: ಕೊರೋನಾ, ವೈರಸ್ ಅಲ್ಲ, ಆಸ್ಪಿರಿನ್‌ ಬಳಸಿ ಚಿಕಿತ್ಸೆ ನೀಡಬಹುದಾದ ಬ್ಯಾಕ್ಟೀರಿಯಾ ಎಂಬುದು ಸುಳ್ಳು! ಕೋವಿಡ್‌ 19 ವೈರಸ್‌ ಅಲ್ಲ ಬದಲಾಗಿ ಅದು ಬ್ಯಾಕ್ಟಿರೀಯಾ ಮತ್ತು ಕೊರೋನಾಗೆ ಆಸ್ಪಿರಿನ್‌ನೊಂದಿಗೆ ಚಿಕಿತ್ಸೆ ನೀಡಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ :ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳ ( 19) ಸಂಖ್ಯೆ ಎರಿಕೆಯಾಗಿದೆ. ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ.150ರಷ್ಟುಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹೇಳಿದೆ. ಈ ಮಧ್ಯೆ ಕೋವಿಡ್‌ 19 ವೈರಸ್‌ ಅಲ್ಲ ಬದಲಾಗಿ ಅದು ಬ್ಯಾಕ್ಟಿರೀಯಾ ಮತ್ತು ಕೊರೋನಾಗೆ ಆಸ್ಪಿರಿನ್‌ನೊಂದಿಗೆ ಚಿಕಿತ್ಸೆ ನೀಡಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಂಗಾಪುರ ಸರ್ಕಾರದ ಅಧಿಕಾರಿಗಳು ಶವಪರೀಕ್ಷೆಯ ನಂತರ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಬದಲಾಯಿಸಿದ್ದಾರೆ ಮತ್ತು ಕೋವಿಡ್‌ 19 ರೋಗಿಗಳಿಗೆ ಆಸ್ಪಿರಿನ್‌ನೊಂದಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ ಎಂದು ಮೇಸೆಜ್‌ನಲ್ಲಿ ಹೇಳಲಾಗಿದೆ. ಆದರೆ ಆಸ್ಪಿರಿನ್ ಕೋವಿಡ್‌ 19ಗೆ ಚಿಕಿತ್ಸೆ ಅಲ್ಲ ಹಾಗೂ ವೈರಸನ್ನು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಅಥವಾ ಕಡಿಮೆ ಮಾಡುವ ಔಷಧಿಗಳಿಂದ () ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ಫ್ಯಾಕ್ಟ್ ಚೆಕ್ ( ) ಸೋಮವಾರ ಟ್ವೀಟ್‌ನಲ್ಲಿ ತಿಳಿಸಿದೆ. ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ನಕಲಿ ಸಂದೇಶದ ಹಿನ್ನೆಲೆಯಲ್ಲಿ ಸರ್ಕಾರ ಈಗ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: : ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ? "ಸಿಂಗಾಪುರದ ಶವಪರೀಕ್ಷೆ ವರದಿಯು ಕೋವಿಡ್ ವೈರಸ್ ಅಲ್ಲ ಆದರೆ ಬ್ಯಾಕ್ಟೀರಿಯಾ ಎಂದು ಬಹಿರಂಗಪಡಿಸಿದೆ.ಕೋವಿಡ್ ವಿಕಿರಣಕ್ಕೆ ಒಡ್ಡಿಕೊಂಡ ಬ್ಯಾಕ್ಟೀರಿಯಾ ಮತ್ತು ರಕ್ತದಲ್ಲಿ ಹೆಪ್ಪುಗಟ್ಟುವಿಕೆಯಿಂದ ಮಾನವ ಸಾವಿಗೆ ಕಾರಣವಾಗುತ್ತದೆ" ಎಂದು ಎಂದು ಫೇಕ್ ಮೇಸೆಜ್‌ನಲ್ಲಿ‌ ತಿಳಿಸಲಾಗಿದೆ. ಸಿಂಗಾಪುರ್ ಸರ್ಕಾರಿ ಅಧಿಕಾರಿಗಳು ಶವಪರೀಕ್ಷೆಯ ನಂತರ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಬದಲಾಯಿಸಿದ್ದಾರೆ ಮತ್ತು -19 ರೋಗಿಗಳಿಗೆ ಆಸ್ಪಿರಿನ್‌ನೊಂದಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ ಎಂದು ಸಂದೇಶವು ಹೇಳುತ್ತದೆ. ಭಾರತ ಸರ್ಕಾರದ ಸತ್ಯ ತಪಾಸಣೆ ಸಂಸ್ಥೆ, ಫ್ಯಾಕ್ಟ್ ಚೆಕ್, ಈ ಸಂದೇಶದ ಸತ್ಯಾಸತ್ಯತೆಯನ್ನು ನಿರಾಕರಿಸಿದೆ ಮತ್ತು ಇದನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸಿದೆ. " # #COVID19 . # #! #COVID19 , , ," ಎಂದು ಟ್ವೀಟ್‌ ಮಾಡಿದೆ. ಈ ಸಂದೇಶ ಬಹಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೂನ್ 2021 ರಲ್ಲಿ, ಸಿಂಗಾಪುರ ಸರ್ಕಾರವು ಈ ಕುರಿತು ಹೇಳಿಕೆಯನ್ನು ನೀಡಿತ್ತು. "ಸಿಂಗಾಪುರದ ಆರೋಗ್ಯ ಸಚಿವಾಲಯಕ್ಕೆ ಸಂಬಂಧಿಸಿದ ಸುಳ್ಳು ಸಂದೇಶವೊಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಕೋವಿಡ್‌ 19 ರೋಗಿಯ ಶವಪರೀಕ್ಷೆಯನ್ನು ಅನುಸರಿಸಿ, ಸಿಂಗಾಪುರವು ಕೋವಿಡ್ ವೈರಸ್ ಆಗಿ ಅಸ್ತಿತ್ವದಲ್ಲಿಲ್ಲ ಎಂದು ಕಂಡುಹಿಡಿದಿದೆ, ಬದಲಿಗೆ " ವಿಕಿರಣಕ್ಕೆ ಒಡ್ಡಿಕೊಂಡ ಬ್ಯಾಕ್ಟೀರಿಯಾ ಮತ್ತು ರಕ್ತದಲ್ಲಿ ಹೆಪ್ಪುಗಟ್ಟುವಿಕೆಯಿಂದ ಮಾನವನ ಸಾವಿಗೆ ಕಾರಣವಾಗುತ್ತದೆ” ಎಂಬ ಆರೋಪಗಳೆಲ್ಲವೂ ಸುಳ್ಳು ಮತ್ತು ಸಂದೇಶವು ಸಿಂಗಾಪುರದ ಆರೋಗ್ಯ ಸಚಿವಾಲಯದಿಂದ ನೀಡಲಾಗಿಲ್ಲ. ಈ ಸಂದೇಶದ ಹಿಂದಿನ ಆವೃತ್ತಿಗಳು ಸಿಂಗಾಪುರದ ಬದಲಿಗೆ ಇಟಲಿ ಮತ್ತು ರಷ್ಯಾದಂತಹ ದೇಶಗಳನ್ನು ಉಲ್ಲೇಖಿಸಿತ್ತು. ಆದರೆ ಇದನ್ನು ಸುಳ್ಳು ಎಂದು ಬಹಿರಂಗಪಡಿಸಲಾಗಿದೆ, ”ಎಂದು ಸರ್ಕಾರ ತಿಳಿಸಿತ್ತು. ಕೋವಿಡ್‌ 19 ಅದರ ಲಕ್ಷಣಗಳು, ಅದರ ಪರಿಣಾಮ ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಅನೇಕ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸರ್ಕಾರವು ಕೋವಿಡ್-19 ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಕಾಲಿಕವಾಗಿ ನೀಡುತ್ತಿದೆ. ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಪ್ರೋಟೋಕಾಲ್‌ಗಳು ಮತ್ತು ವರದಿಗಳನ್ನು ಕಾಣಬಹುದು.