ಶೂಟಿಂಗ್​ ವೇಳೆ ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ! ಸಂಕಟ ತಂದ ಆ ದಿನ ನೆನೆದ ನಿರ್ಮಾಪಕ ಶನಾಖ್ತ್​ ಚಿತ್ರದ ಸಂದರ್ಭದಲ್ಲಿ ನಟಿ ಮಾಧುರಿ ದೀಕ್ಷಿತ್​ ಬ್ರಾ ಧರಿಸಿ ಶೂಟಿಂಗ್​ ಮಾಡಲು ಹೇಗೆ ನಿರಾಕರಿಸಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ನಿರ್ಮಾಪಕ ಟಿನ್ನು ಆನಂದ್​ 1980ರ ದಶಕದಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಕೆಲವು ಜನಪ್ರಿಯ ಚಲನಚಿತ್ರಗಳಾದ ಕಾಲಿಯಾ ಮತ್ತು ಶಾಹೆನ್‌ಶಾ ಅವರನ್ನು ನಿರ್ಮಿಸಿದ ನಿರ್ಮಾಪಕ ಟಿನ್ನು ಆನಂದ್ ( ) ಅವರು ಅಮಿತಾಭ್​ ಬಚ್ಚನ್​ ಮತ್ತು ಮಾಧುರಿ ದೀಕ್ಷಿತ್​ ಅವರನ್ನು ಒಟ್ಟಿಗೇ ತೆರೆಯ ಮೇಲೆ ತರುವ ಪ್ಲ್ಯಾನ್​ ಮಾಡಿದ್ದರು. 1989ರಲ್ಲಿ ಅವರ ಈ ಕನಸು ನನಸಾಗಿತ್ತು. ಆ ಚಿತ್ರವೇ ಶನಾಖ್ತ್​​ (ಗುರುತಿಸುವಿಕೆ). ಮಿಲಿಟರಿ ಅಧಿಕಾರಿಯ ವಿಮಾನವು ಸರೋವರದಲ್ಲಿ ಅಪಘಾತಕ್ಕೀಡಾಗುತ್ತದೆ, ಅವನ ಜೀವ ಉಳಿದರೂ ಸ್ಮರಣೆ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತನ ಶುಶ್ರೂಷೆ ಮಾಡುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಆ ವೇಳೆ ತೇಜಾಬ್ ಮತ್ತು ರಾಮ್ ಲಖನ್​ದಂಥ ಬ್ಲಾಕ್​ಬಸ್ಟರ್​ ಸಿನಿಮಾ ನೀಡಿದ್ದರು ಮಾಧುರಿ ದೀಕ್ಷಿತ್​. ಅಮಿತಾಭ್​ ಆಗಲೇ ಸ್ಟಾರ್​ ನಟರಾಗಿದ್ದರು. ಆದರೆ ಅಮಿತಾಭ್​ ಮತ್ತು ಮಾಧುರಿ ಜೋಡಿ ಒಟ್ಟಿಗೇ ನಟಿಸಿರಲಿಲ್ಲ. ಆದ್ದರಿಂದ ಇವರಿಬ್ಬರನ್ನು ಸಹಿ ಹಾಕಿಸಿಕೊಂಡಿದ್ದರು ನಿರ್ಮಾಪಕ ಟಿನ್ನು ಆನಂದ್. ಈ ಚಿತ್ರದ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ಮಾಪಕ ಟಿನ್ನು ಆನಂದ್ ಅವರು ಮಾಧುರಿ ದೀಕ್ಷಿತ್​ ( ) ಅವರ ಜೊತೆಗಿನ ಜಗಳದ ಕುರಿತು, ಬಟ್ಟೆಯ ಬಗ್ಗೆ ಮಾಧುರಿ ಮತ್ತು ತಮ್ಮ ನಡುವೆ ನಡೆದ ಮಾತಿನ ಚಕಮಕಿ ಕುರಿತು ಮಾತನಾಡಿದ್ದಾರೆ. ಮಾಧುರಿ ದೀಕ್ಷಿತ್​ ತಮ್ಮ ರವಿಕೆಯನ್ನು ಕಳಚಿ ಬ್ರಾ ಮೇಲೆ ಶೂಟಿಂಗ್​ ಮಾಡುವ ಸೀನ್​ನಲ್ಲಿ ಉಂಟಾದ ವಿವಾದದ ಕುರಿತು ಹೇಳಿದ್ದಾರೆ. ಈ ಚಿತ್ರದಲ್ಲಿ ಚಿತ್ರದ ನಾಯಕ ಅಮಿತಾಭ್​ ( ) ಅವರನ್ನು ಸರಪಳಿಯಲ್ಲಿ ಬಂಧಿಸುವ ಸನ್ನಿವೇಶ ಬರುತ್ತದೆ. ವಿಲನ್​ಗಳು ಇವರನ್ನು ಸರಪಳಿಯಲ್ಲಿ ಕಟ್ಟಿರುತ್ತಾರೆ. ಈ ಸಮಯದಲ್ಲಿ ಗೂಂಡಾಗಳ ಕೈಯಿಂದ ನಾಯಕಿ ಮಾಧುರಿ ದೀಕ್ಷಿತ್ ಅವರನ್ನು ರಕ್ಷಿಸಲು ನಾಯಕ ಪ್ರಯತ್ನಿಸುತ್ತಾನೆಯಾದರೂ ಅದು ಸಾಧ್ಯವಾಗುವುದಿಲ್ಲ. ಆಗ ನಾಯಕಿ, ಮಹಿಳೆಯೊಬ್ಬರು ನಿಮ್ಮ ಮುಂದೆ ನಿಂತಿರುವಾಗ ನೀವು ಸರಪಳಿಯಲ್ಲಿ ಪುರುಷನ ಮೇಲೆ ಏಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಆ ಸಂದರ್ಭದಲ್ಲಿ ನಾಯಕನನ್ನು ರಕ್ಷಿಸಲು ತನ್ನ ಬ್ಲೌಸ್​ ಕಳಚಿ ಬ್ರಾದಲ್ಲಿಯೇ ನಿಲ್ಲುವ ದೃಶ್ಯ ಬರುತ್ತದೆ. ದೃಶ್ಯವು ಹೀಗೆ ಇರಲಿದೆ, ಕ್ಯಾಮೆರಾ ಮುಂದೆ ನಾಯಕಿ ಬ್ರಾ ಧರಿಸಿ ನಿಲ್ಲುವ ಸನ್ನಿವೇಶ ಬರುತ್ತದೆ ಎಂಬ ಬಗ್ಗೆ ನಿರ್ಮಾಪಕರು ಮಾಧುರಿ ಅವರಿಗೆ ಮೊದಲೇ ಹೇಳಿದ್ದರಂತೆ. ಈ ಕುರಿತು ಟಿನ್ನು ಆನಂದ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆಕೆ ಸಹಿ ಹಾಕುವ ಮೊದಲೇ ಎಲ್ಲವನ್ನೂ ವಿವರಿಸಿದ್ದೆ ಎಂದಿದ್ದಾರೆ. ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ? 'ನಾನು ಈ ಬಗ್ಗೆ ಮಾಧುರಿಗೆ ಮುಂಚಿತವಾಗಿಯೇ ಹೇಳಿದ್ದೆ. ನೀನು ಸಂಪೂರ್ಣವಾಗಿ ಬ್ರಾ ಧರಿಸಿ ಕ್ಯಾಮೆರಾದ ಮುಂದೆ ನಿಲ್ಲಬೇಕಾಗುತ್ತದೆ. ರವಿಕೆ ಇರುವುದಿಲ್ಲ. ನಿನ್ನನ್ನು ಯಾವುದೇ ಕಾರಣಕ್ಕೂ ಹುಲ್ಲಿನ ಹಿಂದಾಗಲೀ ಅಥವಾ ಇನ್ನಾವುದೇ ವಸ್ತುಗಳ ಹಿಂದಾಗಲಿ ಅಡಗಿಸುವ ಮಾತೇ ಇಲ್ಲ. ಏಕೆಂದರೆ ಈ ಚಿತ್ರದಲ್ಲಿ ನಾಯಕನಿಗಾಗಿ ನಿನ್ನನ್ನು ನೀನು ಗೂಂಡಾಗಳಿಗೆ ಸಮರ್ಪಿಸಿಕೊಂಡ ಸನ್ನಿವೇಶ ಅದು. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೇ ಈ ದೃಶ್ಯ ಮಾಡಬೇಕಾಗುತ್ತದೆ ಎಂದಿದ್ದೆ. ಆರಂಭದಲ್ಲಿ ಮಾಧುರಿ ಇದಕ್ಕೆ ಓಕೆ ಎಂದಿದ್ದಳು' ಎಂದು ಆ ದಿನಗಳನ್ನು ನೆನಪಿಸಿಕೊಂಡರು ಟಿನ್ನು ಆನಂದ್​. ಈ ಸೀನ್​ಗಾಗಿ ಮಾಧುರಿಗೆ ಅಗತ್ಯ ಇರುವ ಬ್ರಾ ಡಿಸೈನ್ ಮಾಡುವಂತೆಯೂ ತಿಳಿಸಲಾಗಿತ್ತು. ಯಾವ ರೀತಿಯ ಡಿಸೈನ್​ ಬೇಕು ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆಯೂ ಹೇಳಲಾಗಿತ್ತು. ಎಲ್ಲದ್ದಕ್ಕೂ ಓಕೆ ಎಂದಿದ್ದ ಮಾಧುರಿ, ಶೂಟಿಂಗ್​ ಸಂದರ್ಭದಲ್ಲಿ ಮಾತ್ರ ಈ ದೃಶ್ಯವನ್ನು ನಿರಾಕರಿಸಿಯೇ ಬಿಟ್ಟರಂತೆ. ಈ ಕುರಿತು ತಿಳಿಸಿದ ಟಿನ್ನು ಅವರು, ಚಿತ್ರದ ಮೊದಲ ದಿನವಾದ ಚಿತ್ರೀಕರಣದ ದಿನ ಮಾಧುರಿ ಸೆಟ್‌ಗೆ ಬರುತ್ತಾರೆ ಎಂದು ಕಾಯುತ್ತಿದ್ದೆ. 45 ನಿಮಿಷಗಳವರೆಗೆ ಅವಳು ತನ್ನ ಕೋಣೆಯಿಂದ ಹೊರಬರದಿದ್ದಾಗ, ತಾನು ಶೂಟಿಂಗ್​ಗೆ ಬರುವುದೇ ಇಲ್ಲ ಎಂದು ಆಕೆ ಹಠ ಹಿಡಿದಳು. ಏನಾಯಿತು ಎಂದು ಕೇಳಿದಾಗ ನಾನು ಈ ನಿರ್ದಿಷ್ಟ ದೃಶ್ಯವನ್ನು ಮಾಡಲು ಬಯಸುವುದಿಲ್ಲ, ಕ್ಷಮಿಸಿ ಎಂದಳು. ನನಗೆ ಏನು ಮಾಡಬೇಕು ಎಂದು ತಿಳಿಯದೇ ಆ ದಿನ ಪ್ಯಾಕ್ ಅಪ್ ಮಾಡಿ, ಚಿತ್ರೀಕರಣವನ್ನು ರದ್ದುಗೊಳಿಸಲಾಯಿತು ಎಂದಿದ್ದಾರೆ. ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು? ಚಿತ್ರದಲ್ಲಿ ಮಾಧುರಿ ಬದಲಿಗೆ ಬೇರೊಬ್ಬ ನಟಿಯನ್ನು ಹಾಕಿಕೊಳ್ಳಲು ಯೋಚಿಸಲಾಯಿತು. ಆದರೆ ಆಗ ಮಾಧುರಿಯ ಕಾರ್ಯದರ್ಶಿ ಒಳಗೆ ಬಂದು ಮಾಧುರಿಯವರನ್ನು ಓಲೈಸಲು ಸಫಲರಾದರು. ಕೊನೆಗೂ ಮಾಧುರಿ ಈ ದೃಶ್ಯವನ್ನು ಒಪ್ಪಿಕೊಂಡರು. ಚಿತ್ರವನ್ನು ಕೇವಲ ಐದು ದಿನಗಳ ಕಾಲ ಚಿತ್ರೀಕರಿಸಲಾಗಿತ್ತು. ಆದರೆ ನಂತರ ಮಾಧುರಿ ಅವರು ಟಿನ್ನು ಅವರ ಜೊತೆ ಮತ್ತೆ ಕೆಲಸ ಮಾಡಲಿಲ್ಲವಂತೆ!