ರೂಪಾಂತರ ಕೊರೋನಾ ಅಲರ್ಟ್, ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಡಿ.22ರ ಟಾಪ್ 10 ಸುದ್ದಿ! ಕೊರೋನಾದ ಹೊಸ ರೂಪ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಸರ್ಕಾರಕ್ಕೆ ಇದೀಗ ಹೊಸ ಕೊರೋನಾ ತಲೆನೋವು ತಂದಿದೆ. ಯಶ್ ಹುಟ್ಟುಹಬ್ಬಕ್ಕೆ ಕೆಜಿಎಪ್ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ. ಕೇಂದ್ರದ ವಿರುದ್ಧ ದೀದಿ ಹೊಸ ಕ್ಯಾತೆ, ಸುರೇಶ್ ರೈನಾ ದಿಢೀರ್ ಸುದ್ದಿಯಾಗಿದ್ದು ಯಾಕೆ? ಸೇರಿದಂತೆ ಡಿಸೆಂಬರ್ 22ರ ಟಾಪ್ 10 ಸುದ್ದಿ ಇಲ್ಲಿವೆ. ರಾಷ್ಟ್ರೀಯ ರಜಾದಿನಗಳಲ್ಲಿ ಕ್ರಿಸ್‌ಮಸ್‌ ಯಾಕಿಲ್ಲ?: ಬಿಜೆಪಿ ವಿರುದ್ಧ ದೀದಿ 'ಧಾರ್ಮಿಕ ದ್ವೇಷ'ದ ಆರೋಪ!... ರಾಷ್ಟ್ರೀಯ ರಜಾದಿನದಲ್ಲಿ ಕ್ರಿಸ್‌ಮಸ್‌ ಯಾಕಿಲ್ಲ?| ಇಡೀ ವಿಶ್ವವೇ ಆಚರಿಸುವ ಹಬ್ಬಕ್ಕೆ ನೀಡುತ್ತಿದ್ದ ರಜೆಯನ್ನು ಬಿಜೆಪಿ ಏಕೆ ರದ್ದುಗೊಳಿಸಿತು?| ಬಿಜೆಪಿ ದ್ವೇಷದ ರಾಜಕಾರಣ ನಡೆಸುತ್ತಿದೆ, ದೀದೀ ಗಂಬೀರ ಆರೋಪ ಕೊರೋನಾ ಹೊಸ ರೂಪ: ಹೊಸ ನಿಯಮ ಘೋಷಿಸಿದ ಸಿಎಂ ಯಡಿಯೂರಪ್ಪ... ಮಹಾಮಾರಿ ಕೊರೋನಾದ ಹೊಸ ರೂಪ ಪತ್ತೆಯಾದ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಲು ಸೂಚನೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆರೆಸ್ಟ್..!... ಕ್ರಿಕೆಟ್‌ ವಲಯದಿಂದ ಆಘಾತಕಾರಿಯಾದಂತ ಸುದ್ದಿಯೊಂದು ಹೊರಬಿದ್ದಿದ್ದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸಾರಾ ಆಲಿ ಖಾನ್‌ ಸೋಷಿಯಲ್‌ ಮೀಡಿಯಾದಲ್ಲಿ ಬೆಂಬಿಡದೇ ಫಾಲೋ ಮಾಡೋದು ಯಾರನ್ನ?... ಬಾಲಿವುಡ್‌ನ ಫೇಮಸ್‌ ಯುವ ನಟಿಯರಲ್ಲಿ ಸಾರಾ ಆಲಿ ಖಾನ್‌ ಒಬ್ಬರು. ಕೇದರನಾಥ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರಿ ತಮ್ಮ ಟ್ಯಾಲೆಂಟ್‌ ಮೂಲಕ ನಿಧಾನವಾಗಿ ಜನಪ್ರಿಯಗೊಳ್ಳುತ್ತಿದ್ದಾರೆ. ಸಿನಿಮಾ ಪ್ರಮೋಷನ್‌ ವೇಳೆಯಲ್ಲಿ ನಟಿ ಸಿಂಬಾ ಕೋಸ್ಟಾರ್‌ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ ಅವರನ್ನು ರೆಗ್ಯುಲರ್‌ ಆಗಿ ಸ್ಟಾಕ್‌ ಮಾಡುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. 'ಕೈ'ಗೆ ಗುಡ್​​ಬೈ: ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಬಿಜೆಪಿ ಶಾಸಕ ಸುಳಿವು... ಈಗಾಗಲೇ ಬಿಜೆಪಿ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಕೆಲ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ಇದೀಗ ಮತ್ತೊಂದು ಮೈತ್ರಿಗೆ ಉಭಯ ಪಕ್ಷಗಳು ಪ್ಲಾನ್ ಮಾಡುತ್ತಿವೆ. ನಿಂದ :ಬರುತ್ತಿದೆ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು!... ಆ್ಯಪಲ್ ಐಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಉತ್ಪನ್ನಗಳು ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹವಾಗಿದೆ. ಸ್ಮಾರ್ಟ್‌ಫೋನ್ ವಿಭಾಗದಲ್ಲಿ ವಿಶ್ವದಲ್ಲೇ ಹೊಸ ಸಂಚಲನ ಮೂಡಿಸಿರುವ ಆ್ಯಪಲ್ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಆ್ಯಪಲ್ ಹೊಚ್ಚ ಹೊಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಐಕಾರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ಗೋಲ್ಡ್‌ ರೇಟ್ ಇಳಿಕೆ, ಈಗ ಖರೀದಿಸೋದೆ ಉತ್ತಮ!... ಭಾರತದಲ್ಲಿ ಅತಿ ಹೆಚ್ಚು ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬ ಕೊನೆಗೊಂಡ ಬಳಿಕ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ ನಿಧಾನವಾಗಿ ಏರಲಾರಂಭಿಸಿತ್ತು. ಹೊಸ ವರ್ಷದಲ್ಲಿ ಕಾರು ದುಬಾರಿ; 8 ಕಂಪನಿಗಳಿಂದ ಬೆಲೆ ಏರಿಕೆ ಘೋಷಣೆ!... ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ವರ್ಷಕ್ಕಿಂತ ತುಸು ಹೆಚ್ಚೇ ಉತ್ಸುಕರಾಗಿದ್ದಾರೆ. ಕಾರಣ 2020 ಬಹುತೇಕರಿಗೆ ಸಂಕಷ್ಟದ ಮೇಲೆ ಸಂಕಷ್ಟ ಕೊಟ್ಟ ವರ್ಷವಾಗಿದೆ. 2021ರ ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸಲು ಹಲವರು ಸಜ್ಜಾಗಿದ್ದಾರೆ. ಆದರೆ 2021ರಲ್ಲಿ ಕಾರು ಖರೀದಿ ದುಬಾರಿಯಾಗಲಿದೆ. ಕಾರಣ ಈಗಾಗಲೇ 8 ಕಾರು ಕಂಪನಿಗಳು ಬೆಲೆ ಏರಿಕೆ ಪ್ರಕಟಿಸಿದೆ. ಚಾಪ್ಟರ್‌ 1 ಗಿಂತ ಡಿಫರೆಂಟ್‌ ಆಗಿದೆ ಚಾಪ್ಟರ್ 2 ರಾಕಿಬಾಯ್ ಲುಕ್!... ಕೆಜಿಎಫ್‌ ಚಾಪ್ಟರ್ 2 ಅಧೀರನ ಲುಕ್‌ ಹಾಗೂ ಪೋಸ್ಟರ್‌ ಹೊರತು ಪಡಿಸಿ, ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ಸ್‌ ಇಲ್ಲದೇ ಅಭಿಮಾನಿಗಳು ಬೇಸರದಲ್ಲಿದ್ದರು. ಟೀಸರ್‌ ರಿಲೀಸ್ ಆಗುತ್ತೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಿಗ್ತು ಬಿಗ್ ಸರ್ಪ್ರೈಸ್‌. ಕೆಜಿಎಫ್‌ 2ನಲ್ಲಿ ಯಶ್‌ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು, ಬದಲಿಗೆ ಜನವರಿ 8ರಂದು ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಶಾಲೆ ಆರಂಭಿಸುವ ಕನಸು ಕಂಡಿದ್ದ ಸರ್ಕಾರಕ್ಕೆ ಬಿಗ್ ಶಾಕ್..!... ಯುಕೆ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸುವುದು ಅನುಮಾನವಾಗಿದೆ. ಹೊಸ ವರ್ಷದಿಂದ ಶಾಲೆ ಆರಂಭಿಸುವ ಕನಸು ಕಂಡಿದ್ದ ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟಂತಾಗಿದೆ.