ಸರ್ಕಾರಿ ಅಧಿಕಾರಿಗಳು ವೈಯಕ್ತಿಕ ಉದ್ದೇಶಕ್ಕಾಗಿ ಕಚೇರಿಯಲ್ಲಿ ಮೊಬೈಲ್ ಬಳಸುವಂತಿಲ್ಲ: ಮದ್ರಾಸ್ ಹೈಕೋರ್ಟ್ ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಫೋನ್, ಕ್ಯಾಮೆರಾ ಬಳಸುವ ಅಶಿಸ್ತು ಮುಂದುವರಿದರೆ ತೆರಿಗೆ ನೀಡುವ ಸಾರ್ವಜನಿಕರಿಗೆ ಮೋಸ ಮಾಡಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಚೆನ್ನೈ (ಮಾ. 16):ಸರ್ಕಾರಿ ನೌಕರರು ಕಚೇರಿ ವೇಳೆಯಲ್ಲಿ ವೈಯಕ್ತಿಕ ಬಳಕೆಗೆ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೇಳಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣ್ಯಂ ತಮಿಳುನಾಡು ಸರ್ಕಾರಕ್ಕೆ ಈ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಮತ್ತು ನಿಯಮಗಳನ್ನು ಅನುಸರಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. "ಕಚೇರಿಗೆ ಹಾಜರಾಗುವ ಎಲ್ಲರೂ ಮತ್ತು ಕಚೇರಿಯಲ್ಲಿ ಕೆಲಸ ಮಾಡುವ ಇತರ ಅಧಿಕಾರಿಗಳು ಯಾವುದೇ ತುರ್ತು ಕರೆಗೆ ಹಾಜರಾಗಬೇಕಾದರೆ, ಕಚೇರಿಯಿಂದ ಹೊರಗೆ ಹೋಗಲು ಮತ್ತು ಮೊಬೈಲ್ ಫೋನ್‌ಗಳನ್ನು ಬಳಸಲು ಮೇಲಧಿಕಾರಿಗಳಿಂದ ಸೂಕ್ತ ಅನುಮತಿಯನ್ನು ಪಡೆಯಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು ಅಥವಾ ವೈಬ್ರೇಶನ್ / ಸೈಲೆಂಟ್ ಮೋಡ್‌ನಲ್ಲಿ ಇಡಬೇಕು,” ಎಂದು ಹೈಕೋರ್ಟ್ ಹೇಳಿದೆ. ಗಂಭೀರವಾಗಿ ಪರಿಗಣಿಸಿ: ‘‘ಸರಕಾರಿ ಕಚೇರಿಗಳಲ್ಲಿ ಕನಿಷ್ಠ ಶಿಸ್ತನ್ನು ಪಾಲಿಸಬೇಕು, ಕಚೇರಿಯೊಳಗೆ ಮೊಬೈಲ್ ಕ್ಯಾಮೆರಾಗಳನ್ನು ಪದೇ ಪದೇ ಬಳಸುತ್ತಿದ್ದಾರೆ ಎಂಬ ಆರೋಪಗಳು ಗಲಾಟೆಗೆ ಕಾರಣವಾಗುತ್ತಿದ್ದು, ಇಲಾಖೆಗಳ ಸಾರ್ವಜನಿಕ ಕಚೇರಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಲ್ಲಾ ಸರ್ಕಾರಿ ಕಛೇರಿಗಳಿಗೆ ಸೂಕ್ತ ಸುತ್ತೋಲೆ/ಸೂಚನೆಗಳನ್ನು ಹೊರಡಿಸಬೇಕು" ಎಂದು ನ್ಯಾಯಾಲಯ ತಿಳಸಿದೆ. ಇದನ್ನೂ ಓದಿ: : ಡಿಸೆಂಬರ್‌ನಲ್ಲಿ 100 ಕೋಟಿ ಸಕ್ರಿಯ ಮೊಬೈಲ್ ಬಳಕೆದಾರರು: ಏರ್‌ಟೆಲ್‌ಗೆ ಅಗ್ರಸ್ಥಾನ! ತಿರುಚಿರಾಪಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ (ಆರೋಗ್ಯ) ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಅವಲೋಕನಗಳನ್ನು ಮಾಡಿತು ಮತ್ತು ಪದೇ ಪದೇ ಎಚ್ಚರಿಕೆಯ ಹೊರತಾಗಿಯೂ ಸಹೋದ್ಯೋಗಿಗಳ ವೀಡಿಯೊಗಳನ್ನು ಚಿತ್ರೀಕರಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ. ಮಹಾ ಸರ್ಕಾರ ಆದೇಶ: ಕಳೆದ ವರ್ಷ, ಮಹಾರಾಷ್ಟ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಕಚೇರಿ ಸಮಯದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿತ್ತು, ಅಲ್ಲದೇ ಲ್ಯಾಂಟ್‌ ಲೈನ್‌ ಫಫೋನ್‌ ಬಳಕೆ ಉತ್ತಮ ಎಂದು ಹೇಳಿತ್ತು. ಮಹಾರಾಷ್ಟ್ರ ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ತನ್ನ ಆದೇಶದಲ್ಲಿ ಅಧಿಕೃತ ಕೆಲಸಗಳಿಗೆ ಅಗತ್ಯಬಿದ್ದರೆ ಮಾತ್ರ ಮೊಬೈಲ್ ಫೋನ್ ಬಳಸಬೇಕು ಎಂದು ತಿಳಿಸಿತ್ತು. ಕಚೇರಿಯಲ್ಲಿ ಮೊಬೈಲ್ ಫೋನ್‌ಗಳ ವಿವೇಚನೆಯಿಲ್ಲದ ಬಳಕೆಯು ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಸರ್ಕಾರ ತಿಳಿಸಿತ್ತು. ಇದನ್ನೂ ಓದಿ: : ಉದ್ಯೋಗಾವಕಾಶ ಸೃಷ್ಟಿಸಲಿರುವ ಕೃತಕ ಬುದ್ಧಿಮತ್ತೆ ಪಾರ್ಕ್‌ಗೆ ಸಚಿವ ಅಶ್ವತ್ಥ ಚಾಲನೆ 6G ತಂತ್ರಜ್ಞಾನದಲ್ಲಿ ಭಾರತ ಮುಂದಾಳತ್ವ ವಹಿಸಿ ಜಗತ್ತಿಗೆ ಮಾದರಿಯಾಗಲಿ:ಭಾರತವು 6ಜಿ ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು, ಇದರಿಂದ ಇಡೀ ಜಗತ್ತಿಗೆ ದಿಕ್ಕನ್ನು ತೋರಿಸಿ ಮಾದರಿಯಾಗಬೇಕು ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ. “ನಾವು ಈಗಾಗಲೇ 6G ಯ ಕೆಲಸವನ್ನು ಪ್ರಾರಂಭಿಸಿದ್ದೇವೆ, ಏಕೆಂದರೆ ನಾವು 4G, 5G ನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ. ನಾವು 6G ತಂತ್ರಜ್ಞಾನದಲ್ಲಿ ಮುಂದಾಳತ್ವ ವಹಿಸಬೇಕು ಇಲ್ಲದಿದ್ದರೆ ಭಾರತವನ್ನು ಪ್ರತಿಭೆಗಳ ರಾಷ್ಟ್ರ ಎಂದು ಕರೆಯುವುದರಲ್ಲಿ ಅರ್ಥವಿಲ್ಲ" ಎಂದು ಸಚಿವರು ಹೇಳಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿಗೆ ಅನುಕೂಲವಾಗುವಂತೆ ನಿಯಂತ್ರಕ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಪಾಲುದಾರರಾಗಿ ಉದ್ಯಮದೊಂದಿಗೆ ಸಂವಹನ ನಡೆಸಲು ಕೇಂದ್ರವು ಎದುರು ನೋಡುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಟಿಡಿಎಸ್‌ಎಟಿ () ಸೆಮಿನಾರ್‌ನ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವೈಷ್ಣವ್, "ಈ ವ್ಯವಸ್ಥೆಯು ಎಲ್ಲರನ್ನು ಸಿಕ್ಕಿಹಾಕಿಸಿದೆ ಮತ್ತು ಸಾಕಷ್ಟು ಬಲವಾದ ಮೌಲ್ಯಗಳನ್ನು ಹೊಂದಿರದ ಕೆಲವು ಜನರು ಈ ಹಿಂದೆ ಟೆಲಿಕಾಂ ಮಾರುಕಟ್ಟೆಯನ್ನು ದೂಷಿಸಿ ಅವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ಹೇಳಿದ್ದಾರೆ.