ದೇಶದಲ್ಲಿ ಪರಿಚಯಿಸುವ ಗುರಿ ಇಲ್ಲ ಎಂದ ಕೇಂದ್ರ ಸರ್ಕಾರ! ದೇಶದಲ್ಲಿ ಕ್ರಿಪ್ಟೋಕರೆನ್ಸಿಗೆ ಯಾವುದೇ ಮಾನ್ಯತೆ ಇರೋದಿಲ್ಲ ಆರ್ ಬಿಐಯ ಪೇಪರ್ ಕರೆನ್ಸಿಯೇ ಲೀಗಲ್ ಟೆಂಡರ್ ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನವದಹಲಿ (ಮಾ.15):ಸರ್ಕಾರವು ಕ್ರಿಪ್ಟೋಕರೆನ್ಸಿಯನ್ನು () ಪರಿಚಯಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ( ) ಮಂಗಳವಾರ ರಾಜ್ಯಸಭೆಗೆ ( ) ತಿಳಿಸಿದರು. ಪ್ರಸ್ತುತ, ಕ್ರಿಪ್ಟೋಕರೆನ್ಸಿಗಳು ಭಾರತದಲ್ಲಿ ಅನಿಯಂತ್ರಿತವಾಗಿವೆ ( ) ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ."ಆರ್‌ಬಿಐ () ಕ್ರಿಪ್ಟೋಕರೆನ್ಸಿಯನ್ನು ನೀಡುವುದಿಲ್ಲ. ಸಾಂಪ್ರದಾಯಿಕ ಕಾಗದದ ಕರೆನ್ಸಿಯು ಕಾನೂನುಬದ್ಧ ಟೆಂಡರ್ ಆಗಿದೆ ಮತ್ತು ಆರ್‌ಬಿಐ ಕಾಯಿದೆ, 1994 ರ ನಿಬಂಧನೆಗಳ ಪ್ರಕಾರ ಆರ್‌ಬಿಐನಿಂದ ನೀಡಲಾಗುತ್ತದೆ. ಸಾಂಪ್ರದಾಯಿಕ ಪೇಪರ್ ಕರೆನ್ಸಿಯ ಡಿಜಿಟಲ್ ಆವೃತ್ತಿಯನ್ನು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ," ಅವರು ಹೇಳಿದರು. ಆರ್ ಬಿಐ ಪ್ರಸ್ತುತ ಸಿಬಿಡಿಸಿ ಪರಿಚಯಕ್ಕಾಗಿ ಹಂತ ಹಂತದ ಅನುಷ್ಠಾನ ಕಾರ್ಯತಂತ್ರದ ಕಡೆಗೆ ಕೆಲಸ ಮಾಡುತ್ತಿದೆ ಮತ್ತು ಕಡಿಮೆ ಅಥವಾ ಯಾವುದೇ ಅಡ್ಡಿಯಿಲ್ಲದೆ ಕಾರ್ಯಗತಗೊಳಿಸಬಹುದಾದ ಬಳಕೆಯ ಪ್ರಕರಣಗಳನ್ನು ಪರಿಶೀಲಿಸುತ್ತಿದೆ ಎಂದು ಅವರು ಮತ್ತೊಂದು ಉತ್ತರದಲ್ಲಿ ತಿಳಿಸಿದ್ದಾರೆ.ಸಿಬಿಡಿಸಿ ( ) ಪರಿಚಯವು ನಗದು ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು, ಕಡಿಮೆ ವಹಿವಾಟು ವೆಚ್ಚಗಳಿಂದಾಗಿ ಹೆಚ್ಚಿನ ಸೆಗ್ನಿಯರೇಜ್ ಮುಂತಾದ ಗಮನಾರ್ಹ ಪ್ರಯೋಜನಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಕಳೆದ ಕೆಲವೊಂದು ವರ್ಷಗಳಿಂದ ನೋಟು ಮುದ್ರಣದ ಪ್ರಮಾಣ ಕೂಡ ಕಡಿಮೆಯಾಗಿದೆ. 2019-20ರ ಅವಧಿಯಲ್ಲಿ 4,378 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಲಾಗಿದ್ದರೆ, 2020-21ರಲ್ಲಿ 4,012 ಕೋಟಿ ರೂಪಾಯಿಗಳಿಗೆ ಇಳಿದಿದೆ ಎಂದು ಅವರು ಹೇಳಿದರು.ಈ ನಡುವೆ, ಪ್ರಸ್ತುತ ಕ್ರಿಪ್ಟೋಕರೆನ್ಸಿಗಳ ಮೇಲೆ ಬಿಲ್ ಒಂದು ಕೇಂದ್ರ ಸರ್ಕಾರದಲ್ಲಿ ಬಾಕಿ ಉಳಿದಿದೆ. ಅಧಿಕೃತ ಡಿಜಿಟಲ್ ಕರೆನ್ಸಿಯ ಕ್ರಿಪ್ಟೋಕರೆನ್ಸಿ ಮತ್ತು ನಿಯಂತ್ರಣ ಮಸೂದೆಯು ಭಾರತದಲ್ಲಿ ಎಲ್ಲಾ ಖಾಸಗಿ ಬಿಟ್ ಕಾಯಿನ್ ಗಳನ್ನು ಪಾವತಿ ವಿಧಾನವಾಗಿ ನಿಷೇಧಿಸುವ ಗುರಿಯನ್ನು ಹೊಂದಿದೆ. ಇದು ಆರ್ ಬಿಐ ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಸ್ಥಾಪಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಆಧಾರವಾಗಿ ಇರುವ ತಂತ್ರಜ್ಞಾನಗಳನ್ನು (ಬ್ಲಾಕ್ ಚೈನ್ ಮಾದರಿಯ ತಂತ್ರಜ್ಞಾನ) ಹೊರತುಪಡಿಸಿ ಮತ್ತೆಲ್ಲಾ ತಂತ್ರಜ್ಞಾನಕ್ಕೆ ನಿಷೇಧ ವಿಧಿಸಲಿದೆ. : ಇದು ಅಪಾಯಕಾರಿ: ಕ್ರಿಪ್ಟೋ ಜಾಹೀರಾತರಲ್ಲಿ ಎಚ್ಚರಿಕೆ ಸಂದೇಶ ಮುದ್ರಣ ಕಡ್ಡಾಯ!ಆದರೆ ಬ್ಲಾಕ್‌ಚೈನ್‌ನಂತಹ ಆಧಾರವಾಗಿರುವ ತಂತ್ರಜ್ಞಾನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು, ಅದಕ್ಕಾಗಿಯೇ ಬಿಲ್‌ ಜಾರಿ ವಿಳಂಬವಾಗಿದೆ. ಹೆಚ್ಚು ಸಮಗ್ರವಾದ ಸಮಾಲೋಚನೆಗಳೊಂದಿಗೆ ಮಸೂದೆಗೆ ಸುಧಾರಣೆಗಳನ್ನು ನೀಡುವ ಮೂಲಕ ಭಾರತವನ್ನು ಬ್ಲಾಕ್‌ಚೈನ್ ತಂತ್ರಜ್ಞಾನದ ಮುಂಚೂಣಿಗೆ ಕೊಂಡೊಯ್ಯಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಒಂದು ವರ್ಷದಿಂದ ಬಿಲ್ ಕುರಿತಾದ ಕೆಲಸ ನಡೆಯುತ್ತಿದೆ. ಚಳಿಗಾಲದ ಅಧಿವೇಶನಕ್ಕಾಗಿ ಮಸೂದೆಯನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಈ ಅಧಿವೇಶನ 2021ರ ಡಿಸೆಂಬರ್ 23 ರಂದು ಕೊನೆಗೊಂಡಿತಾದರೂ ಬಿಲ್ ಅನ್ನು ಮಂಡನೆ ಮಾಡಿರಲಿಲ್ಲ. ಕೇಂದ್ರ ಸಂಪುಟ ಅನುಮೋದನೆ ನೀಡಿದ ನಂತರ ಮಸೂದೆಯ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಕ್ರಿಪ್ಟೋಕರೆನ್ಸಿ ಭಾರತದ ಆರ್ಥಿಕ ಸ್ಥಿರತೆಗೆ ಅಪಾಯಕಾರಿ: ಗವರ್ನರ್ ಶಕ್ತಿಕಾಂತ ದಾಸ್!ಇದಕ್ಕೂ ಮುನ್ನ ಕೇಂದ್ರ ಸಚಿವ ಭಾಗವತ್ ಕರದ್ ( ) ಕೂಡ ಇದೇ ಮಾತನ್ನು ಹೇಳಿದ್ದರು. ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧವಾಗಿಲ್ಲ ಮತ್ತು ಭವಿಷ್ಯದಲ್ಲಿ ಈ ವಿಭಾಗದಲ್ಲಿ ಏನಾಗಬಹುದು ಎಂಬುದರ ಕುರಿತು ಸದ್ಯಕ್ಕೆ ಏನನ್ನೂ ಹೇಳಲಾಗುವುದಿಲ್ಲ ಎಂದಿದ್ದರು. ಕೇಂದ್ರ ಸರ್ಕಾರವು ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ರೀತಿಯ ಮನ್ನಣೆಯನ್ನು ನೀಡಿಲ್ಲ ಮತ್ತು ಆದ್ದರಿಂದ, ಪ್ರಸ್ತುತ ದೇಶದಲ್ಲಿ ಅವು ಕಾನೂನುಬದ್ಧವಾಗಿಲ್ಲ ಎಂದಿದ್ದರು. ಭವಿಷ್ಯದಲ್ಲಿ ಇದನ್ನು ಕಾನೂನುಬದ್ಧಗೊಳಿಸಬಹುದೇ ಅಥವಾ ಇಲ್ಲವೇ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ, ಕೇಂದ್ರ ಬಜೆಟ್‌ನಲ್ಲಿ ವಹಿವಾಟುಗಳಿಗೆ (ಅವುಗಳಿಗೆ ಸಂಪರ್ಕ ಹೊಂದಿದ) 30 ಪ್ರತಿಶತ ತೆರಿಗೆಯನ್ನು ಪ್ರಸ್ತಾಪಿಸಲಾಗಿದೆ, ” ಎಂದು ಕರದ್ ಹೇಳಿದ್ದರು.