: ವಿದೇಶಿ ಬಾಹ್ಯಾಕಾಶ ಸಂಸ್ಥೆ ಸೇರಲು ಭಾರತ ತೊರೆದ ಇಸ್ರೋ ವಿಜ್ಞಾನಿಗಳ ಸಂಖ್ಯೆ ಎಷ್ಟು ಗೊತ್ತಾ? *ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಸೇರಿದ ಭಾರತೀಯರ ಬಗ್ಗೆ ಪ್ರಶ್ನೆ*"ಶೂನ್ಯ" ಎಂದು ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್*ಬಾಹ್ಯಾಕಾಶ ಅಭಿವೃದ್ಧಿಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ : ಸಿಂಗ್‌ ನವದೆಹಲಿ(ಡಿ. 03): ಕಳೆದ ಐದು ವರ್ಷಗಳಲ್ಲಿ ಯಾವುದೇ ಭಾರತೀಯ ಮೂಲದ ವಿಜ್ಞಾನಿಗಳು ( ) ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಂದ ಇಸ್ರೋಗೆ () ಸೇರಿಲ್ಲ ಮತ್ತು ಇದೇ ಅವಧಿಯಲ್ಲಿ ಇಸ್ರೋದ ಯಾವುದೇ ವಿಜ್ಞಾನಿಗಳು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಸೇರಲು ಭಾರತವನ್ನು ತೊರೆದಿಲ್ಲ ಎಂದು ಸರ್ಕಾರ ಬುಧವಾರ ತಿಳಿಸಿದೆ. ಲೋಕಸಭೆಯಲ್ಲಿ, ಬಾಹ್ಯಾಕಾಶ ಇಲಾಖೆ ಮತ್ತು ಪರಮಾಣು ಶಕ್ತಿ ಇಲಾಖೆಯ ( ) ರಾಜ್ಯ ಸಚಿವ ಜಿತೇಂದ್ರ ಸಿಂಗ್ ( ) ಅವರನ್ನು ಕಳೆದ ಐದು ವರ್ಷಗಳಲ್ಲಿ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಂದ ಇಸ್ರೋಗೆ ಸೇರಿದ ಭಾರತೀಯ ಮೂಲದ ವಿಜ್ಞಾನಿಗಳ ಸಂಖ್ಯೆ ಮತ್ತು ಅದೇ ಅವಧಿಯಲ್ಲಿ ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಸೇರಲು ಭಾರತವನ್ನು ತೊರೆದ ಇಸ್ರೋ ವಿಜ್ಞಾನಿಗಳ ಸಂಖ್ಯೆ ಕುರಿತು ಕೇಳಲಾಗಿತ್ತು. ಆದರೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪ್ರಶ್ನೆಗಳಿಗೆ "ಶೂನ್ಯ" ಎಂದು ಉತ್ತರಿಸಿದ್ದಾರೆ. ಅಂದರೆ ಕಳೆದ ಐದು ವರ್ಷಗಳಲ್ಲಿ ಯಾವುದೇ ಭಾರತೀಯ ಮೂಲದ ವಿಜ್ಞಾನಿಗಳು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಂದ ಇಸ್ರೋಗೆ ಸೇರಿಲ್ಲ ಮತ್ತು ಇದೇ ಅವಧಿಯಲ್ಲಿ ಇಸ್ರೋದ ಯಾವುದೇ ವಿಜ್ಞಾನಿಗಳು ವಿದೇಶಿ ಬಾಹ್ಯಾಕಾಶ ಸಂಸ್ಥೆಗಳಿಗೆ ಸೇರಲು ಭಾರತವನ್ನು ತೊರೆದಿಲ್ಲ ಅವರು ಸ್ಪಷ್ಟಪಡಿಸಿದ್ದಾರೆ. ಬಾಹ್ಯಾಕಾಶ ಅವಶೇಷಗಳಿಂದ ರಕ್ಷಿಸಲು ಕ್ರಮ! ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಾಹ್ಯಾಕಾಶ () ಇಲಾಖೆ/ಇಸ್ರೋ ಭಾರತೀಯ ಉಪಗ್ರಹಗಳನ್ನು ಬಾಹ್ಯಾಕಾಶ ಅವಶೇಷಗಳಿಂದ () ರಕ್ಷಿಸಲು ಕ್ರಮಗಳನ್ನು ಕೈ ಗೊಂಡಿದೆ. ಜತೆಗೆ ISROದ ಬಾಹ್ಯಾಕಾಶ ವಸ್ತುಗಳನ್ನು ನಿರ್ವಹಿಸಲು - ನಲ್ಲಿ ಬಾಹ್ಯಾಕಾಶ ಪರಿಸ್ಥಿತಿಯ ಅರಿವು ಮತ್ತು ನಿರ್ವಹಣೆಗಾಗಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ. ಬಾಹ್ಯಾಕಾಶ ಅವಶೇಷಗಳಿಂದ ಭಾರತೀಯ ಉಪಗ್ರಹಗಳಿಗೆ ಅಪಾಯದ ಮೌಲ್ಯಮಾಪನ ಮತ್ತು ನಿಕಟ ವಿಧಾನದ ವಿಶ್ಲೇಷಣೆಗಾಗಿ ಅತ್ಯಾಧುನಿಕ ಬಾಹ್ಯಾಕಾಶ ಅರಿವು ನಿಯಂತ್ರಣ ಕೇಂದ್ರವು ಪ್ರಸ್ತುತ ಬೆಂಗಳೂರಿನಲ್ಲಿ () ಕಾರ್ಯನಿರ್ವಹಿಸುತ್ತಿದೆ. ಘರ್ಷಣೆ ಅಪಾಯವನ್ನು ಗುರುತಿಸಿದಾಗಲೆಲ್ಲಾ ಇದು ಘರ್ಷಣೆ ತಪ್ಪಿಸುವ ತಂತ್ರಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಉಪಗ್ರಹಗಳಿಗೆ ಎನ್‌ಕ್ರಿಪ್ಶನ್ ಮತ್ತು ಅಥೆಂಟಿಕೇಶನ್ ಪ್ರೋಟೋಕಾಲ್‌! ಉಪಗ್ರಹಗಳಿಗೆ ಇತರರ ಪ್ರವೇಶವನ್ನು ತಡೆಗಟ್ಟಲು ತನ್ನ ಹಳೆಯ ಇನ್-ಆರ್ಬಿಟ್ ರಿಮೋಟ್ ಸೆನ್ಸಿಂಗ್ ( ) ಉಪಗ್ರಹಗಳಲ್ಲಿ ಸ್ಟ್ರಾಂಗ್ ಎನ್‌ಕ್ರಿಪ್ಶನ್ ( ) ಮತ್ತು ಅಥೆಂಟಿಕೇಶನ್ ಪ್ರೋಟೋಕಾಲ್‌ಗಳಂತಹ ‌ ( ) ಕ್ರಮಗಳನ್ನು ಇಸ್ರೋ ಜಾರಿಗೆ ತಂದಿದೆ ಎಂದು ಸಿಂಗ್ ಹೇಳಿದರು. ಉಪಗ್ರಹಗಳಿಂದ ಮಾಹಿತಿಯನ್ನು ನಿರಾಕರಿಸಲು (ಪೇಲೋಡ್ ಮತ್ತು ಸ್ಯಾಟಲೈಟ್ ಡೇಟಾ), ಡೈರೆಕ್ಷನಲ್ ಟ್ರಾನ್ಸ್‌ಮಿಷನ್ ಆಂಟೆನಾ, ಡಮ್ಮಿ ಡೇಟಾ ರವಾನೆ ( ) , ಭಾರತೀಯ ನಿಲ್ದಾಣಗಳಿಗೆ ಗೋಚರವಾಗದ ಪ್ರದೇಶಗಳಲ್ಲಿ ಮಾಹಿತಿಯನ್ನು ಸ್ವಿಚ್ ಆಫ್ ( ) ಮಾಡುವುದು ಇತ್ಯಾದಿ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಸಿಂಗ್‌ ತಿಳಿಸಿದ್ದಾರೆ. "ಭವಿಷ್ಯದ ಉಪಗ್ರಹಗಳಿಗೆ ಕಮಾಂಡ್ ಮತ್ತು ಮಾಹಿತಿಯ ಸ್ಟ್ರಾಂಗ್ ಎನ್‌ಕ್ರಿಪ್ಶನ್‌ನಂತಹ ಹೆಚ್ಚು ಸುಧಾರಿತ ಕ್ರಮಗಳನ್ನು ಯೋಜಿಸಲಾಗಿದೆ. ಎನ್‌ಕ್ರಿಪ್ಶನ್ ಹೊರತಾಗಿ, ಜಾಮಿಂಗ್ ಮತ್ತು ವಂಚನೆಯಿಂದ ( ) ಉಪಗ್ರಹಗಳನ್ನು ರಕ್ಷಿಸುವ ತಂತ್ರಗಳು ಭವಿಷ್ಯದ ಸಂವಹನ ಮತ್ತು ನ್ಯಾವಿಗೇಷನ್ ( ) ಉಪಗ್ರಹಗಳಲ್ಲಿ ಅನುಷ್ಠಾನಕ್ಕೆ ಅಭಿವೃದ್ಧಿ ಹಂತದಲ್ಲಿವೆ" ಎಂದು ಅವರು ಹೇಳಿದ್ದಾರೆ.