ಮಾಸ್ಟರ್ ಚೆಫ್‌ ಇಂಡಿಯಾದಲ್ಲಿ ಇಬ್ಬರು ಕನ್ನಡಿಗರ ಕಾದಾಟ, ಗೆಲ್ಲೋರು ಯಾರು? ಮಾಸ್ಟರ್ ಚೆಪ್ ಇಂಡಿಯಾ ಫೈನಲ್ ಹಂತ ತಲುಪಿದ್ದು, ಜನರು ಯಾರಾಗಬಹುದು ವಿನ್ನರ್ ಎಂದು ಕಾಯುತ್ತಿದ್ದಾರೆ. ಈ ಬಾರಿ ಸ್ಪರ್ಧೆಯ ವಿಶೇಷತೆಯೆಂದರೆ ನಮ್ಮ ಕನ್ನಡ ನಾಡಿನ ಇಬ್ಬರು ವ್ಯಕ್ತಿಗಳು ಟಾಪ್ 5 ರಲ್ಲಿ ಅಂದರೆ ಫೈನಲ್ ರೌಂಡ್ ಗೆ ಆಯ್ಕೆಯಾಗಿದ್ದಾರೆ. ಮಾಸ್ಟರ್ ಚೆಪ್ ಇಂಡಿಯಾ ಫೈನಲ್ ಹಂತ ತಲುಪಿದ್ದು, ಜನರು ಯಾರಾಗಬಹುದು ವಿನ್ನರ್ ಎಂದು ಕಾಯುತ್ತಿದ್ದಾರೆ. ಈ ಬಾರಿ ಸ್ಪರ್ಧೆಯ ವಿಶೇಷತೆಯೆಂದರೆ ನಮ್ಮ ಕನ್ನಡ ನಾಡಿನ ಇಬ್ಬರು ವ್ಯಕ್ತಿಗಳು ಟಾಪ್ 5 ರಲ್ಲಿ ಅಂದರೆ ಫೈನಲ್ ರೌಂಡ್ ಗೆ ಆಯ್ಕೆಯಾಗಿದ್ದಾರೆ. ಮಾಸ್ಟರ್ ಚೆಫ್ ಇಂಡಿಯಾ ( ) ಭಾರತದ ನಂಬರ್ ಒನ್ ಅಡುಗೆ ರಿಯಾಲಿಟಿ ಶೋ. ದೇಶಾದ್ಯಂತದ ವಿವಿಧ ಜನರು ಭಾಗವಹಿಸಿ ತಮ್ಮ ಕುಕ್ಕಿಂಗ್ ಟ್ಯಾಲೆಂಟ್ ( ) ಪ್ರದರ್ಶಿಸುವುದರಿಂದ ಪ್ರೇಕ್ಷಕರು ಇದನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿರುತ್ತಾರೆ. ಕಳೆದ ಬಾರಿ, ಈ ಕಾರ್ಯಕ್ರಮವು ಸೋನಿ ಟೆಲಿವಿಷನ್ ಎಂಬ ಹೊಸ ಚಾನೆಲ್‌ನಲ್ಲಿ ಪ್ರಸಾರವಾಗಿ ಬಹಳ ಯಶಸ್ಸು ಪಡೆದಿತ್ತು. ಕಳೆದ ಬಾರಿ ವಿಕಾಸ್ ಖನ್ನಾ, ರಣವೀರ್ ಬ್ರಾರ್ ಮತ್ತು ಗರಿಮಾ ಅರೋರಾ ತೀರ್ಪುಗಾರರಾಗಿದ್ದರು ಮತ್ತು ನಯನಜ್ಯೋತಿ ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದರು. ಹೊಸ ಸೀಸನ್ ಸೋನಿ ಲೈವ್‌ನಲ್ಲಿ ( ) ಪ್ರಾರಂಭವಾಗಿದೆ ಮತ್ತು ಸ್ಪರ್ಧಿಗಳು ಸಾಕಷ್ಟು ಪ್ರತಿಭಾವಂತರಾಗಿರುವುದರಿಂದ ಪ್ರೇಕ್ಷಕರು ಯಾರನ್ನು ಮಾಸ್ಟರ್ ಚೆಫ್ ವಿನ್ನರ್ ಆಗುವರು ಎನ್ನುವ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸೀಸನ್ ನ ತೀರ್ಪುಗಾರರಾಗಿ ವಿಕಾಸ್ ಖನ್ನಾ, ರಣವೀರ್ ಬ್ರಾರ್ ಮತ್ತು ಪೂಜಾ ಧಿಂಗ್ರಾ ಕಾಣಿಸಿಕೊಂಡಿದ್ದಾರೆ. ಇದೀಗ ಈ ಕಾರ್ಯಕ್ರಮ ಫೈನಲ್ ಹಂತ ತಲುಪಿದ್ದು, ಕರ್ನಾಟಕದ ಇಬ್ಬರು ಟಾಪ್ 5ರಲ್ಲಿ ಸ್ಥಾನ ಪದೆದಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷ್ಯವಾಗಿದೆ. ಕಳೆದ ಸಂಚಿಕೆಯಲ್ಲಿ, ಕೃತಿ ಧಿಮನ್ ಶೋನಿಂದ ಹೇಗೆ ಎಲಿಮಿನೇಟ್ ಆಗಿದರು ಮತ್ತು ಅಂತಿಮವಾಗಿ, ಸೀಸನ್ ಕಾರ್ಯಕ್ರಮದ ಅಂತಿಮ 5 ಸ್ಪರ್ಧಿಯನ್ನು ಪಡೆಯಿತು. ಈ ಐದು ಸ್ಪರ್ಧಿಗಳಲ್ಲಿ ಇಬ್ಬರು ಕರ್ನಾಟಕದವರೇ ಆಗಿದ್ದಾರೆ. ಟಾಪ್ 5ರಲ್ಲಿ ಪಶ್ಚಿಮ ಬಂಗಾಲದ ಸೂರಜ್ ಥಾಪಾ, ಜಮ್ಮು ಕಾಶ್ಮೀರದ ಡಾ.ರುಕ್ಸಾರ್ ಸಯೀದ್, ಮೇಘಾಲಯದ ನಂಬಿ ಮರಕ್, ಮಂಗಳೂರಿನ ಮೊಹಮ್ಮದ್ ಆಶಿಕ್ ಮತ್ತು ಬೆಂಗಳೂರಿನ ಹರೀಶ್ ಕ್ಲೋಸ್ಪೆಟ್ ಈ ಕಾರ್ಯಕ್ರಮದ ಅಂತಿಮ ಸ್ಪರ್ಧಿಗಳು. ಈಗ, ಈ ಐದು ಜನ ಮತ್ತಷ್ಟು ಕಠಿಣ ಸ್ಪರ್ಧೆಗಳನ್ನು ಎದುರಿಸಿ, ಗೆಲ್ಲಬೇಕಾಗಿದೆ. ಮತ್ತು ಉತ್ತಮವಾಗಿ ಕುಕ್ ಮಾಡುವ ಅಗ್ರ ಎರಡು ಸ್ಪರ್ಧಿಗಳು ಟಾಪ್ 2 ನಲ್ಲಿ ಸ್ಥಾನ ಪಡೆಯುತ್ತಾರೆ. ಮತ್ತು ಅವರಲ್ಲಿ ಒಬ್ಬರನ್ನು ಕಾರ್ಯಕ್ರಮದ ವಿಜೇತರೆಂದು ಘೋಷಿಸಲಾಗುತ್ತದೆ. ಈ ಸೀಸನ್ ಸ್ಪರ್ಧಿಗಳು ಪ್ರತಿಭಾವಂತರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ತೀರ್ಪುಗಾರರಿಗೆ ತೀರ್ಪು ನೀಡುವುದು ಕಷ್ಟವಾಗುತ್ತಿದೆ. ಮಂಗಳೂರಿನ ಆಶಿಕ್ ಹಲವಾರು ಬಾರಿ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ. ನಿಮ್ಮ ಪ್ರಕಾರ ಪ್ರದರ್ಶನದ ವಿಜೇತರು ಯಾರು?