ಮಹಿಳೆಯರಿಗೆ ಮುಟ್ಟಾಗಲೇನು ಕಾರಣ: ಇಲ್ಲಿದೆ ಪೌರಾಣಿಕ ಕಥೆ! ಮಹಿಳೆಯರಿಗೆ ಋತುಸ್ರಾವವು ಶಾಪಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಶಾಪದ ವರ್ಣನೆಯು ಮಹಾಭಾರತ ಪುಸ್ತಕದಲ್ಲಿ ಕಂಡುಬರುತ್ತದೆ. ಹಾಗಿದ್ರೆ ಮಹಿಳೆಯರಿಗೆ ಮುಟ್ಟಿನ ಶಾಪವನ್ನು ಯಾರು ನೀಡಿದರು ಮತ್ತು ಏಕೆ ನೀಡಿದ್ರು ಅನ್ನೋದನ್ನು ತಿಳಿಯೋಣ. ಮಹಿಳೆಯರಿಗೆ ಋತುಸ್ರಾವವು ಶಾಪಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ಶಾಪದ ವರ್ಣನೆಯು ಮಹಾಭಾರತ ಪುಸ್ತಕದಲ್ಲಿ ಕಂಡುಬರುತ್ತದೆ. ಹಾಗಿದ್ರೆ ಮಹಿಳೆಯರಿಗೆ ಮುಟ್ಟಿನ ಶಾಪವನ್ನು ಯಾರು ನೀಡಿದರು ಮತ್ತು ಏಕೆ ನೀಡಿದ್ರು ಅನ್ನೋದನ್ನು ತಿಳಿಯೋಣ. ಅನೇಕ ಭಯಾನಕ ಶಾಪಗಳನ್ನು ಪೌರಾಣಿಕ ಗ್ರಂಥಗಳು ( ) ಮತ್ತು ದಂತಕಥೆಗಳಲ್ಲಿ ವಿವರಿಸಲಾಗಿದೆ. ಈ ಶಾಪಗಳಲ್ಲಿ ಒಂದು ಮಹಿಳೆಯರಿಗೆ ದೊರೆತ ಋತುಸ್ರಾವ. ಈ ಶಾಪದಿಂದಾಗಿ, ಮಹಿಳೆಯರು ಋತುಚಕ್ರವನ್ನು ಹೊಂದಲು ಪ್ರಾರಂಭಿಸಿದರು ಎಂದು ನಂಬಲಾಗಿದೆ. ಮಹಿಳೆಯರಿಗೆ ಋತುಚಕ್ರದ ಹಿಂದೆ ಅನೇಕ ವೈಜ್ಞಾನಿಕ ( ) ಕಾರಣಗಳಿವೆ, ಈ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಋತುಚಕ್ರ ಅನ್ನೋದು ಮಹಿಳೆಯರಲ್ಲಿ ಫಲವತ್ತತೆಯ ಸಂಕೇತವೂ ಹೌದು. ಆದರೆ ಇದನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ಆದರೆ ಇದು ಶಾಪ ಎಂಬಂತಹ ಮಾಹಿತಿ ದೊರೆಯುತ್ತೆ. ಭಾಗವತ ಪುರಾಣದ ಪ್ರಕಾರ, ಇಂದ್ರ ದೇವನು ( ) ತನ್ನ ಒಂದು ಪಾಪದ ಪರಿಣಾಮ ತಪ್ಪಿಸಲು ಮಹಿಳೆಯರಿಗೆ ಋತುಸ್ರಾವ ಆಗುವಂತೆ ಮಾಡಿದನು ಎಂದು ಹೇಳಲಾಗಿದೆ. ಏನಿದು ಶಾಪ, ಯಾವ ಪಾಪ ತೊಳೆಯಲು ಇದನ್ನು ಶಾಪವಾಗಿ ನೀಡಲಾಯಿತು ಅನ್ನೋದನ್ನು ತಿಳಿಯೋಣ. ಒಮ್ಮೆ ಅಸುರರು ಸ್ವರ್ಗವನ್ನು ವಶಪಡಿಸಿಕೊಂಡ ನಂತರ, ಇಂದ್ರ ದೇವನು ತನ್ನ ಆಸನವನ್ನು ತೊರೆದು ಸ್ವರ್ಗದಿಂದ ಪಲಾಯನ ಮಾಡಬೇಕಾಯಿತು. ಇಂದ್ರ ದೇವನು ಬ್ರಹ್ಮ ದೇವನನ್ನು ತನ್ನ ಸ್ವರ್ಗ ಮತ್ತು ಇಂದ್ರಾಸನವನ್ನು ಮರಳಿ ಪಡೆಯುವುದು ಹೇಗೆ ಎಂದು ಕೇಳಿದಾಗ, ಬ್ರಹ್ಮದೇವನು ಬ್ರಹ್ಮಜ್ಞಾನಿಯ ಸೇವೆ ಮಾಡಲು ಸೂಚಿಸಿದನು. ಇಂದ್ರ ದೇವನು ಬ್ರಹ್ಮ ಜ್ಞಾನಿಯನ್ನು ಹುಡುಕುವ ಮೂಲಕ ಸೇವೆ ಮಾಡಲು ಪ್ರಾರಂಭಿಸಿದನು, ಆದರೆ ಲಕ್ಷಾಂತರ ಪ್ರಯತ್ನಗಳ ನಂತರವೂ ಇಂದ್ರ ದೇವನಿಗೆ ಪೂಜೆಯ ಫಲಿತಾಂಶ ಸಿಗಲಿಲ್ಲ. ಇಂದ್ರದೇವನು ಇದರ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ, ಆ ಬ್ರಹ್ಮ ಜ್ಞಾನಿಯ ಹೆಂಡತಿ ರಾಕ್ಷಸಿ ಎಂದು ಅವನಿಗೆ ತಿಳಿಯಿತು. ಆ ರಾಕ್ಷಸಿ() ಇಂದ್ರ ದೇವನ ಪೂಜೆಯ ಸಂಪೂರ್ಣ ಫಲಗಳನ್ನು ತನ್ನ ಅಸುರ ಪುತ್ರರಿಗೆ ಸಿಗುವಂತೆ ಮಾಡುತ್ತಿದ್ದಳು. ಇದರಿಂದಾಗಿ ಇಂದ್ರ ದೇವರ ಪೂಜೆ ವಿಫಲವಾಯಿತು. ಇದನ್ನು ನೋಡಿದ ಇಂದ್ರದೇವನು ಎಷ್ಟು ಕೋಪಗೊಂಡನೆಂದರೆ ಬ್ರಹ್ಮ ಜ್ಞಾನಿ ಮತ್ತು ಅವನ ಹೆಂಡತಿಯನ್ನು ಕೊಂದನು ಆದರೆ ಅವನು ಪಾಪಕ್ಕೆ ಗುರಿಯಾದನು. ಇಂದ್ರ ದೇವನಿಂದ ಕೊಲ್ಲಲ್ಪಟ್ಟವರು ಬ್ರಾಹ್ಮಣರಾಗಿದ್ದರು ಮತ್ತು ಬ್ರಾಹ್ಮಣರನ್ನು ಕೊಂದ ಕಾರಣ, ಅವರು ಬ್ರಹ್ಮನನ್ನು ಕೊಲ್ಲುವ ಪಾಪವನ್ನು ಅನುಭವಿಸಿದರು. ಅಂದರೆ ಬ್ರಹ್ಮ ಹತ್ಯಾ ದೋಷ ಅವರಿಗೆ ತಟ್ಟಿತು. ಆತ ಮತ್ತೆ ಬ್ರಹ್ಮನ ಬಳಿಗೆ ಹೋದನು. ಈ ಪಾಪದಿಂದ ತಪ್ಪಿಸಲು ಒಂದು ಮಾರ್ಗವನ್ನು ಬ್ರಹ್ಮ ದೇವನನ್ನು ಇಂದ್ರ ಕೇಳಿದಾಗ, ಬ್ರಹ್ಮನು ಇಂದ್ರನಿಗೆ ನಿನ್ನ ಪಾಪವನ್ನು ಹಂಚಿ ಬಿಡು ಎಂದನು. ಇಂದ್ರದೇವನು ತನ್ನ ಪಾಪವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅದನ್ನು ಮರಗಳು, ನೀರು, ಭೂಮಿ ಮತ್ತು ಸ್ತ್ರೀ ಯರಿಗೆ ಹಂಚಿದನು. ಈ ಶಾಪದಿಂದಾಗಿಯೇ ಮಹಿಳೆಯರಿಗೆ ಪಿರಿಯಡ್ಸ್ ಅಥವಾ ಋತುಚಕ್ರ () ಆರಂಭವಾಯಿತು ಎನ್ನಲಾಗಿದೆ.(ವಿ.ಸೂ: ಇದು ಸಂಗ್ರಹಿತ ಮಾಹಿತಿಯಾಗಿದೆ)