2023: ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಏನು ಮಾಡಬೇಕು? ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶಿಷ್ಟವಾದ ಮಹತ್ವವಿದೆ. ಈ ತಿಂಗಳು ಭಗವಾನ್ ಶಂಕರ ಮಹಾದೇವನಿಗೆ ಸಮರ್ಪಿತವಾಗಿದೆ. ಶ್ರಾವಣ ಮಾಸದ ಪೂಜೆಗೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶಿಷ್ಟವಾದ ಮಹತ್ವವಿದೆ. ಈ ತಿಂಗಳು ಭಗವಾನ್ ಶಂಕರ ಮಹಾದೇವನಿಗೆ ಸಮರ್ಪಿತವಾಗಿದೆ. ಶ್ರಾವಣ ಮಾಸ ( ) ದ ಪೂಜೆಗೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ಶ್ರಾವಣ ಸೋಮವಾರ () ದಂದು ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಅವಧಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವರ್ಷದ ಶ್ರಾವಣಮಾಸ ಎರಡು ತಿಂಗಳ ಕಾಲ ನಡೆಯಲಿದೆ. ಆದ್ದರಿಂದ ಭಕ್ತರಿಗೆ ಮಹಾದೇವನನ್ನು ಮೆಚ್ಚಿಸಲು ಉತ್ತಮ ಅವಕಾಶ ದೊರೆಯುತ್ತದೆ. ಶಂಕರನ ಕೃಪೆಗಾಗಿ ಅನೇಕ ಜನರು ಶ್ರಾವಣದಲ್ಲಿ ಉಪವಾಸ () ಮಾಡುತ್ತಾರೆ. ಕೆಲವರು ಶ್ರಾವಣ ಮಾಸ ಪೂರ್ತಿ ಉಪವಾಸ ಮಾಡಿದರೆ ಇನ್ನು ಕೆಲವರು ಶ್ರಾವಣ ಸೋಮವಾರ ಮಾತ್ರ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಉಪವಾಸ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಮಹಾದೇವನಿಗೆ ಪ್ರಿಯವಾದ ಶ್ರಾವಣಮಾಸ ಶಾಸ್ತ್ರಗಳ ಪ್ರಕಾರ ಶ್ರಾವಣ ಮಾಸದಲ್ಲಿ ಭಗವಾನ್ ವಿಷ್ಣುವು ಯೋಗ ನಿದ್ರೆ () ಗೆ ಹೋಗುತ್ತಾನೆ. ವಿಷ್ಣುವು ಯೋಗ ನಿದ್ರೆಯಲ್ಲಿರುವಂತೆ, ಶಿವನು ಬ್ರಹ್ಮಾಂಡವನ್ನು ನಡೆಸುವ ಜವಾಬ್ದಾರಿಯನ್ನು ವಹಿಸುತ್ತಾನೆ. ಆದ್ದರಿಂದ, ಶ್ರಾವಣವನ್ನು ಮಹಾದೇವನ ಮಾಸ ಎಂದು ಕರೆಯಲಾಗುತ್ತದೆ. ಈ ವಿಷಯಗಳನ್ನು ಕಡ್ಡಾಯವಾಗಿ ಮಾಡಿ ಶ್ರಾವಣದಲ್ಲಿ, ಪ್ರತಿದಿನ ಬೆಳಿಗ್ಗೆ ಎದ್ದು ಸ್ನಾನದ ನಂತರ ದೇವರ ಜಗುಲಿ ಸ್ವಚ್ಛ () ಗೊಳಿಸುವುದು ಅವಶ್ಯಕ. ಇದಾದ ನಂತರ ಗಂಗಾಜಲವನ್ನು ಚಿಮುಕಿಸಬೇಕು. ಆ ಬಳಿಕ ಪೂಜೆಗೆ ಬೇಕಾದ ಸಾಮಗ್ರಿಯನ್ನು ಇಲ್ಲಿ ಇಡಬೇಕು. ಇದರಲ್ಲಿ ನೀರು, ಹಾಲು, ಸಕ್ಕರೆ () , ತುಪ್ಪ, ಮೊಸರು, ಜೇನುತುಪ್ಪ, ಶ್ರೀಗಂಧ, ಹೂವುಗಳು, ಸಿಹಿತಿಂಡಿಗಳು (ನೈವೇದ್ಯ) ಮತ್ತು ವೀಳ್ಯದೆಲೆ ಇರಬೇಕು. ಪೂಜೆಗೆ ತಯಾರಿ ನಡೆಸುವಾಗ ಶಿವನ ಮೂಲವನ್ನು ಜಪಿಸುತ್ತಲೇ ಇರಬೇಕು. ದೇವಸ್ಥಾನದಲ್ಲಿ 'ಘಂಟೆಯ ನಾದ' ಕೇಳಿ; ಈ ನಿಗೂಢ ಶಕ್ತಿ ಪಡೆಯಿರಿ..! ಈ ವಿಷಯಗಳನ್ನು ತಪ್ಪಿಸಿ ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಈ ಸಂಪೂರ್ಣ ಅವಧಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ () ತಿನ್ನಬಾರದು. ಶ್ರಾವಣ ಮಾಸದಲ್ಲಿ ಮಾಂಸ, ಮೀನು, ಮೊಟ್ಟೆ ತಿನ್ನಬಾರದು. ಅಲ್ಲದೆ ಶ್ರಾವಣ ಮಾಸದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಶಂಕರನನ್ನು ಪೂಜಿಸುವಾಗ ಅರಿಶಿನ ಮತ್ತು ತುಳಸಿಯ ಬಳಕೆಯನ್ನು ತಪ್ಪಿಸಬೇಕು. ಶ್ರಾವಣದಲ್ಲಿ, ನೀವು ಸಂಜೆ ಬೆಳಿಗ್ಗೆ ಉಪವಾಸವನ್ನು ಮುರಿಯಬಹುದು. ಈ ಬಾರಿ ಹೆಚ್ಚುವರಿ ಶ್ರಾವಣ ಸೋಮವಾರ ಈ ವರ್ಷದ ಶ್ರಾವಣಮಾಸ ವಿಶೇಷವಾಗಿದೆ. ಹೆಚ್ಚುವರಿ ಮಾಸದ ಕಾರಣ ಶ್ರಾವಣ ಎರಡು ತಿಂಗಳು ಇರುತ್ತದೆ. ಸುಮಾರು 19 ವರ್ಷಗಳ ನಂತರ, ಶ್ರಾವಣ ಮಾಸ ಇಷ್ಟು ದೀರ್ಘಾವಧಿ ( ) ಗೆ ಅಂದರೆ 2 ತಿಂಗಳು ಬಂದಿದೆ. ಈ ವರ್ಷ ಶ್ರಾವಣ ಮಾಸವು ಜುಲೈ 4 ರಿಂದ ಆಗಸ್ಟ್ 31 ರವರೆಗೆ ಇರುತ್ತದೆ. ಈ ವರ್ಷದ ಮೊದಲ ಶ್ರಾವಣ ಸೋಮವಾರ ಜುಲೈ 10 ರಂದು ನಡೆಯಲಿದೆ. ಹಾಗಾಗಿ ಕೊನೆಯ ಶ್ರಾವಣ ಸೋಮವಾರ ಆಗಸ್ಟ್ 28 ರಂದು ಇರುತ್ತದೆ. ಆದ್ದರಿಂದ ಶ್ರದ್ಧಾ ಭಕ್ತಿ () ಯಿಂದ ಶಿವನನ್ನು ಪೂಜಿಸಿ ನಿಮ್ಮ ಇಷ್ಟಾರ್ಥ ಈಡೇಸಿಕೊಳ್ಳಿ. : ಈ ರಾಶಿಯವರಿಗೆ ಇಂದು ಮಾನ ಹಾನಿ ಆಗಲಿದೆ..! ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.