ಬೆಂಗಳೂರಲ್ಲಿ ಆಟೋ ಓಡಿಸ್ತಾರೆ ಈ ಕಂಪನಿಯ ಉನ್ನತ ಅಧಿಕಾರಿ, ಐಐಎಂ ಪದವೀಧರ! ಹಾಗೂ ಆಟೋ ಅಪ್ಲಿಕೇಶನ್ (ನಮ್ಮ ಯಾತ್ರಿ) ಎರಡರಲ್ಲೂ ಕೆಲಸ ಮಾಡುವ ಅಧಿಕಾರಿಯೊಬ್ಬರು ಉಬರ್ ಆಟೋ ಚಾಲಕರೂ ಆಗಿದ್ದಾರೆ ಎಂಬುದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಬೆಂಗಳೂರು (ಅಕ್ಟೋಬರ್ 13, 2023):ಟ್ಯಾಕ್ಸಿ ಡ್ರೈವರ್‌ಗಳು ಎಂಜಿನಿಯರ್‌ ದುಡಿಯೋ ಸಂಬಳಕ್ಕಿಂತ ಹೆಚ್ಚಾಗಿ ದುಡೀತಾರೆ ಎಂಬ ವರದಿಯೊಂದು ಇತ್ತೀಚೆಗೆ ಬಂದಿತ್ತು. ಈಗ ಐಐಎಂ ಬೆಂಗಳೂರು ಪದವೀಧರ ಹಾಗೂ ಕಂಪನಿಯೊಂದರಲ್ಲಿ ಮುಖ್ಯ ಬೆಳವಣಿಗೆ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ಆಟೋ ಡ್ರೈವರ್‌ ಆಗಿರುವುದು ವೈರಲ್‌ ಆಗಿದೆ. ಒಬ್ಬ ವ್ಯಕ್ತಿ ತನ್ನ ಉಬರ್ ಆಟೋ ಡ್ರೈವರ್‌ ಅನ್ನು ಭೇಟಿ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಮತ್ತೊಂದು 'ಪೀಕ್ ಬೆಂಗಳೂರು' ಕ್ಷಣ ಎನ್ನಲಾಗ್ತಿದೆ. ನಲ್ಲಿ ಸಹ-ಸಂಸ್ಥಾಪಕರಾದ ಮನಸ್ವಿ ಸಕ್ಸೇನಾ ಅವರು ಆಟೋದಲ್ಲಿ ಹೋಗ್ತಿದ್ದಾಗ ಅವರಿಗೆ ದೊರೆತ ಆಟೋ ಚಾಲಕ ಅಪ್ಲಿಕೇಶನ್ ಹಾಗೂ ಆಟೋ ಅಪ್ಲಿಕೇಶನ್ (ನಮ್ಮ ಯಾತ್ರಿ) ಎರಡರಲ್ಲೂ ಉಬರ್ ಚಾಲಕ ಕೆಲಸ ಮಾಡ್ತಿದ್ದಾರೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಪಾವತಿ ಅಪ್ಲಿಕೇಶನ್‌ ನಮ್ಮ ಯಾತ್ರಿ ಕಂಪನಿಯನ್ನು ನಡೆಸುತ್ತಿದೆ. ಇದನ್ನು ಓದಿ:ರಾಷ್ಟ್ರ ರಾಜಧಾನಿಗೆ ಕಾಲಿಟ್ಟ ಭೂತ ಸನ್ಯಾಸಿನಿ: ಜನರನ್ನು ಆತಂಕಕ್ಕೀಡುಮಾಡಿದ ವೈರಲ್‌ ವಿಡಿಯೋ! ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮನಸ್ವಿ ಸಕ್ಸೇನಾ, "ಇಂದು ರಾತ್ರಿ ನನ್ನ ಉಬರ್ ಆಟೋ ಡ್ರೈವರ್ ಯಲ್ಲಿ ಮುಖ್ಯ ಬೆಳವಣಿಗೆ ಅಧಿಕಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನಮ್ಮ ಯಾತ್ರಿ ಅಪ್ಲಿಕೇಷನ್‌ನಲ್ಲಿ ಇವರು ಬಳಕೆದಾರರ ಸಂಶೋಧನೆ ಮಾಡುತ್ತಿದ್ದಾರೆ. ಇದು 'ಪೀಕ್ ಬೆಂಗಳೂರು' ಅಲ್ಲದಿದ್ದರೆ ಇನ್ನೇನು’’ ಎಂದು ಅವರು ಬರೆದುಕೊಂಡಿದ್ದಾರೆ. ನಂತರದ ಟ್ವೀಟ್‌ನಲ್ಲಿ ಅವರು "ಆಸಕ್ತಿದಾಯಕ ಭಾಗವೆಂದರೆ ನಾನು ಇಂದು @momoney_in ನಲ್ಲಿ ಬಳಕೆದಾರರ ಕರೆಗಳನ್ನು ಹೇಗೆ ತೆಗೆದುಕೊಳ್ಳುವುದು ಎಂಬುದರ ಕುರಿತು ಡಾಕ್ಯುಮೆಂಟ್‌ ಬರೆದಿದ್ದೇನೆ ಮತ್ತು ಅದೇ ದಿನ ಈ ಅನುಭವವಾಗಿದೆ’’ ಎಂದೂ ಮನಸ್ವಿ ಸಕ್ಸೇನಾ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ:ಅಮೆರಿಕದ ಕನಸಿಗಿಂತ ಭಾರತ, ಕುಟುಂಬಕ್ಕೆ ಆದ್ಯತೆ ನೀಡಿದ ಬೆಂಗಳೂರು ಟೆಕ್ಕಿ: ಎಂಜಿನಿಯರ್ ಕೊಟ್ಟ ಕಾರಣಗಳು ಹೀಗಿವೆ.. "ಇದು ಯಾವುದೇ ನಿರ್ದಿಷ್ಟ ಪ್ರಶ್ನೆಯಲ್ಲ, ಆದರೆ ಸಂಪೂರ್ಣ ಸಂಭಾಷಣೆಯ ಹರಿವು. ಇದು ಬಳಕೆದಾರರ ಸಂದರ್ಶನದಂತೆ ಭಾಸವಾಗಲಿಲ್ಲ, ಆದರೆ ಸಾಂದರ್ಭಿಕ ಚಿಟ್ ಚಾಟ್ ರೀತಿ ಇತ್ತು. ಅವರು ಎಲ್ಲಾ ಸರಿಯಾದ ಪ್ರಶ್ನೆಗಳನ್ನು ಕೇಳಿದರು’’ ಎಂದೂ ಅವರು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಬರೆದುಕೊಂಡಿದ್ದಾರೆ.ಲಿಂಕ್ಡ್‌ಇನ್ ಪ್ರಕಾರ, ಶಾನ್ ಎಂ. ಎಸ್‌. ಎಂದು ಗುರುತಿಸಲಾದ ಆಟೋ ಚಾಲಕ ಐಐಎಂ ಬೆಂಗಳೂರು ಪದವೀಧರನಾಗಿದ್ದು, ಕಳೆದ 2 ವರ್ಷಗಳಿಂದ Juspayಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. " ನಲ್ಲಿ, ಪ್ರಮುಖ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಬ್ಯುಸಿನೆಸ್‌ ಅನ್ನು ಮುಕ್ತ, ವೇಗ, ವಿಶ್ವಾಸಾರ್ಹ ಮತ್ತು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಮುನ್ನಡೆಸುತ್ತಾರೆ. ನಮ್ಮಯಾತ್ರಿಯನ್ನು ನಿರ್ಮಿಸುವುದು, ಚಾಲಕರನ್ನು ಸಬಲೀಕರಣಗೊಳಿಸಲು ಮತ್ತು ಸುಸ್ಥಿರ ನಗರ ಚಲನಶೀಲತೆಯನ್ನು ರಚಿಸಲು ಮುಕ್ತ ಚಲನಶೀಲ ಉಪಕ್ರಮವಾಗಿದೆ." ಎಂದು ಅವರ ಬಯೋ ಹೇಳುತ್ತದೆ. ಇದನ್ನೂ ಓದಿ:ಕಾರ್ಪೊರೇಟ್‌ ಲೈಫ್‌ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್‌ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ! ಅವರು , ., ಮತ್ತು ನೊಂದಿಗೂ ಕೆಲಸ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.