ಆಸ್ಪತ್ರೆಯಿಂದ ಮಮತಾ ಸಂದೇಶ, ಡ್ರೆಸ್ ಬದಲಾಯಿಸಲು ನಟಿ ಹರಸಾಹಸ; ಮಾ.11ರ ಟಾಪ್ 10 ಸುದ್ದಿ! ಮಮತಾ ಬ್ಯಾನರ್ಜಿ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಇತ್ತ ಟಿಎಂಸಿ ಹಾಗೂ ಬಿಜೆಪಿ ಬೆಂಬಲಿಗರ ಜಗಳ ತಾರಕಕ್ಕೇರಿದೆ. ಇದರ ನಡುವೆ ಮಮತಾ ಸಂದೇಶವೊಂದನ್ನು ರವಾನಿಸಿದ್ದಾರೆ. ಸಿಎಸ್‌ಕೆ ತಂಡದ ಬ್ರ್ಯಾಂಡ್ ವ್ಯಾಲ್ಯೂ ಭಾರಿ ಕುಸಿತಗೊಂಡಿದೆ. ಕಾರಿನಲ್ಲಿ ಡ್ರೆಸ್ ಚೇಂಜ್ ಮಾಡಲು ನಟಿ ಹರಸಾಹಸಪಟ್ಟಿದ್ದಾರೆ. ಕರ್ನಾಟಕದಲ್ಲಿ ರಾಬರ್ಟ್ ಅಬ್ಬರ, ಶ್ರೀರಾಮುಲುಗೆ ಹುಟ್ಟಿಕೊಂಡ ಅನುಮಾನ ಸೇರಿದಂತೆ ಮಾರ್ಚ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. ಶಾಂತಿ ಕಾಪಾಡಿ, ವ್ಹೀಲ್‌ ಚೇರ್‌ನಲ್ಲಿದ್ದೇ ಚುನಾವಣೆ ಎದುರಿಸ್ತೀನಿ: ಜನತೆಗೆ ಮಮತಾ ಸಂದೇಶ!... ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ| ನಾಮಪತ್ರ ಸಲ್ಲಿಸುವ ವೇಳೆ ಹಲ್ಲೆ ನಡೆಸಿದ ನಾಲ್ಕೈದು ಮಂದಿ| ಮಮತಾ ಬ್ಯಾನರ್ಜಿ ಕಾಲು, ಕುತ್ತಿಗೆಗೆ ಗಾಯ| ಆಸ್ಪತ್ರೆಯಿಂದಲೇ ಮಮತಾ ವಿಡಿಯೋ ಸಂದೇಶ ಐಪಿಎಲ್ 2021: ಚೆನ್ನೈ ಸೂಪರ್‌ಕಿಂಗ್ಸ್‌ ಬ್ರ್ಯಾಂಡ್‌ ಮೌಲ್ಯ ಭಾರೀ ಕುಸಿತ!... 13ನೇ ಆವೃತ್ತಿಯ ಐಪಿಎಲ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಸಾಕಷ್ಟು ಕುಸಿತ ಕಂಡಿದೆ. ಕೊವಿಡ್ ಲಸಿಕೆ ಪಡೆದ ಮೋದಿ ತಾಯಿ; ಅರ್ಹರು ವ್ಯಾಕ್ಸಿನ್ ಹಾಕಿಸಲು ಪ್ರಧಾನಿ ಮನವಿ!... ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ಕೊರೋನಾ ಲಸಿಕೆ ಪಡೆದಿದ್ದಾರೆ. ಇಂದಿನಿಂದ ರಾಬರ್ಟ್‌ ಹವಾ: ಕನ್ನಡ ಚಿತ್ರರಂಗದಲ್ಲಿ ನವೋತ್ಸಾಹ!... ನಟ ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾ ಗುರುವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಒಂದೇ ದಿನ 1,596 ಚಿತ್ರಮಂದಿರಗಳಲ್ಲಿ 3889 ಪ್ರದರ್ಶನ ಕಾಣಲಿದೆ. ಈ ಮೂಲಕ ಲಾಕ್‌ಡೌನ್‌ ನಂತರ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಪ್ರಮುಖ ಸಿನಿಮಾ ಎನಿಸಿಕೊಂಡಿದೆ. ಮಾಡೆಲಿಂಗ್‌ಗೆ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು : ಮೂವರು ಅರೆಸ್ಟ್... ಮಾಡೆಲಿಂಗ್‌ಗಾಗಿ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಯುವತಿ ಗೆಳೆಯರೆನ್ನಲಾದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹೊಚ್ಚ ಹೊಸ ಅಪಾಚೆ 160 4V ಬೈಕ್ ಬಿಡುಗಡೆ!... ಮೋಟರ್ ಕಂಪನಿಯಿಂದ ನೂತನ ಅಪಾಚೆ 160 4V ಬಿಡುಗಡೆ ಮಾಡಿದೆ. 17.63 ನಲ್ಲಿಯೇ ಅತ್ಯುತ್ತಮ ಸಾಮಥ್ರ್ಯ ಹೊಂದಿದೆ. ಹೊಚ್ಚ ಹೊಸ ಅಪಾಚೆ 160 4V ಬೈಕ್ ವಿಶೇಷತೆ ಏನು? ಕಾರ್‌ನಲ್ಲಿ ಡ್ರೆಸ್ ಚೇಂಜ್ ಮಾಡೋಕೆ ಒದ್ದಾಡಿದ ನಟಿ... ಇತ್ತೀಚೆಗೆ ನಟಿ ಫ್ಯಾಷನ್ ಡ್ರೆಸ್ ಧರಿಸಿ ಕಾರಿನಲ್ಲಿಯೇ ಜೀನ್ಸ್ ರಿಮೂವ್ ಮಾಡಲು ಒದ್ದಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ನೋಡೋಕೆ ಫನ್ನಿ ಅನಿಸಿದರೂ ನಟಿಯ ಬ್ಯುಸಿ ಲೈಪ್ ಇದು ಎಂದು ತೋರಿಸಿ ಕೊಡುತ್ತೆ. ಸರ ಸರ ಪಡಿತರ.. 'ಒನ್ ನೇಷನ್, ಒನ್ ರೇಷನ್ ‌'..ಯಾರಿಗೆಲ್ಲ ಲಾಭ?... ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಜಾರಿಗೆ ತರುವ ಉದ್ದೇಶ ಮಹತ್ವದ ಯೋಜನೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್‌' ಗೆ ಸಂಬಂಧಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೋಷಣೆಯನ್ನು ಕೇಂದ್ರ ಬಜೆಟ್ ನಲ್ಲಿ ಮಾಡಿದ್ದರು. ಸಿಡಿ ಹಿಂದೆ ಇವರಿದ್ದಾರೆ! ಶ್ರೀರಾಮುಲುಗೆ ದೊಡ್ಡ ಅನುಮಾನ... ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಶ್ರೀರಾಮುಲುಗೆ ಕಾಂಗ್ರೆಸ್ ಮೇಲೆ ಅನುಮಾನವಂತೆ/ ಬಳ್ಳಾರಿಯಲ್ಲಿ ಸಿಡಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು/ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ/ ಇದೊಂದು ಪೋಲಿಟಿಕಲ್ ಷಡ್ಯಂತ್ರ ಟ್ಯಾಲೆಂಟ್ ವೇಸ್ಟ್ ಆಗ್ಬಾರ್ದು: ರೈಫಲ್ ಗಿಫ್ಟ್ ಕೊಟ್ಟ ನಟ ಸೋನು... ರಾಜ್ಯಮಟ್ಟದ ರೈಫಲ್ ಶೂಟಿಂಗ್ ಚಾಂಪಿಯನ್ ಕೊನಿಕಾ ಲಾಯಕ್ಗೆ ಬಾಲಿವುಡ್ ನಟ ಸೋನು ಸೂದ್ ರೈಫಲ್ ಗಿಫ್ಟ್ ಮಾಡಿದ್ದಾರೆ.