ಪಕ್ಷ ಸೇರಿದ 2 ವಾರಕ್ಕೆ ಕ್ಯಾಂಡಿಡೇಟ್, ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್: ಮಾ.4ರ ಟಾಪ್ 10 ಸುದ್ದಿ! 2 ವಾರಗಳ ಹಿಂದೆ ಬಿಜೆಪಿ ಪಕ್ಷ ಸೇರಿದಂತೆ ಮೆಟ್ರೋಮ್ಯಾನ್ ಖ್ಯಾತಿಯ ಇ ಶ್ರೀಧರನ್ ಅವರನ್ನು ಕೇರಳ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಲಾಕ್‌ಡೌನ್ ಸಮಯದಲ್ಲಿ ಜನರು ಅತೀ ಹೆಚ್ಚು ವೀಕ್ಷಿಸಿದ ವ್ಯಕ್ತಿ ಮೋದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸ್ಸಾಂ ಬಚಾವ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಕಾಂಗ್ರೆಸ್, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿರುವುದು ಯಾರು? ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. ಕೇರಳ ಎಲೆಕ್ಷನ್, ಸಿಎಂ ಗಾದಿಗೆ ಅಚ್ಚರಿಯ ಅಭ್ಯರ್ಥಿ ಘೋಷಿಸಿದ ಬಿಜೆಪಿ!... ಕೇರಳ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದ ಬಿಜೆಪಿ| ಮೆಟ್ರೋ ಮ್ಯಾನ್‌ಗೆ ಸಿಎಂ ಆಗುವ ಅವಕಾಶ| ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದ ಇ. ಶ್ರೀಧರನ್ ತೈವಾನ್ ಫೋಟೋ ಹಾಕಿ ಅಸ್ಸಾಂ ಬಚಾವೋ ಎಂದು ಪೇಚಿಗೆ ಸಿಲುಕಿದ ಕಾಂಗ್ರೆಸ್!... ಬಿಜೆಪಿ ಆಡಳಿತದ ವಿರುದ್ಧ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಕಾಂಗ್ರೆಸ್, ಮುಂಬರುವ ವಿಧಾನ ಸಭಾ ಚನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಹೀಗಾಗಿ ರೋಡ್ ಶೋ, ಸಮಾರಂಭ ಸೇರಿದಂತೆ ಹಲವು ಕಸರತ್ತು ಮಾಡುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದೆ. ಆದರೆ ಬಹದೊಡ್ಡ ಎಡವಟ್ಟು ಮಾಡಿಕೊಂಡಿದೆ. ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಬ್ಯಾಲೆನ್ಸ್ ತಿಳಿಯಲು ಹೀಗ್ಮಾಡಿ!... ಭವಿಷ್ಯ ನಿಧಿ ಮಂಡಳಿಯ ಸಭೆಯಲ್ಲಿ ಕಾರ್ಮಿಕ ಸಚಿವಾಲಯವು 2020-2021ನೇ ವರ್ಷದ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರವನ್ನು ಶೇ.8.5ರಷ್ಟು ನಿಗಧಿಗೊಳಿಸಿದೆ. ಇದು ಕಳೆದ ವರ್ಷದ ಬಡ್ಡಿ ದರಕ್ಕೆ ಸಮನಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಪಿಎಫ್‌ ಬಡ್ಡಿ ಕಡಿತಗೊಳಿಸುತ್ತದೆ ಎಂಬ ಭೀತಿ ನಿವಾರಣೆಯಾಗಿದೆ. ಸ್ಕೂಲ್‌ನಲ್ಲಿ ವಿದ್ಯಾರ್ಥಿನಿ ಜೊತೆ ಸರಸ: ತನ್ನದೇ ಸೆಕ್ಸ್ ವಿಡಿಯೋ ಶೂಟ್ ಮಾಡಿದ ನಟ... ಶಾಲೆಯ ಬಾತ್ರೂಂನಲ್ಲಿ ವಿದ್ಯಾರ್ಥಿನಿ ಜೊತೆ ಸೆಕ್ಸ್ ಮಾಡಿ, ತನ್ನದೇ ಸೆಕ್ಸ್ ವಿಡಿಯೋವನ್ನು ತಾನೇ ಶೂಟ್ ಮಾಡಿದ ನಟ ಈಗ ಸಂಕಷ್ಟಕ್ಕೊಳಗಾಗಿದ್ದಾನೆ. 2020ರಲ್ಲಿ ದೇಶದ ಟೀವಿಗಳಲ್ಲಿ ಪ್ರಧಾನಿ ಮೋದಿ ದರ್ಬಾರ್‌! ... ಕೊರೋನಾ ವೈರಸ್‌ ಅಬ್ಬರ, 40 ದಿನಗಳ ಲಾಕ್‌ಡೌನ್‌, ಹಂತಹಂತದ ಅನ್‌ಲಾಕ್‌ ವೇಳೆ ದೇಶದ ಜನರು ಟೀವಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಕ್ಷರ್ ಪಟೇಲ್‌ ಮ್ಯಾಜಿಕ್‌; ಇಂಗ್ಲೆಂಡ್ ಆಲೌಟ್‌ @205... ಟೀಂ ಇಂಡಿಯಾ ಸ್ಪಿನ್‌ ಜಾಲಕ್ಕೆ ಮತ್ತೊಮ್ಮೆ ಕಂಗಾಲಾದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ ಕೇವಲ 205 ರನ್‌ಗಳಿಗೆ ಆಲೌಟ್‌ ಆಗಿದೆ. ಭಾರತದ ಸ್ಪಿನ್ನರ್‌ಗಳು 8 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ ನಿಧಿ ಸುಬ್ಬಯ್ಯ ಬದಲು ಮನೆಯಿಂದ ಹೊರ ಬರುತ್ತಿದ್ದಾರೆ ಶುಭಾ ಪೂಂಜಾ; ಇದು ಪಕ್ಕಾ ಗೇಮ್!... 'ನಾಮಿನೇಶನ್ ವಾರ್ಗಾವಣೆ' ಸ್ನೇಹಿತೆಯ ಬೆಂಬಲವಾಗಿ ನಿಂತ ಶುಭ ಪೂಂಜಾನೇ ಮೊದಲ ವಾರ ಮನೆಯಿಂದ ಹೊರ ಬರುತ್ತಿದ್ದಾರೆ? ಯಾರು ಈ ದಿನೇಶ್ ಕಲ್ಲಹಳ್ಳಿ? ರಮೇಶ್‌ಗೆ ಮಾತ್ರ ಅಲ್ಲ ಡಿಕೆಶಿಗೂ ಕಾಡಿದ್ದರು!... ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸೆಕ್ಸ ವಿಡಿಯೋ ಬಹಿರಂಗ ಮಾಡಿ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಮಾಡಿದ ದಿನೇಶ್ ಕಲ್ಲಹಳ್ಳಿ ಯಾರು? ಸಹಜವಾಗಿಯೇ ಈ ಪ್ರಶ್ನೆ ಇಡೀ ರಾಜ್ಯದ ಜನರನ್ನು ಕಾಡುತ್ತಿದೆ ಕ್ರೆಡಿಟ್ ಕಾರ್ಡ್‌ಗೂ ಕನ್ನ, ಲಕ್ಷ ಕಳೆದುಕೊಂಡ ವಕೀಲ... ಇಂಥ ಸಂದೇಶ ಬಂದ್ರೆ ಜೋಕೆ!... ಲಾಯರ್‌ ಗೆ ಕ್ರೆಡಿಟ್ ಕಾರ್ಡ್ ಮೋಸ/ ಒಂದು ಲಕ್ಷ ರೂ ಕಳೆದುಕೊಂಡರು/ ಈ ರೀತಿಯ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ತೆರೆಯಬೇಡಿ/ ಡೆಬಿಟ್ ಕಾರ್ಡ್ ಗೆ ಕನ್ನ ಹಾಕುತ್ತಿದ್ದವರು ಈಗ ಕ್ರೆಡಿಟ್ ಕಾರ್ಡ್ ಗುರಿ ಮಾಡಿಕೊಂಡಿದ್ದಾರೆ 5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ ಕಾರು ಬಿಡುಗಡೆ!... ಹೊಚ್ಚ ಹೊಸ ಟಿಯಾಗೋ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನೂತನ ಟಿಯಾಗೋ ಕಾರು ಬಿಡುಗಡೆಯಾಗಿದೆ.