ್ಮಿಸಲು ಬಳಸಿದ ವೈಜ್ಞಾನಿಕ ವಿಧಾನಗಳು ಇಂದಿನ ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟು ಮಾಡುತ್ತೆ. ಭಾರತವು ಸಂಸ್ಕೃತಿ, ಕಲೆ ಮತ್ತು ವಿಜ್ಞಾನದ ಪರಂಪರೆಯಲ್ಲಿ ಎಷ್ಟು ಶ್ರೀಮಂತವಾಗಿದೆಯೆಂದರೆ, ವಿಶ್ವದ ಅನೇಕ ದೇಶಗಳ ವಿದ್ವಾಂಸರು ನಮ್ಮಿಂದ ಜ್ಞಾನವನ್ನು ಪಡೆದಿದ್ದಾರೆ. ಆದರೆ ಅನೇಕ ಬಾರಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ( ) ನೋಡುವಾಗ, ನಾವು ನಮ್ಮ ಪರಂಪರೆಯನ್ನು ಮರೆಯುತ್ತೇವೆ. ವಾಸ್ತುಶಿಲ್ಪಗಳು ಮತ್ತು ವಿಜ್ಞಾನದ ವಿಷಯಕ್ಕೆ ಬಂದಾಗ, ನಾವು ವಿದೇಶಗಲ್ಲಿನ ಅದ್ಭುತಗಳನ್ನೇ ಹೆಸರಿಸುತ್ತೇವೆ ಮತ್ತು ಅಲ್ಲಿನ ಕಟ್ಟಡಗಳನ್ನು ಮೆಚ್ಚುತ್ತೇವೆ. ಆದರೆ ಭೌತಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಷ್ಯ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಅಚ್ಚರಿಯ ಕಟ್ಟಗಳನ್ನು ಹೊಂದಿರುವ ಅದೆಷ್ಟೋ ತಾಣಗಳು ಭಾರತದಲ್ಲಿ ಇಂದಿಗೂ ಜನರಿಗೆ ತಿಳಿಯದೇ ಉಳಿದೆ ಎಂದು ನಿಮಗೆ ತಿಳಿದಿದೆಯೇ? ಭಾರತದಲ್ಲಿ ವಿಜ್ಞಾನಿಗಳನ್ನೇ ಬೆರಗುಗೊಳಿಸುವ ಒಂದು ತಾಣವಿದೆ. ಆ ಸ್ಥಳವು ವಾಸ್ತುಶಿಲ್ಪಿಗಳು ಮತ್ತು ವಿಜ್ಞಾನಿಗಳು ಇಬ್ಬರಿಗೂ ಅಚ್ಚರಿಯನ್ನು ನೀಡುತ್ತೆ. ಯಾಕಂದ್ರೆ ಯಾರಿಗೂ ಸಹ ಅದರ ರಹಸ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ದೇವಾಲಯವು ಮೊಧೇರಾದ ಸೂರ್ಯ ದೇವಾಲಯವಾಗಿದ್ದು ( ), ಇದು ಖಗೋಳ ವಿಜ್ಞಾನ ಮತ್ತು ಕಲಾತ್ಮಕ ಕೌಶಲ್ಯಕ್ಕೆ ಉದಾಹರಣೆಯಾಗಿದೆ. 1000 ವರ್ಷಗಳಷ್ಟು ಹಳೆಯದಾದ ಗುಜರಾತ್ ನ ಮೊಧೇರಾದ ( ) ಈ ಸೂರ್ಯ ದೇವಾಲಯವು ಬಾಹ್ಯಾಕಾಶ ಮತ್ತು ಸೂರ್ಯ-ಭೂಮಿಯ ಸಂಬಂಧದ ರಹಸ್ಯಗಳನ್ನು ನಿಖರವಾಗಿ ತೋರಿಸುತ್ತದೆ. ಈ ದೇವಾಲಯದ ನಿರ್ಮಾಣದಲ್ಲಿ ಬಳಸಲಾದ ವೈಜ್ಞಾನಿಕ ವಿಧಾನಗಳು ಇಂದಿನ ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸುತ್ತವೆ. ವರ್ಷದ 2 ದಿನ ಮಾತ್ರ ಸೂರ್ಯನ ಕಿರಣ ಬೀಳುತ್ತೆ:ಪಟಾನ್ ಜಿಲ್ಲೆಯಲ್ಲಿ ನಿರ್ಮಿಸಲಾದ ಮೊಧೇರಾದ ಈ ಸೂರ್ಯ ದೇವಾಲಯವು ಪುಷ್ಪಾವತಿ ನದಿಯ ದಡದಲ್ಲಿದೆ. ಇದನ್ನು 1026 ರಲ್ಲಿ ಸೋಲಂಕಿ ರಾಜವಂಶದ ರಾಜ ಒಂದನೇ ಭೀಮದೇವ್ ನಿರ್ಮಿಸಿದನು. ಈ ದೇವಾಲಯದ ಗರ್ಭಗುಡಿಗೆ, ಸೂರ್ಯನು ( ) ವರ್ಷದಲ್ಲಿ ಕೇವಲ 2 ದಿನ ಮಾತ್ರ ತಲುಪುತ್ತಾನೆ. ಸೌರವ್ಯೂಹದ ಕೇಂದ್ರವಾದ ಸೂರ್ಯನಿಗೆ ಸಮರ್ಪಿತವಾದ ಈ ದೇವಾಲಯದ ಗರ್ಭಗುಡಿಗೆ ಬೇಸಿಗೆಯ ಅಯನ ಸಂಕ್ರಾಂತಿ ಮತ್ತು ಸೌರ ವಿಷುವತ್ ಸಂಕ್ರಾಂತಿಯ ದಿನದಂದು ಮಾತ್ರ ಸೂರ್ಯನ ಕಿರಣಗಳು ತಲುಪುವುದು ಅಚ್ಚರಿಯೇ ಸರಿ. ಜೂನ್ 21 ಉತ್ತರ ಗೋಳಾರ್ಧದಲ್ಲಿ ಅತಿ ಉದ್ದದ ದಿನವಾಗಿದೆ, ಇದನ್ನು ತಾಂತ್ರಿಕವಾಗಿ ಬೇಸಿಗೆ ಅಯನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೌರ ವಿಷುವತ್ ಸಂಕ್ರಾಂತಿಯ ಸಮಯದಲ್ಲಿ, ಸೂರ್ಯನು ನೇರವಾಗಿ ಸಮಭಾಜಕ ರೇಖೆಯಲ್ಲಿರುತ್ತಾನೆ. ಅಂದರೆ, ಒಬ್ಬ ವ್ಯಕ್ತಿಯು ಸಮಭಾಜಕ ವೃತ್ತದಲ್ಲಿ ನಿಂತಿದ್ದರೆ, ಸೂರ್ಯನು ನೇರವಾಗಿ ಅವನ ತಲೆಯ ಮೇಲೆ ಕಾಣಿಸಿಕೊಳ್ಳುತ್ತಾನೆ. ವರ್ಷದ ಈ ದಿನದಂದು ಅರ್ಧದಷ್ಟು ಗ್ರಹವು ಸಂಪೂರ್ಣವಾಗಿ ಪ್ರಕಾಶಿಸುತ್ತದೆ ಮತ್ತು ಈ ಸಮಯದಲ್ಲಿ ಹಗಲು ಮತ್ತು ರಾತ್ರಿ ಬಹುತೇಕ ಸಮಾನವಾಗಿರುತ್ತದೆ ಎಂಬ ರೀತಿಯಲ್ಲಿಯೂ ಇದನ್ನು ಅರ್ಥಮಾಡಿಕೊಳ್ಳಬಹುದು. ಸೂರ್ಯನ ಬೆಳಕಿನಿಂದ ವಜ್ರವು ಹೊಳೆಯುತ್ತದೆ:ಈ ದೇವಾಲಯದ ಗರ್ಭಗುಡಿಯಲ್ಲಿ, ಸೂರ್ಯನ ಮೊದಲ ಕಿರಣ ಬೀಳುವ ಸ್ಥಳದಲ್ಲಿ, ಸೂರ್ಯ ದೇವರ ಚಿನ್ನದ ಪ್ರತಿಮೆ ( )ಇತ್ತು ಎಂದು ಹೇಳಲಾಗುತ್ತದೆ. ಈ ಪ್ರತಿಮೆಯ ಕಿರೀಟದ ಮೇಲೆ ಕೆಂಪು ವಜ್ರದ ಮೇಲೆ ಸೂರ್ಯನ ಬೆಳಕು ಬಿದ್ದಾಗ, ಇಡೀ ಗರ್ಭಗುಡಿ ಹೊಳೆಯುತ್ತಿತ್ತು. ಆದರೆ ಈಗ ಈ ವಿಗ್ರಹವು ಈ ದೇವಾಲಯದಲ್ಲಿಲ್ಲ. ಜ್ಯೋತಿಷ್ಯ, ಬಾಹ್ಯಾಕಾಶ ಮತ್ತು ಭೌತಶಾಸ್ತ್ರದ ವಿಸ್ಮಯ:ಈ ದೇವಾಲಯದ ಸಭಾಂಗಣದಲ್ಲಿ ಒಟ್ಟು 52 ಸ್ತಂಭಗಳಿವೆ. ಈ 52 ಅಂಕಣಗಳು ವರ್ಷದ 52 ವಾರಗಳನ್ನು ಪ್ರತಿನಿಧಿಸುತ್ತವೆ. ಈ ಸ್ತಂಭಗಳ ಮೇಲೆ ವಿವಿಧ ದೇವರುಗಳು ಮತ್ತು ದೇವತೆಗಳ ಚಿತ್ರಗಳಲ್ಲದೆ, ರಾಮಾಯಣ ಮತ್ತು ಮಹಾಭಾರತದ ( ) ಪ್ರಸಂಗಗಳನ್ನು ಸಹ ಸುಂದರವಾಗಿ ಕೆತ್ತಲಾಗಿದೆ. ಇದನ್ನು ಅತ್ಯುತ್ತಮ ವಾಸ್ತುಶಿಲ್ಪಿಯ ಮಾದರಿ ಎಂದು ಕರೆಯಲಾಗುತ್ತದೆ. ನೀವು ಈ ಸ್ತಂಭಗಳನ್ನು ಮುಂಭಾಗದಿಂದ ನೋಡಿದಾಗ, ಅವು ಅಷ್ಟಭುಜಾಕೃತಿಯಂತೆ ಕಾಣುತ್ತವೆ, ಆದರೆ ಮೇಲಿನಿಂದ ನೋಡಿದಾಗ, ಅವೆಲ್ಲವೂ ದುಂಡಗಿರುವಂತೆ ಕಾಣುತ್ತವೆ. ಮತ್ತೊಂದು ಅಚ್ಚರಿ ಎಂದರೆ ಈ ಮಂದಿರ ನಿರ್ಮಾಣದಲ್ಲಿ ಸ್ಥಂಭಗಳನ್ನು ಜೋಡಿಸಲು ಎಲ್ಲಿಯೂ ಸುಣ್ಣವನ್ನು ಬಳಸಲಾಗಿಲ್ಲ. ಸೂರ್ಯಕುಂಡದಲ್ಲಿ, 12 ರಾಶಿಚಕ್ರ ಚಿಹ್ನೆಗಳು ಮತ್ತು 9 ನಕ್ಷತ್ರಪುಂಜಗಳನ್ನು ಗುಣಿಸುವ ಮೂಲಕ ಒಟ್ಟು 108 ದೇವಾಲಯಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ವಿಜ್ಞಾನಕ್ಕೂ ನಿಲುಕದ ಅಚ್ಚರಿಯಾಗಿದೆ.