ಥೈಲ್ಯಾಂಡ್‌ನಲ್ಲಿದೆ ಮಿನಿ ಅಯೋಧ್ಯೆ, ರಾಮ ಹೋಗಿರದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು ಹೀಗೆ? ಭಗವಾನ್ ರಾಮನನ್ನು ಪೂಜಿಸುವ ಅಯೋಧ್ಯೆ ನಗರವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇದೆ. ಅಯೋಧ್ಯೆಯಿಂದ ಈ ಸ್ಥಳಕ್ಕೆ ಹೇಗೆ ಹೆಸರು ಬಂದಿತು ಮತ್ತು ಭಗವಾನ್ ರಾಮನನ್ನು ಇಲ್ಲಿ ಹೇಗೆ ಪೂಜಿಸಲಾಗುತ್ತದೆ? ಭಗವಾನ್ ರಾಮನನ್ನು ಪೂಜಿಸುವ ಅಯೋಧ್ಯೆ ನಗರವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇದೆ. ಅಯೋಧ್ಯೆಯಿಂದ ಈ ಸ್ಥಳಕ್ಕೆ ಹೇಗೆ ಹೆಸರು ಬಂದಿತು ಮತ್ತು ಭಗವಾನ್ ರಾಮನನ್ನು ಇಲ್ಲಿ ಹೇಗೆ ಪೂಜಿಸಲಾಗುತ್ತದೆ? ಉತ್ತರ ಪ್ರದೇಶದ ಅಯೋಧ್ಯೆ ನಗರವನ್ನು ( ) ಹಿಂದೂ ಧರ್ಮದಲ್ಲಿ ಬಹಳ ಪ್ರಮುಖ ತಾಣ. ಇಲ್ಲಿಯೇ ಭಗವಾನ್ ಶ್ರೀರಾಮ ಜನಿಸಿದ್ದು. ರಾಮ ಮಂದಿರ ಮತ್ತು ಬಾಬರಿ ಮಸೀದಿ ಧ್ವಂಸದ ವಿವಾದವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ಮಧ್ಯೆ ವಿದೇಶದಲ್ಲೂ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೌದು, ಥೈಲ್ಯಾಂಡ್‌ನಲ್ಲಿ ನಿರ್ಮಿಸಲಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಅನುಮೋದನೆ ದೊರೆತಿದೆ. ಥೈಲ್ಯಾಂಡ್ () ನಲ್ಲೊಂದು ಅಯೋಧ್ಯೆ ಇದೆಯೇ ಎಂದು ನೀವು ಕೇಳಬಹುದು. ಭಾರತ ಹೊರತುಪಡಿಸಿ, ಥೈಲ್ಯಾಂಡಿನಲ್ಲಿ ಅಯೋಧ್ಯೆಯೂ ಇದೆ. ಆದರೆ ಈ ಅಯೋಧ್ಯೆಯಲ್ಲಿ ಭಗವಾನ್ ರಾಮನಿಲ್ಲ. ಶ್ರೀರಾಮ ಅಲ್ಲಿಗೆ ಹೋಗಿಯೂ ಇಲ್ಲ. ಆದರೆ ಈ ರಾಮನ ನಗರವನ್ನು ಅಲ್ಲಿಗೆ ಬಂದ ಭಾರತದ ಜನರು ಸ್ಥಾಪಿಸಿದ್ದಾರೆ. ಥೈಲ್ಯಾಂಡ್‌ನ ಈ ಅಯೋಧ್ಯೆಯ ವಿಶೇಷತೆ ಏನು? ಅಯೋಧ್ಯೆ ಹಿಂದೂ ಧರ್ಮದಿಂದ ಸ್ಫೂರ್ತಿ ಪಡೆದಿದೆಆಗ್ನೇಯ ಏಷ್ಯಾದಲ್ಲಿರುವ ಥೈಲ್ಯಾಂಡ್ ಭಾರತದ ಗಡಿಗಳೊಂದಿಗೆ ಸಂಪರ್ಕ ಹೊಂದಿಲ್ಲ.ಥೈಲ್ಯಾಂಡ್ ಹಿಂದೂ ಧರ್ಮದಿಂದ ( ) ಪ್ರೇರಿತವಾಗಿದೆ. ಇಲ್ಲಿ ಜನರು ರಾಮನನ್ನು ದೇವರಂತೆ ಪೂಜಿಸುತ್ತಾರೆ. ವಿಶೇಷವೆಂದರೆ ಥೈಲ್ಯಾಂಡ್ ನಲ್ಲಿ ವಾಲ್ಮೀಕಿ ಬರೆದ ರಾಮಾಯಣವನ್ನು ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ಥೈಲ್ಯಾಂಡ್ ನಗರದಲ್ಲಿ ಹಿಂದೂಗಳ ಪ್ರಾಬಲ್ಯವಿದೆ. ಈ ಸ್ಥಳವು ಛೋಪ್ರಿಯಾ ಪಾಲಕ್ ಮತ್ತು ಲೋಬ್ಪುರಿ ನದಿಗಳ ನಡುವೆ ಇದೆ ಮತ್ತು ಇದರ ಹೆಸರು ಭಾರತದ ಅಯೋಧ್ಯೆಯಿಂದ ಸ್ಫೂರ್ತಿ ಪಡೆದಿದೆ. ತಮಿಳು ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತದೆಮಾಧ್ಯಮ ವರದಿ ಪ್ರಕಾರ, ಭಗವಾನ್ ರಾಮ ( ) ಎಂದಿಗೂ ಇಲ್ಲಿಗೆ ಹೋಗಿಯೇ ಇಲ್ಲ, ಆದರೆ ಭಾರತದಿಂದ ಅನೇಕ ತಮಿಳರು ಅಲ್ಲಿಗೆ ಹೋಗಿ ವಾಸಿಸಲು ಪ್ರಾರಂಭಿಸಿದರು. ಅದರ ನಂತರ ತಮಿಳು ಜನರು ಈ ಸ್ಥಳದಲ್ಲಿ ಹಿಂದೂ ಧರ್ಮವನ್ನು ತೀವ್ರವಾಗಿ ಪ್ರಚಾರ ಮಾಡಿದರು. ಅಷ್ಟೇ ಅಲ್ಲ, ಇಲ್ಲಿನ ರಾಜ ಭಗವಾನ್ ರಾಮನನ್ನು ನಂಬಿದ್ದ. 1360 ರವರೆಗೆ, ಇಲ್ಲಿ ಬೌದ್ಧ ಧರ್ಮವನ್ನು ಅನುಸರಿಸುವುದು ಕಡ್ಡಾಯವಾಗಿತ್ತು. ಆದರೆ ಇಲ್ಲಿನ ಜನರು ಭಗವಾನ್ ರಾಮನನ್ನು ಹೆಚ್ಚು ನಂಬುತ್ತಿರುವುದನ್ನು ನೋಡಿದ ರಾಜ ರಾಮನನ್ನೂ ನಂಬಲು ಪ್ರಾರಂಭಿಸಿದ. ಭಗವಾನ್ ರಾಮನ ಮೇಲಿನ ಭಕ್ತಿಯನ್ನು ಅಧಿಕೃತ ಧರ್ಮವನ್ನಾಗಿ ಮಾಡಿದ. ಆಕರ್ಷಣೆಯ ಕೇಂದ್ರ ರಾಮ್ ನಗರಿಥೈಲ್ಯಾಂಡ್ ನ ಅಯೋಧ್ಯೆ ನಗರದ ಮುಖ್ಯ ಆಕರ್ಷಣೆಯ ಕೇಂದ್ರ ನಗರದ ಮಧ್ಯದಲ್ಲಿರುವ ಪ್ರಾಚೀನ ಉದ್ಯಾನವನವಾಗಿದೆ. ಈ ಉದ್ಯಾನವನದಲ್ಲಿ, ಶಿಖರವಿಲ್ಲದ ಕಂಬಗಳು, ಗೋಡೆಗಳು, ಮೆಟ್ಟಿಲು ಮತ್ತು ಭಗವಾನ್ ಬುದ್ಧನ ಸುಂದರವಾದ ಪ್ರತಿಮೆಗಳು ಜನರ ಗಮನವನ್ನು ಸೆಳೆಯುತ್ತವೆ. ಈ ಉದ್ಯಾನವನದ ಅತ್ಯಂತ ವಿಶೇಷವಾದ ಪ್ರತಿಮೆಯೆಂದರೆ ಬುದ್ಧನ ತಲೆಯನ್ನು ಮರಳು ಕಲ್ಲಿನಿಂದ ಮಾಡಿದ ಪ್ರತಿಮೆ ಮತ್ತು ಪ್ರತಿಮೆಯನ್ನು ಅರಳಿ ಮರದ ಬೇರುಗಳಲ್ಲಿ ಮುಚ್ಚಲಾಗಿದೆ. ಮಾಹಿತಿ ಪ್ರಕಾರ, ಈ ಮರವು ಅಯೋಧ್ಯೆಯಲ್ಲಿರುವ 14ನೇ ಶತಮಾನದ ಪ್ರಾಚೀನ ಸಾಮ್ರಾಜ್ಯವಾದ ವಟ್ ಮಹತ್ಮ ಸ್ಮಾರಕಗಳನ್ನು ಹೊಂದಿರುವ ದೇವಾಲಯಗಳ ಅವಶೇಷಗಳನ್ನು ಹೋಲುತ್ತದೆ. ನೀವು ಎಂದಾದರೂ ಥೈಲ್ಯಾಂಡ್ ಪ್ರವಾಸಕ್ಕೆ ಹೋದರೆ ಮರೆಯದೇ ವಿಸಿಟ್ ಮಾಡಿ. ಬೌದ್ಧ ದೇವಾಲಯ ನಿರ್ಮಾಣದಂತಕಥೆ ಪ್ರಕಾರ, ಇಲ್ಲಿನ ರಾಜ ಒಂದು ದಿನ ಧ್ಯಾನದಲ್ಲಿ ಕುಳಿತಿದ್ದ, ಆಗ ಭೂಮಿಯಿಂದ ಬೆಳಕು ಬರುತ್ತಿರುವಂತೆ ವಿಚಿತ್ರ ಅನುಭವ ಉಂಟಾಯಿತಂತೆ. ಈ ಬೆಳಕಿನಲ್ಲಿ ರಾಜ ಭಗವಾನ್ ಬುದ್ಧನ ಪ್ರತಿಮೆ ನೋಡಿದನಂತೆ. ಅದರ ನಂತರ ಅವರು ಭಗವಾನ್ ಬುದ್ಧನ ದೇವಾಲಯವನ್ನು ( ) ಇಲ್ಲಿ ನಿರ್ಮಿಸಬೇಕೆಂದು ನಿರ್ಧರಿಸಿದ. ಮತ್ತು ಇಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದರು. ಆದಾಗ್ಯೂ, ಪ್ರಸ್ತುತ, ದೇವಾಲಯದ ಅವಶೇಷಗಳು ಮಾತ್ರ ಇಲ್ಲಿ ಉಳಿದಿವೆ. ಅಯೋಧ್ಯೆಯ ಇತಿಹಾಸಇತಿಹಾಸದ ಬಗ್ಗೆ ಹೇಳೋದಾದ್ರೆ, ಥೈಲ್ಯಾಂಡ್ ನ ಪ್ರಾಚೀನ ಹೆಸರು "ಸಿಯಾಮ್". 1612ರವರೆಗೆ ಅಯೋಧ್ಯೆಯು ಸಿಯಾಮ್ ನ ರಾಜಧಾನಿಯಾಗಿತ್ತು. ಜನರು ಇದನ್ನು "ಆಯುಧ" () ಎಂಬ ಹೆಸರಿನಿಂದ ತಿಳಿದಿದ್ದಾರೆ. ಇಂದಿಗೂ, ಥೈಲ್ಯಾಂಡ್ ನ ರಾಷ್ಟ್ರೀಯ ಪಠ್ಯ "ರಾಮಾಯಣ". ಇದನ್ನು ಥಾಯ್ ಭಾಷೆಯಲ್ಲಿ 'ರಾಮಿಕಿನ್ನೆ' ಎಂದು ಕರೆಯಲಾಗುತ್ತೆ. ಇದರರ್ಥ "ರಾಮ-ಕೀರ್ತಿ". ಥೈಲ್ಯಾಂಡ್‌ನಲ್ಲಿ, 'ರಾಮಿಕಿನ್ನೆ' ಆಧಾರಿತ ನಾಟಕಗಳನ್ನು ನೋಡುವುದು ಮತ್ತು ಬೊಂಬೆಗಳನ್ನು ಪ್ರದರ್ಶಿಸುವುದನ್ನು ಧಾರ್ಮಿಕ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ನೀವು ಥೈಲ್ಯಾಂಡ್ ಗೆ ಹೋಗಲು ಯೋಜಿಸುತ್ತಿದ್ದರೆ ನೀವು ಖಂಡಿತವಾಗಿಯೂ ಒಮ್ಮೆ ಇಲ್ಲಿಗೆ ಹೋಗಬೇಕು.