ಸತ್ತೋರ ಸೀರೆ, ಬಂಗಾರ ಬಳಸಿದ್ರೆ ಓಕೇನಾ? ಏನು ಹೇಳುತ್ತೆ ಶಾಸ್ತ್ರ ಜ್ಯೋತಿಷ್ಯದಲ್ಲಿ, ಪಿತೃ ದೋಷವನ್ನು ತುಂಬಾ ಮಾರಣಾಂತಿಕವೆಂದು ಪರಿಗಣಿಸಲಾಗುತ್ತದೆ. ಪಿತೃ ದೋಷದಿಂದಾಗಿ, ಜೀವನದಲ್ಲಿ ಅಶಾಂತಿ ಉಂಟಾಗುತ್ತದೆ ಮತ್ತು ಕುಟುಂಬ ಕಲಹವು ಉದ್ಭವಿಸಲು ಪ್ರಾರಂಭವಾಗುತ್ತೆ. ಈ ದೋಷದಿಂದ ಕುಟುಂಬದ ಸಂತೋಷ ಮತ್ತು ಶಾಂತಿ ಹಾಳಾಗುತ್ತೆ.ಹಾಗಿದ್ರೆ ಪಿತೃ ದೋಷ ನಿವಾರಿಸಲು ಏನು ಮಾಡೋದು? ಜ್ಯೋತಿಷ್ಯದಲ್ಲಿ, ಪಿತೃ ದೋಷವನ್ನು ತುಂಬಾ ಮಾರಣಾಂತಿಕವೆಂದು ಪರಿಗಣಿಸಲಾಗುತ್ತದೆ. ಪಿತೃ ದೋಷದಿಂದಾಗಿ, ಜೀವನದಲ್ಲಿ ಅಶಾಂತಿ ಉಂಟಾಗುತ್ತದೆ ಮತ್ತು ಕುಟುಂಬ ಕಲಹವು ಉದ್ಭವಿಸಲು ಪ್ರಾರಂಭವಾಗುತ್ತೆ. ಈ ದೋಷದಿಂದ ಕುಟುಂಬದ ಸಂತೋಷ ಮತ್ತು ಶಾಂತಿ ಹಾಳಾಗುತ್ತೆ.ಹಾಗಿದ್ರೆ ಪಿತೃ ದೋಷ ನಿವಾರಿಸಲು ಏನು ಮಾಡೋದು? ಜ್ಯೋತಿಷ್ಯದ ಪ್ರಕಾರ, ಸತ್ತವರ ವಸ್ತುಗಳ ಬಳಸುವದರಿಂದ ಪಿತೃ ದೋಷ ಉಂಟಾಗುತ್ತದೆ. ಅದು ಬಟ್ಟೆಯೇ ಆಗಿರಲಿ, ಆಭರಣವೇ ಆಗಿರಲಿ ಎಲ್ಲವನ್ನೂ ಬಳಸೋದು ದೋಷಕ್ಕೆ ಕಾರಣವಾಗುತ್ತೆ. ಹಾಗಿದ್ರೆ ಯಾವ ವಸ್ತುಗಳನ್ನು ಬಳಕೆ ಮಾಡಬಾರದು ಅನ್ನೋದನ್ನು ನೋಡೋಣ. ಜ್ಯೋತಿಷ್ಯದಲ್ಲಿ ಸತ್ತ ವ್ಯಕ್ತಿಗಳ ಬಟ್ಟೆ ( ) ಬಳಸಬಾರದು ಎಂದು ಹೇಳಲಾಗುತ್ತೆ. ಸತ್ತ ವ್ಯಕ್ತಿಯ ಬಟ್ಟೆಗಳನ್ನು ಬಳಸುವುದು ಪಿತೃ ದೋಷಕ್ಕೆ ಕಾರಣವಾಗಬಹುದು.ಮೃತರಮರಣದ ನಂತರ ಅವರ ಬಟ್ಟೆಗಳನ್ನು ದಾನ ಮಾಡುವುದು ಒಳ್ಳೇಯದು. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ತನ್ನ ಬಟ್ಟೆಗಳನ್ನು ತುಂಬಾ ಇಷ್ಟಪಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಮರಣದ ನಂತರವೂ ( ), ಸತ್ತವರ ಶಕ್ತಿಯು ಅವನ ಬಟ್ಟೆಗಳಿಗೆ ಅಂಟಿಕೊಂಡಿರುತ್ತದೆ. ಆದುದರಿಂದ ಸಾವನ್ನಪ್ಪಿದವರ ಬಟ್ಟೆಗಳನ್ನು ಬಳಕೆ ಮಾಡಬಾರದು ಎಂದು ನಂಬಲಾಗಿದೆ. ಸತ್ತ ವ್ಯಕ್ತಿಯ ಆಭರಣಗಳನ್ನು ( ) ಬಳಸುವುದು ಪಿತೃದೋಷಕ್ಕೆ ಕಾರಣವಾಗಬಹುದು. ಗರುಡ ಪುರಾಣದಲ್ಲಿ, ಸತ್ತವರ ಆಭರಣಗಳು ಅಥವಾ ಆಭರಣಗಳ ಬಳಕೆಯನ್ನು ಸಹ ತಪ್ಪು ಎಂದು ಪರಿಗಣಿಸಲಾಗುತ್ತದೆ. ಸಾಯುವ ವ್ಯಕ್ತಿಯ ನಕಾರಾತ್ಮಕ ಶಕ್ತಿಯು ಆಭರಣಗಳಲ್ಲಿ ವಾಸಿಸುತ್ತದೆ ಎಂದು ನಂಬಲಾಗಿದೆ. ಅದೇ ನಕಾರಾತ್ಮಕ ಶಕ್ತಿಯು ( ) ಆಭರಣಗಳನ್ನು ಧರಿಸಿರುವ ವ್ಯಕ್ತಿಗೆ ಸಮಸ್ಯೆಯನ್ನುಂಟು ಮಾಡಬಹುದು. ಆದ್ದರಿಂದ, ಮೃತರ ಆಭರಣಗಳನ್ನು ಧರಿಸುವ ಮೊದಲು, ಅವುಗಳನ್ನು ಶುದ್ಧೀಕರಿಸಿ ಪೂಜೆ ಮಾಡಬೇಕು. ಸತ್ತ ವ್ಯಕ್ತಿಯ ವಾಚ್ ಕೂಡ ಬಳಸುವುದು ಪಿತೃ ದೋಷವನ್ನುಂಟು ಮಾಡುತ್ತೆ. ಸತ್ತ ವ್ಯಕ್ತಿಯ ವಾಚ್ ( ) ಎಂದಿಗೂ ಬಳಸಲೇ ಬೇಡಿ. ಏಕೆಂದರೆ ಸತ್ತವರ ಕೈ ಗಡಿಯಾರವು ಕೆಟ್ಟ ಸಮಯ ಪ್ರತಿಬಿಂಬಿಸುತ್ತದೆ. ಮೃತ ವ್ಯಕ್ತಿಯ ಕೈ ಗಡಿಯಾರವನ್ನು ಧರಿಸುವುದರಿಂದ ಅಶುಭ ಘಟನೆಗಳು ಸಂಭವಿಸುತ್ತವೆ. ಹಾಗಾಗಿ ಸತ್ತ ವ್ಯಕ್ತಿಯ ಗಡಿಯಾರವನ್ನು ದಾನ ಮಾಡಬೇಕು ಅಥವಾ ಮಣ್ಣಿನಲ್ಲಿ ಹೂಳಬೇಕು. ನೀವು ಸಹ ಸತ್ತವರ ಈ ವಸ್ತುಗಳನ್ನು ಬಳಸಿದರೆ, ಇಂದಿನಿಂದ ಅದನ್ನು ನಿಲ್ಲಿಸಿ, ಇಲ್ಲದಿದ್ದರೆ ನೀವು ಪಿತೃ ದೋಷ ಎದುರಿಸಬೇಕಾಗಬಹುದು. ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆಪಿತೃ ದೋಷಕಾರಣವಾಗುತ್ತೆ. ಹಾಗಾಗಿ ಸಮಸ್ಯೆಯಿಂದ ದೂರ ಸರಿಯಲು ಸತ್ತ ವ್ಯಕ್ತಿಗಳ ವಸ್ತುಗಳನ್ನು ಬಳಸದೇ ಇದ್ದರೆ ಉತ್ತಮ. ಪಿತೃ ದೋಷದ ಲಕ್ಷಣಗಳು ಯಾವುವು?ಮಾನಸಿಕ ಕ್ಷೋಭೆ, ವೈವಾಹಿಕ ಜೀವನದಲ್ಲಿ ( ) ಉದ್ವಿಗ್ನತೆ, ಮಾತನಾಡದೆ ಮನೆಯಲ್ಲಿ ಜಗಳ, ಕೌಟುಂಬಿಕ ಕಲಹ ಇತ್ಯಾದಿಗಳು ಪಿತೃ ದೋಷದ ಮುಖ್ಯ ಲಕ್ಷಣಗಳಾಗಿವೆ. ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದ ತಕ್ಷಣವೇ ಪರಿಹಾರ ಮಾಡಿಸಿ. ಪಿತೃ ದೋಷ ನಿವಾರಿಸಲು ಏನು ಮಾಡಬೇಕು?ಪಿತೃ ದೋಷವನ್ನು ತೆಗೆದುಹಾಕಲು ಮತ್ತು ಪೂರ್ವಜರನ್ನು ಶಾಂತಗೊಳಿಸಲು, ಅರಳಿ ಮರದ ( ) ಎದುರು ಪ್ರತಿದಿನ ದೀಪವನ್ನು ಬೆಳಗಿಸಬೇಕು. ಇದರಿಂದ ಪಿತೃ ದೋಷ ನಿವಾರಣೆಯಾಗಿ, ಜೀವನದಲ್ಲಿ ಶಾಂತಿ ದೊರೆಯುತ್ತದೆ.