ಕೋಚಿಂಗ್ ಇಲ್ಲದೆ ಪಾಸ್ ಆಗಿರೋ ಐಐಟಿ ಹಳೆ ವಿದ್ಯಾರ್ಥಿ, ಸಾಧನೆಯೆ ಯಶೋಗಾಥೆ! ಯಾವುದೇ ಕೋಚಿಂಗ್ ಇಲ್ಲದೇನೆ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನಕ್ಕೆ ಪಾಸ್ ಆಗಿರುವ ಅಧಿಕಾರಿ ತೇಜಸ್ವಿ ರಾಣಾ ಅವರ ಯಶಸ್ಸಿನ ಕಥೆಯನ್ನು ನೀವು ಕೇಳಲೇ ಬೇಕು. ಇಲ್ಲಿದೆ ನೋಡಿ ಪ್ರೇರಣೆ ನೀಡುವ ಐಎಎಸ್ ಅಧಿಕಾರಿಯ ಕಥೆ. ಯಾವುದೇ ಕೋಚಿಂಗ್ ಇಲ್ಲದೇನೆ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನಕ್ಕೆ ಪಾಸ್ ಆಗಿರುವ ಅಧಿಕಾರಿ ತೇಜಸ್ವಿ ರಾಣಾ ಅವರ ಯಶಸ್ಸಿನ ಕಥೆಯನ್ನು ನೀವು ಕೇಳಲೇ ಬೇಕು. ಇಲ್ಲಿದೆ ನೋಡಿ ಪ್ರೇರಣೆ ನೀಡುವ ಐಎಎಸ್ ಅಧಿಕಾರಿಯ ಕಥೆ. ಭಾರತೀಯ ಐಎಎಸ್ ಅಧಿಕಾರಿಯಾಗಲು ( ) ಯುಪಿಎಸ್ಸಿ ಎಂಬ ಕಠಿಣ ಪರೀಕ್ಷೆ ಪಾಸ್ ಆಗಲೇಬೇಕು. ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಒಬ್ಬ ವ್ಯಕ್ತಿಯು ಹಲವಾರು ಗಂಟೆಗಳ ಕಾಲ ಬಿಟ್ಟೂ ಬಿಡದೆ ಅಧ್ಯಯನ ಮಾಡುತ್ತಾನೆ. ಕೋಚಿಂಗ್ ಕ್ಲಾಸ್ ಗೂ ಹೋಗುತ್ತಾರೆ. ಪ್ರತಿ ವರ್ಷ, ಸಾವಿರಾರು ಅಭ್ಯರ್ಥಿಗಳು ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಐಆರ್‌ಎಸ್ ಆಗಲು ಪರೀಕ್ಷೆ ತೆಗೆದುಕೊಳ್ಳಲು ಬಯಸುತ್ತಾರೆ. ಅವರಲ್ಲಿ ಕೆಲವೇ ಸಂಖ್ಯೆಯ ಜನರು ಮಾತ್ರ ಅತ್ಯಂತ ಕಷ್ಟವಾದ ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಇಂದು ಕೋಚಿಂಗ್ ಇಲ್ಲದೆ ಎಐಆರ್ 12 ಅನ್ನು ಪಡೆದ ತೇಜಸ್ವಿ ರಾಣಾ ( ) ಅವರ ಬಗ್ಗೆ ತಿಳಿಯೋಣ. ತೇಜಸ್ವಿ 2015ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ( ) ಬರೆದಿದ್ದರು. ಅವರು ಪ್ರಾಥಮಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು, ಆದರೆ ಮುಖ್ಯ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಆದರೆ ಛಲ ಬಿಡದೇ ತನ್ನ ಎರಡನೇ ಪ್ರಯತ್ನದಲ್ಲಿ, ಅವರು ಯಶಸ್ವಿಯಾದರು, 2016 ರಲ್ಲಿ ಎಐಆರ್ 12 ಅನ್ನು ಪಡೆದರು. ತೇಜಸ್ವಿ ರಾಣಾ ಹರಿಯಾಣದ ಕುರುಕ್ಷೇತ್ರ ಮೂಲದವರು. ಅವರು ಎಂಜಿನಿಯರಿಂಗ್ ಮಾಡಲು ಬಯಸಿದ್ದರಿಂದ ಇಂಟರ್ಮೀಡಿಯೇಟ್ ನಂತರ ಜೆಇಇ ಪರೀಕ್ಷೆಗೆ ( ) ನೋಂದಾಯಿಸಿಕೊಂಡಳು. ಅದರ ನಂತರ, ಅವರು ಐಐಟಿ ಕಾನ್ಪುರಕ್ಕೆ ಹೋದರು, ಅಲ್ಲಿ ಅವರಿಗೆ ಯುಪಿಎಸ್ಸಿ ಕಡೆಗೆ ಹೆಚ್ಚು ಆಸಕ್ತಿ ಬೆಳೆಯಿತು, ಹಾಗಾಗಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು. UPSCಗೆ ತೇಜಸ್ವಿ ತಯಾರಿ ನಡೆಸಿದ್ದು ಹೀಗೆ…ಪರೀಕ್ಷೆಗೆ ಚೆನ್ನಾಗಿ ಓದಲು ತೇಜಸ್ವಿ 6 ರಿಂದ 12 ನೇ ತರಗತಿಗಳ ಪಠ್ಯಪುಸ್ತಕಗಳನ್ನು ಸಂಗ್ರಹಿಸುವ ಮೊದಲು ಯುಪಿಎಸ್ಸಿ ಪಠ್ಯಕ್ರಮವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದರು. ಈ ಪುಸ್ತಕಗಳನ್ನು ಚೆನ್ನಾಗಿ ಓದುವ ಮೂಲಕ ಅವರು ತಮ್ಮ ಬೇಸಿಕ್ ಜ್ಞಾನವನ್ನು ಹೆಚ್ಚಿಸಿಕೊಂಡರು.ಇದರ ನಂತರ, ಅವರು ಸ್ಟಾಂಡರ್ಡ್ ಪುಸ್ತಕಗಳನ್ನು ಓದಿದರು ಮತ್ತು ಐಚ್ಛಿಕ ವಿಷಯವನ್ನು ಎಚ್ಚರಿಕೆಯಿಂದ ಕಲಿತರು. ಇವರು ಯಾವುದೇ ಕೋಚಿಂಗ್ ಕ್ಲಾಸ್ ಗೆ ಹೋಗದೇ ಸ್ವಯಂ ಅಧ್ಯಾಯ ಮಾಡುತ್ತಿದ್ದರು, ಅಲ್ಲದೇ ಟೈಮ್ ಟೇಬಲ್ ಮಾಡಿಕೊಂಡು, ಓದಿದ ಎಲ್ಲಾ ವಿಷಯಗಳನ್ನು ಸಣ್ಣ ನೋಟ್ಸ್ ಮಾಡಿ ಇಡುತ್ತಿದ್ದರು. ಇದರ ಜೊತೆಗೆ, ಅವರು ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿದರು ಮತ್ತು ಅಣಕು ಪರೀಕ್ಷೆಗಳನ್ನು ನೀಡುವ ಮೂಲಕ ತಮ್ಮ ಸಿದ್ಧತೆಯನ್ನು ಮೌಲ್ಯಮಾಪನ ಮಾಡಿದರು. ಇದಲ್ಲದೆ, ಇಂಟರ್ನೆಟ್ ಸಹಾಯದಿಂದ, ಅವರು ತಮ್ಮದೇ ಆದ ಟಿಪ್ಪಣಿಗಳನ್ನು ( ) ಸಿದ್ಧಪಡಿಸಿದರು ಮತ್ತು ಪರೀಕ್ಷೆಯಲ್ಲಿ ಪಾಸ್ ಆಗಲು ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿದರು. ಯುಪಿಎಸ್ಸಿ ಪರೀಕ್ಷೆ ಬರೆಯುವವರಿಗೆ ತೇಜಸ್ವಿ ಕಿವಿಮಾತುಯುಪಿಎಸ್ಸಿಯಲ್ಲಿ ಯಶಸ್ವಿಯಾಗಲು, ಒಬ್ಬರು ಅಗತ್ಯ ಪ್ರಯತ್ನಗಳನ್ನು ಮಾಡಬೇಕು ಮತ್ತು ಪರೀಕ್ಷೆ ತಯಾರಿಯಲ್ಲಿ ಡೆಡಿಕೇಶನ್ ಇರಬೇಕು ಎಂದು ತೇಜಸ್ವಿ ಹೇಳುತ್ತಾರೆ. ಅಭ್ಯರ್ಥಿಗಳು ಸರಿಯಾದ ಹಾದಿಯಲ್ಲಿರುವಾಗ ಸಿದ್ಧತೆಗಾಗಿ ಉತ್ತಮ ಸಂಪನ್ಮೂಲಗಳನ್ನು ಬಳಸಬೇಕು ಮತ್ತು ಕಾಲಕಾಲಕ್ಕೆ ಅವರ ಪ್ರಗತಿಯನ್ನು ಮೌಲ್ಯಮಾಪನ ಮಾಡಬೇಕು. ಇದರಿಂದ ನೀವೆಷ್ಟು ತಿಳಿದಿದ್ದೀರಿ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು, ಇದರಿಂದ ನೀವು ಭವಿಷ್ಯದಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬಹುದು ಮತ್ತು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಮತ್ತೆ ಪ್ರಯತ್ನಿಸಬಹುದು. ಅಷ್ಟೇ ಅಲ್ಲ, ತಾಳ್ಮೆ ಅಗತ್ಯ, ಜೊತೆಗೆ ಸೋಲುವುದರ ಬಗ್ಗೆ ಭಯ ಪಡಬಾರದು ಎಂದು ತೇಜಸ್ವಿ ಸಲಹೆ ನೀಡ್ತಾರೆ. ತೇಜಸ್ವಿ ಪರ್ಸನಲ್ ಲೈಫ್ ಬಗ್ಗೆ ಹೇಳೋದಾದರೆ ರಾಣಾ 2016 ರ ಬ್ಯಾಚ್ ಐಪಿಎಸ್ ಅಧಿಕಾರಿ ಅಭಿಷೇಕ್ ( ) ಗುಪ್ತಾ ಅವರನ್ನು ವಿವಾಹವಾಗಿದ್ದಾರೆ. ಅಭಿಷೇಕ್ ಅವರನ್ನು ಪಶ್ಚಿಮ ಬಂಗಾಳ ಕೇಡರ್‌ನಲ್ಲಿ ನೇಮಿಸಲಾಗಿದೆ ಮತ್ತು ಈ ಆಧಾರದ ಮೇಲೆ, ತೇಜಸ್ವಿ ಅವರಿಗೆ ಪಶ್ಚಿಮ ಬಂಗಾಳ ಕೇಡರ್ ನಲ್ಲಿಯೇ ನೇಮಕಾತಿ ಸಿಕ್ಕಿದೆ. ಇಬ್ಬರೂ ಸದ್ಯ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತೇಜಸ್ವಿ ಮತ್ತು ಅಭಿಷೇಕ್ ಇಬ್ಬರೂ ನಾಯಿಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವರು ತಮ್ಮ ಸಾಕುಪ್ರಾಣಿಗಳೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಭಿಷೇಕ್ ಅತ್ಯುತ್ತಮ ಫೋಟೋಗ್ರಾಫರ್ ಕೂಡ ಆಗಿದ್ದು, ವೈಲ್ಡ್ ಲೈಫ್ ಫೋಟೋಗ್ರಾಫಿ ಕೂಡ ಮಾಡುತ್ತಾರೆ.