| ಉದ್ಯೋಗಿಗಳಿಗೆ ಗುಡ್‌ನ್ಯೂಸ್: ಕೆಲಸ ಬದಲಾವಣೆ ವೇಳೆ ಇನ್ನು ಚಿಂತೆ ಇಲ್ಲ! * ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿಯಲ್ಲಿ ಮಹತ್ವದ ನಿರ್ಧಾರ * ಕೇಂದ್ರೀಕೃತ ಐಟಿ ಸಿಸ್ಟಂಗೆ ಅನುಮೋದನೆ * ಉದ್ಯೋಗಿಗಳಿಗೆ ಬಿಗ್ ರಿಲೀಫ್ ನವದೆಹಲಿ(ನ.21): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ () ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ದೊಡ್ಡ ಘೋಷಣೆಯನ್ನು ಮಾಡಲಾಗಿದೆ, ಮಾಹಿತಿಯ ಪ್ರಕಾರ, ಪ್ರಾವಿಡೆಂಟ್ ಫಂಡ್ ಖಾತೆಯ ( ) ಕೇಂದ್ರೀಕೃತ ಐಟಿ ಸಿಸ್ಟಂಗೆ ಅನುಮೋದನೆ ನೀಡಲಾಗುತ್ತದೆ. ಇದರಿಂದ ಇಪಿಎಫ್ ಖಾತೆಯ ವ್ಯವಸ್ಥೆಯು ಹೊಂದಿರುವವರ ದೊಡ್ಡ ತಲೆನೋವು ಕೊನೆಯಾಗಲಿದೆ. ಇದರರ್ಥ ಇಪಿಎಫ್ ಖಾತೆದಾರರು ಎಷ್ಟೇ ಉದ್ಯೋಗಗಳನ್ನು ಬದಲಾಯಿಸಿದರೂ, ಅವರ ಇಪಿಎಫ್ ಖಾತೆ ಒಂದೇ ಆಗಿರುತ್ತದೆ, ಕೆಲಸವನ್ನು ಬದಲಾಯಿಸಿದಾಗ, ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಇಪಿಎಫ್ ಖಾತೆ ಸ್ವಯಂಚಾಲಿತವಾಗಿ ವಿಲೀನಗೊಳ್ಳುತ್ತದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಕೆಲಸದ ಅಗತ್ಯವಿರುವುದಿಲ್ಲ. ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ಇಪಿಎಫ್‌ಒ ಕೇಂದ್ರೀಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಳೆಯ ಖಾತೆಯನ್ನೇ ಮುಂದುವರಿಸಬಹುದು ಕೇಂದ್ರ ಸರ್ಕಾರದ ( ) ನಿಯಮದ ಪ್ರಕಾರ, ಉದ್ಯೋಗಿ () ಬಯಸಿದಲ್ಲಿ, ಹೊಸ ಕಂಪನಿಯಲ್ಲಿಯೂ ಹಳೆಯ ಖಾತೆಯನ್ನು ಮುಂದುವರಿಸಬಹುದು ಎಂಬ ಆಯ್ಕೆ ಇರುತ್ತದೆ. ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಇದಕ್ಕಾಗಿ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ರಚಿಸಲು ಅನುಮೋದಿಸಿದೆ. ಖಾಸಗಿ ವಲಯದಲ್ಲಿ ಉದ್ಯೋಗಿಗಳು ಉದ್ಯೋಗಗಳನ್ನು ಬದಲಾಯಿಸುತ್ತಲೇ ಇರುತ್ತಾರೆ. ಈ ಸಮಯದಲ್ಲಿ, ಅವರಇಪಿಎಫ್ ಖಾತೆಗೆ ( )ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ. ಯಾವುದೇ ಒಂದು ಸಂಸ್ಥೆಯ ಸಣ್ಣ ಲೋಪದಿಂದಾಗಿ, ಖಾತೆದಾರರ ಹಣವು ಸಿಲುಕಿಕೊಳ್ಳುತ್ತದೆ. ಮೊತ್ತವನ್ನು ಆಟೋ ವ್ಯವಸ್ಥೆಯಿಂದ ವರ್ಗಾಯಿಸಲಾಗುತ್ತದೆ ಹೊಸ ವ್ಯವಸ್ಥೆ ಬಂದ ನಂತರ ಆಟೊ ವ್ಯವಸ್ಥೆಯ ಮೂಲಕ ಹಳೆಯ ಕಂಪನಿಯಿಂದ ಹೊಸ ಕಂಪನಿಗೆ ಖಾತೆ ವರ್ಗಾವಣೆಯಾಗಲಿದೆ ( ). ಈಗ ಉದ್ಯೋಗಿಯು ಉದ್ಯೋಗವನ್ನು ಬದಲಾಯಿಸಿದ ನಂತರ ಮೊದಲ ಕಂಪನಿಯ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸುವ ಅಗತ್ಯವಿಲ್ಲ, ಅಂದರೆ ಕೆಲಸ ಬದಲಾಯಿಸಿದ ನಂತರ ಹಳೆಯ ಇಪಿಎಫ್ ಖಾತೆ ಮತ್ತು ಹೊಸ ಇಪಿಎಫ್ ಖಾತೆ ಸ್ವಯಂಚಾಲಿತವಾಗಿ ವಿಲೀನಗೊಳ್ಳುತ್ತದೆ. ಉದ್ಯೋಗಿಗಳ ಒತ್ತಡಕ್ಕೆ ಕೊನೆ ಈಗಿನ ಪರಿಸ್ಥಿತಿಯಲ್ಲಿ ಹಳೆ ಕಂಪನಿ ಬಿಟ್ಟು ಹೊಸ ಕಂಪನಿ ಸೇರಲು ಕೆಲವು ಪೇಪರ್ ಅಥವಾ ಆನ್ ಲೈನ್ ಔಪಚಾರಿಕತೆಗಳನ್ನು ಮಾಡಬೇಕಾಗುತ್ತದೆ. ಹೊಸ ಕಂಪನಿಯಲ್ಲಿ, ಮೊದಲಿನUAN ನಲ್ಲಿಯೇಎರಡನೇ ಖಾತೆಯನ್ನು ರಚಿಸಲಾಗಿದೆ, ಈ ಖಾತೆಯಲ್ಲಿ ಪೂರ್ಣ ಮೊತ್ತವನ್ನು ತೋರಿಸಲಾಗುವುದಿಲ್ಲ. ಹೊಸ ವ್ಯವಸ್ಥೆಯ ಅನುಷ್ಠಾನದ ನಂತರ, ಉದ್ಯೋಗಿಗಳು ತಮ್ಮ ಇಪಿಎಫ್ ಖಾತೆಯಲ್ಲಿ ಪ್ರತಿ ಐಟಂನ ಮೊತ್ತವನ್ನು ನೋಡಲು ಸಾಧ್ಯವಾಗುತ್ತದೆ. ಇಪಿಎಫ್‌ಗೆ ಹೊಂದಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್ 2020​​-21ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿಯ ( ) ಖಾತೆಗೆ ಶೇ.8.5ರಷ್ಟು ಬಡ್ಡಿ () ನೀಡಲು ಕೇಂದ್ರ ಸರ್ಕಾರ ( ) ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ 3 ವರ್ಷ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮುಂದುವರಿಕೆ! ಸರ್ಕಾರದ ಈ ಕ್ರಮವು ಭವಿಷ್ಯ ನಿಧಿ ಸಂಸ್ಥೆಯ ( ) 5 ಕೋಟಿ ಚಂದಾದಾರರಿಗೆ ದೀಪಾವಳಿ () ಉಡುಗೊರೆಯಾಗಿದೆ. 2020-21ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಖಾತೆಗಳಿಗೆ () ಬಡ್ಡಿ ಹಣ ಮಂಜೂರು ಮಾಡುವ ನಿರ್ಧಾರವನ್ನು ಆರ್ಥಿಕ ಇಲಾಖೆ ಕೈಗೊಂಡಿದ್ದು, ಇದು 5 ಕೋಟಿ ಇಪಿಎಫ್‌ () ಚಂದಾದಾರರ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆದರೆ ಇಪಿಎಫ್‌ () ಮೇಲಿನ ಶೇ.8.5ರಷ್ಟು ಬಡ್ಡಿಯು ಕಳೆದ 7 ವರ್ಷಗಳ ಕನಿಷ್ಠವಾಗಿದೆ. 2018-19ರಲ್ಲಿ ಶೇ.8.65ರಷ್ಟಿದ್ದ ಇಪಿಎಫ್‌ ಮೇಲಿನ ಬಡ್ಡಿಯನ್ನು () 2019-20ರ ಅವಧಿಯಲ್ಲಿ ಶೇ.8.5ಕ್ಕೆ ಇಳಿಸಲಾಗಿತ್ತು.