ಈ ಪುಣ್ಯ ಕ್ಷೇತ್ರದಲ್ಲಿ ಯಾವ ರಾಜಕಾರಣಿಯೂ ಉಳಿಯೋಲ್ಲ, ಬಿಎಸ್‌ವೈ ಉಳಿದದ್ದಕ್ಕೆ ಬೆಲೆ ತೆರಬೇಕಾಯ್ತಾ? ಸಾಮಾನ್ಯ ಭಕ್ತರಿಂದ ಹಿಡಿದು ದೊಡ್ಡ ರಾಜಕೀಯ ವ್ಯಕ್ತಿಗಳವರೆಗೆ ಹಲವಾರು ಜನ ಉಜ್ಜಯಿನಿಯ ಬಾಬಾ ಮಹಾಕಾಲ ಮಂದಿರಕ್ಕೆ ಪೂಜೆ ಸಲ್ಲಿಸಲು ಹೋಗುತ್ತಾರೆ. ಆದರೆ ಉಜ್ಜಯಿನಿಯಲ್ಲಿ ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳು ರಾತ್ರಿ ತಂಗಲು ಸಾಧ್ಯವಿಲ್ಲ. ಇಲ್ಲಿ ರಾತ್ರಿ ಕಳೆಯುವ ಯಾವುದೇ ನಾಯಕನು ಅಧಿಕಾರದಿಂದ ತನ್ನ ಕುರ್ಚಿಯನ್ನು ಕಳೆದುಕೊಳ್ಳುತ್ತಾನೆ ಎಂದು ನಂಬಲಾಗಿದೆ. ಈ ಕುತೂಹಲಕಾರಿ ವಿಷಯದ ಬಗ್ಗೆ ತಿಳಿಯೋಣ. ಸಾಮಾನ್ಯ ಭಕ್ತರಿಂದ ಹಿಡಿದು ದೊಡ್ಡ ರಾಜಕೀಯ ವ್ಯಕ್ತಿಗಳವರೆಗೆ ಹಲವಾರು ಜನ ಉಜ್ಜಯಿನಿಯ ಬಾಬಾ ಮಹಾಕಾಲ ಮಂದಿರಕ್ಕೆ ಪೂಜೆ ಸಲ್ಲಿಸಲು ಹೋಗುತ್ತಾರೆ. ಆದರೆ ಉಜ್ಜಯಿನಿಯಲ್ಲಿ ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳು ರಾತ್ರಿ ತಂಗಲು ಸಾಧ್ಯವಿಲ್ಲ. ಇಲ್ಲಿ ರಾತ್ರಿ ಕಳೆಯುವ ಯಾವುದೇ ನಾಯಕನು ಅಧಿಕಾರದಿಂದ ತನ್ನ ಕುರ್ಚಿಯನ್ನು ಕಳೆದುಕೊಳ್ಳುತ್ತಾನೆ ಎಂದು ನಂಬಲಾಗಿದೆ. ಈ ಕುತೂಹಲಕಾರಿ ವಿಷಯದ ಬಗ್ಗೆ ತಿಳಿಯೋಣ. ದೇಶದ ದೊಡ್ಡ ವ್ಯಕ್ತಿಗಳಿಂದ ಹಿಡಿದು ರಾಜಕೀಯದಲ್ಲಿ ಉನ್ನತ ಹುದ್ದೆ ಹೊಂದಿರುವ ಮಂತ್ರಿಗಳವರೆಗೆ, ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಉಜ್ಜಯಿನಿಯಲ್ಲಿರುವ ಬಾಬಾ ಮಹಾಕಾಲ ಮಂದಿರಕ್ಕೆ ಭೇಟಿ ನೀಡಿ ಪೂಜಿಸುವುದು ಸಾಮಾನ್ಯ. ಆದರೆ ಉಜ್ಜೈನಿಯಲ್ಲಿರುವ ಬಾಬಾ ಮಹಾಕಾಲ್ ( ) ಗೆ ಭೇಟಿ ನೀಡಿದ ನಂತರ, ಯಾವುದೇ ದೊಡ್ಡ ನಾಯಕ ಇಲ್ಲಿ ರಾತ್ರಿ ಕಳೆಯುವುದಿಲ್ಲ ಅನ್ನೋ ವಿಷಯದ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ಉಜ್ಜಯಿನಿಯಲ್ಲಿ () ರಾತ್ರಿಯಲ್ಲಿ ಯಾವ ರಾಜಕಾರಣಿ ಉಳಿದುಕೊಳ್ಳುತ್ತಾರೋ . ಆ ನಾಯಕ ಮತ್ತೆ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಪ್ರತಿಯೊಬ್ಬ ಸಚಿವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಯಾರೂ ಸಹ ಬಾಬಾ ಮಹಾಕಾಲ ಮಂದಿರ ಅಥವಾ ಆ ಊರಿನಲ್ಲಿ ರಾತ್ರಿ ಕಳೆಯಲು ಹೆದರುತ್ತಾರೆ. ಇದರ ಹಿಂದಿನ ರಹಸ್ಯವೇನು ಎಂದು ತಿಳಿಯೋಣ. ಈ ದೇಗುಲದ ವಿಶೇಷತೆ ಏನು?ಬಾಬಾ ಮಹಾಕಾಲನ ನಗರವಾದ ಉಜ್ಜಯಿನಿಯಲ್ಲಿ, ಯಾವ ರಾಜಕಾರಣಿ ಸಹ ರಾತ್ರಿ ಹೊತ್ತು ಉಳಿಯೋದಿಲ್ಲ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ವಾಸ್ತವವಾಗಿ, ಬಾಬಾ ಮಹಾಕಾಲನನ್ನು ಉಜ್ಜಯಿನಿಯ ರಾಜ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಬಾಬಾ ಮಹಾಕಾಲನ ಆಸ್ಥಾನದಲ್ಲಿ ಇಬ್ಬರು ರಾಜರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. ಸಚಿವರು ಅಥವಾ ಮುಖ್ಯಮಂತ್ರಿ ಅಪ್ಪಿ ತಪ್ಪಿ ಇಲ್ಲಿ ರಾತ್ರಿ ಕಳೆದರೆ, ಅವರು ಅಧಿಕಾರಕ್ಕೆ ಮರಳುವುದು ಕಷ್ಟ. ಯಾರೆಲ್ಲಾ ಇಲ್ಲಿ ಬಂದು ತೊಂದರೆ ಅನುಭವಿಸಿದ್ದಾರೆ ಗೊತ್ತಾ?ಸಾಂಪ್ರದಾಯಿಕ ಪುರಾಣದ ಪ್ರಕಾರ, ಬಾಬಾ ಮಹಾಕಾಳನ ಆಸ್ಥಾನದಲ್ಲಿ ರಾತ್ರಿ ಕಳೆಯುವ ಯಾವುದೇ ನಾಯಕ ಅಥವಾ ಮಂತ್ರಿ ತನ್ನ ಕುರ್ಚಿಯನ್ನು ಕಳೆದುಕೊಳ್ಳುತ್ತಾನೆ. ಭಾರತದ ನಾಲ್ಕನೇ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಒಂದು ರಾತ್ರಿ ಉಜ್ಜಯಿನಿಯಲ್ಲಿ ತಂಗಿದ್ದರು ಮತ್ತು ಮರುದಿನ ಅವರ ಸರ್ಕಾರ ಪತನಗೊಂಡಿತು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ( ) ಅವರು ಉಜ್ಜಯಿನಿಯಲ್ಲಿ ರಾತ್ರಿ ಕಳೆದಿದ್ದರು, ಇದಾಗಿ 20 ದಿನಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಮಾನ್ಯತೆ ಎಷ್ಟು ಸಮಯದಿಂದ ಇದೆ?ರಾಜ ವಿಕ್ರಮಾದಿತ್ಯನ () ಕಾಲದಲ್ಲಿ ಉಜ್ಜಯಿನಿ ರಾಜ್ಯದ ರಾಜಧಾನಿಯಾಗಿತ್ತು. ದೇವಾಲಯ ಮತ್ತು ಸಿಂಹಾಸನಕ್ಕೆ ಸಂಬಂಧಿಸಿದ ರಹಸ್ಯದ ಪ್ರಕಾರ, ರಾಜ ಭೋಜನ ಕಾಲದಿಂದ ಉಜ್ಜಯಿನಿಯಲ್ಲಿ ಯಾವುದೇ ರಾಜನು ರಾತ್ರಿಯಲ್ಲಿ ಉಳಿದಿಲ್ಲ ಎನ್ನಲಾಗಿದೆ. ದೇವಾಲಯದ ಇತಿಹಾಸವೇನು ಎಂದು ತಿಳಿಯಿರಿಪೌರಾಣಿಕ ನಂಬಿಕೆಯ ಪ್ರಕಾರ, ದುಶಾನ್ ಎಂಬ ರಾಕ್ಷಸನ ಭಯವು ಉಜ್ಜಯಿನಿಯಲ್ಲಿ ಹರಡಿತು. ಜನರು ಅವನಿಂದ ತೊಂದರೆಗೀಡಾದರು ಮತ್ತು ರಕ್ಷಣೆಗಾಗಿ ಶಿವನನ್ನು ಪೂಜಿಸಲು ಪ್ರಾರಂಭಿಸಿದರು. ಅದರ ನಂತರ ಶಿವನು ಮಹಾಕಾಲನ ರೂಪದಲ್ಲಿ ಕಾಣಿಸಿಕೊಂಡು ದುಶಾನ್ ಎಂಬ ರಾಕ್ಷಸನನ್ನು ಕೊಂದನು. ರಾಕ್ಷಸನನ್ನು ತೊಡೆದುಹಾಕಿದ ನಂತರ, ಜನರು ಮಹಾಕಾಳನಿಗೆ ಉಜ್ಜಯಿನಿಯಲ್ಲಿ ವಾಸಿಸಲು ಬೇಡಿಕೊಂಡರು, ನಂತರ ಶಿವನು ಜ್ಯೋತಿರ್ಲಿಂಗದ ರೂಪದಲ್ಲಿ ಇಲ್ಲಿ ನೆಲೆಯಾದನು ಎನ್ನಲಾಗಿದೆ. . ದೇವಾಲಯವನ್ನು ಯಾವಾಗ ನಿರ್ಮಿಸಲಾಗಿದೆ ಎಂದು ತಿಳಿಯಿರಿಉಜ್ಜೈನಿಯ ಬಾಬಾ ಮಹಾಕಾಲ್ ( ) ದೇವಾಲಯವನ್ನು 1736 ರಲ್ಲಿ ರಣಜಿರಾವ್ ಶಿಂಧೆ ನಿರ್ಮಿಸಿದರು. ಇದರ ನಂತರ, ಶ್ರೀನಾಥ್ ಮಹಾರಾಜ್ ಮಹದ್ಜಿ ಶಿಂಧೆ ಮತ್ತು ಮಹಾರಾಣಿ ಬೈಜಾಬಾಯಿ ಶಿಂಧೆ ಕಾಲಕಾಲಕ್ಕೆ ಈ ದೇವಾಲಯವನ್ನು ದುರಸ್ತಿ ಮಾಡಿ ಬದಲಾವಣೆ ಮಾಡಿದರು ಎನ್ನಲಾಗಿದೆ.