ಬಿಜೆಪಿ ಸೇರಿದ ನಟಿ ಶ್ರಬಂತಿ, ಇಂಧನ ದರ ಇಳಿಕೆಗೆ ಕೇಂದ್ರ ಸಮ್ಮತಿ? ಮಾ.2ರ ಟಾಪ್ 10 ಸುದ್ದಿ! ಮೂರು ಮದುವೆಯಾಗಿ ಮೂರು ಡಿವೋರ್ಸ್ ಆಗಿರುವ ನಟಿ ಶ್ರಂಬತಿ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ರಾಹುಲ್ ಗಾಂದಿ ಪುಶಪ್ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕೇಂದ್ರ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮೋದಿ ನಿಜವಾದ ನಾಯಕ ಎಂದ ಇನ್ಫಿ ನಾರಾಯಣಮೂರ್ತಿ, ಹಾಕಿದ್ದೇ ತುಂಡುಗೆ, ಅದರಲ್ಲಿ ಬರೇ ತೂತು ಸೇರಿದಂತೆ ಮಾರ್ಚ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. 3 ಮದುವೆ, ಮೂರು ಡೈವೋರ್ಸ್, ಒಂದು ಮಗುವಿನ ತಾಯಿ: ಬಿಜೆಪಿಗೆ ನಟಿ ಶ್ರಬಂತಿ ಚಟರ್ಜಿ!... ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿನ ಖ್ಯಾತ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಮಿಳ್ನಾಡಲ್ಲಿ ರಾಹುಲ್‌ ಪುಶಪ್‌, ಕುಸ್ತಿ, ಡ್ಯಾನ್ಸ್‌: ವಿದ್ಯಾರ್ಥಿಗಳ ಜೊತೆ ವಿನೋದ!... ಕೇರಳದಲ್ಲಿ ಮೀನುಗಾರರ ಜೊತೆಗೆ ಸಮುದ್ರಕ್ಕೆ ಜಿಗಿದು ಈಜಿದ ನಂತರ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ಪುಶ್‌ ಅಫ್ಸ್‌, ಕುಸ್ತಿ ಹಾಗೂ ಡ್ಯಾನ್ಸ್‌ ಮಾಡಿರುವುದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ತಾನೊಬ್ಬ ನಿಜವಾದ ನಾಯಕನೆಂದು ಮೋದಿ ತೋರಿಸಿಕೊಟ್ಟರು: ನಾರಾಯಣ ಮೂರ್ತಿ... ಪತ್ನಿ ಸುಧಾ ಮೂರ್ತಿ ಜೊತೆ ಕೊರೋನಾ ಲಸಿಕೆ ಪಡೆದುಕೊಂಡ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ| ದೇಶದಲ್ಲಿ ಎರಡನೇ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭ| ತಾನೊಬ್ಬ ನಿಜವಾದ ನಾಯಕನೆಂದು ಮೋದಿ ತೋರಿಸಿಕೊಟ್ಟಿದ್ದಾರೆ ಕೊರೋನಾ ಲಸಿಕೆ ಪಡೆದ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ!... ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮೊದಲ ಡೋಸ್ ಪಡೆದಿದ್ದಾರೆ. ಇದೀಗ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಲಸಿಕೆ ಪಡೆದಿದ್ದಾರೆ. ಹಾಕಿದ್ದೇ ತುಂಡುಡುಗೆ, ಅದರಲ್ಲೂ ತೂತುಗಳು: ಮೌನಿಯ ಹೊಸ ಲುಕ್ ಇದು... ಬಾಲಿವುಡ್ ನಟಿ ಮೌನಿ ರಾಯ್ ಫ್ಯಾಷನ್ ಎಲ್ಲರಿಗೂ ಇಷ್ಟ. ಈ ಸಾರಿ ನಟಿಯ ಉಡುಗೆ ನೋಡಿ.. ಬರೀ ತೂತುಗಳೇ ‌ 8: ಶುಭಾ ಪೂಂಜಗೆ ಟಾಯ್ಲೆಟ್ ಚಿಂತೇನಾ? ಯಾರೂ ಇಂಥ ಪ್ರಶ್ನೆ ಕೇಳಿರಲಿಲ್ಲ ಅಂದ್ರು ಸುದೀಪ್!... ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಟಿ ಶುಭಾ ಪೂಂಜಾ ಅವರ ಇಂಟ್ರೊಡಕ್ಷನ್ ಸೀನೇ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿತು. ಇಷ್ಟಕ್ಕೂ ಶುಭಾ ಹೇಳಿದ್ದೇನು? ತೆರಿಗೆ ಕಡಿತ ಮಾಡಿ ಪೆಟ್ರೋಲ್‌, ಡೀಸೆಲ್‌ ದರ ಇಳಿ​ಕೆ?... ದೇಶಾ​ದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳ ಭಾರೀ ಏರಿ​ಕೆ​ಯಿಂದ ಜನ ಕಂಗೆ​ಟ್ಟಿ​ರುವ ಬೆನ್ನಲ್ಲೇ, ಶುಭ ಸುದ್ದಿ​ಯೊಂದನ್ನು ನೀಡಲು ಕೇಂದ್ರ ಸರ್ಕಾರ ಕಾರ್ಯ​ಪ್ರ​ವೃ​ತ್ತ​ವಾ​ಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರ​ಗಳ ಮೇಲಿನ ತೆರಿ​ಗೆ​ಗ​ಳನ್ನು ಕಡಿ​ತ​ಗೊ​ಳಿಸಿ, ಆ ಮೂಲಕ ಈ ಎರಡೂ ಇಂಧ​ನ​ಗಳ ಬೆಲೆ​ಗಳ ಇಳಿ​ಕೆಗೆ ಕೇಂದ್ರ ಸರ್ಕಾರ ನಿರ್ಧ​ರಿ​ಸಿದೆ. ಕಾಶಿಯಲ್ಲಿ ಗೋಲ್ಗಪ್ಪ ತಿನ್ನುತ್ತಿರುವ ಕೇಂದ್ರ ಸಚಿವೆಯ ಫೋಟೋ ವೈರಲ್‌!... ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾರಣಾಸಿಗೆ ಭೇಟಿ ನೀಡಿದ್ದರು. ಬಿಜೆಪಿ ಸಭೆ ನಂತರ ಅವರು ತಮ್ಮ ನೆಚ್ಚಿನ ಚಾಟ್ ಅಂಗಡಿಗೆ ಭೇಟಿ ಕೊಟ್ಟು ಗೋಲ್ಗಪ್ಪಾ ತಿಂದರು. ಅವರನ್ನು ನೋಡಲು ಜನರ ಗುಂಪೇ ಸೇರಿತ್ತು. BBK8: ಟಿಕ್‌ಟಾಕ್‌ ಮಾಡೋದೇ ಟ್ಯಾಲೆಂಟ್‌, ಹಿಗ್ಗಾಮುಗ್ಗ ಟ್ರೋಲ್‌ ಆಗುತ್ತಿರುವ ಸ್ಪರ್ಧಿಗಳು!... ಸೀಸನ್‌ 8 ಯಾರಿಗೋಸ್ಕರ ನೋಡಬೇಕು? ಗೊತ್ತಿರುವವರು, ಗೊತ್ತಿಲ್ಲದವರನ್ನು ಒಟ್ಟಿಗೆ ನೋಡಬೇಕಾ? ಇoದೊಂದು ಜಾತ್ರೆ ಎಂದ ಟ್ರೋಲಿಗರು.... ಉತ್ಖನನದ ವೇಳೆ ಸಿಕ್ತು ಪ್ರಾಣಿಗಳ ಸ್ಮಶಾನ: 2 ಸಾವಿರ ವರ್ಷ ನೆಲದಡಿ ಅಡಗಿತ್ತು ರಹಸ್ಯ!... ಪುರಾತತ್ವ ಇಲಾಖೆಯವರು ಉತ್ಖನನದ ವೇಳೆ ಹಳೆಯ ನಾಗರೀಕತೆಗಳನ್ನು ಪತ್ತೆ ಹಚ್ಚುತ್ತಾರೆ. ಹೀಗೆ ಉತ್ಖನನದ ವೇಳೆ ಹಳೇ ಕಾಲದ ಅನೇಕ ರಹಸ್ಯಗಳೂ ಬಹಿರಂಗಗೊಳ್ಳುತ್ತವೆ. ಹೀಗಿರುವಾಗ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಪುರಾತತ್ವ ಇಲಾಖೆಗೆ ಒಂದೇ ಸ್ಥಳದಿಂದ 600 ಶವಗಳು ಸಿಕ್ಕಿವೆ.