ಗರುಡ ಪುರಾಣದ ಪ್ರಕಾರ ಜೀವನದ ಯಶಸ್ಸಿನ ಮಂತ್ರ ಯಾವುದು ? ಸನಾತನ ಧರ್ಮದ 18 ಮಹಾ ಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಗರುಡ ಪುರಾಣದಿಂದ ನಾವು ಬಹಳಷ್ಟು ಕಲಿಯುತ್ತೇವೆ. ಇದು ಜೀವನ, ಸಾವು ಮತ್ತು ಸಾವಿನ ನಂತರದ ಅನೇಕ ಸಂಗತಿಗಳನ್ನು ವಿವರಿಸುತ್ತದೆ. ಇದರ ಹೊರತಾಗಿ, ಜೀವನವನ್ನು ಉತ್ತಮಗೊಳಿಸುವ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಸನಾತನ ಧರ್ಮದ 18 ಮಹಾ ಪುರಾಣಗಳಲ್ಲಿ ಗರುಡ ಪುರಾಣ ( ) ಕೂಡ ಒಂದು. ಇದು ಭಗವಾನ್ ವಿಷ್ಣು ಮತ್ತು ಅವನ ವಾಹನ ಗರುಡನ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ. ಗರುಡ ಪುರಾಣದಿಂದ ನಾವು ಬಹಳಷ್ಟು ಕಲಿಯುತ್ತೇವೆ. ಇದು ಜೀವನ, ಸಾವು ಮತ್ತು ಸಾವಿನ ನಂತರದ ಅನೇಕ ಸಂಗತಿಗಳನ್ನು ವಿವರಿಸುತ್ತದೆ. ಇದರ ಹೊರತಾಗಿ, ಜೀವನ () ವನ್ನು ಉತ್ತಮಗೊಳಿಸುವ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಮರಣ () ದ ನಂತರ ಗರುಡ ಪುರಾಣವನ್ನು ಓದುತ್ತಾರೆ. ಇದರಿಂದ ಮೃತನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಹಾಗೂ ಜೀವನದ ಯಶಸ್ಸಿಗೆ ಸರಳ ತಂತ್ರಗಳನ್ನು ಗರುಡ ಪುರಾಣದಲ್ಲಿ ನೀಡಲಾಗಿದ್ದು, ಗರುಡ ಪುರಾಣ ಯಶಸ್ಸಿನ ಮಂತ್ರ ( ) ವಾಗಿದೆ. ನೀವು ಸಹ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ನೀವು ಗರುಡ ಪುರಾಣದ ಈ ಕೆಲವು ವಿಷಯಗಳನ್ನು ಅನುಸರಿಸಬೇಕು. ಶುದ್ಧ ಮತ್ತು ಪರಿಮಳಯುಕ್ತ ಬಟ್ಟೆ ಧರಿಸಿ ನೀವು ಜೀವನದಲ್ಲಿ ಶ್ರೀಮಂತ ಮತ್ತು ಅದೃಷ್ಟವಂತರಾಗಲು ಬಯಸಿದರೆ, ಶುದ್ಧ ಮತ್ತು ಪರಿಮಳಯುಕ್ತ ಬಟ್ಟೆ () ಗಳನ್ನು ಧರಿಸಬೇಕು. ಗರುಡ ಪುರಾಣದ ಪ್ರಕಾರ, ಕೊಳಕು ಬಟ್ಟೆಗಳನ್ನು ಧರಿಸಿದವರಿಗೆ ಅವರ ಜೀವನದಲ್ಲಿ ಸಮೃದ್ಧಿ () ಇರುವುದಿಲ್ಲ. ಅಂತಹವರ ಮನೆಯಲ್ಲಿ ಲಕ್ಷ್ಮಿ ಎಂದಿಗೂ ಉಳಿಯುವುದಿಲ್ಲ. ಇದಲ್ಲದೆ ಬಡತನ () ಹೆಚ್ಚಾಗುತ್ತದೆ. ಆದ್ದರಿಂದ ಯಾವಾಗಲೂ ಶುಭ್ರವಾದ ಹಾಗೂ ಸುವಾಸನೆಯುಕ್ತ ಬಟ್ಟೆಗಳನ್ನು ಧರಿಸಬೇಕು. ಎಲ್ಲ ಧರ್ಮಗಳನ್ನು ಗೌರವಿಸಿ ದೇವರು ಅಥವಾ ಧರ್ಮ () ವನ್ನು ಅವಮಾನಿಸುವವರಿಗೆ ಜೀವನದಲ್ಲಿ ಎಂದಿಗೂ ಯಶಸ್ಸು ಸಿಗುವುದಿಲ್ಲ. ಅಂತಹ ವ್ಯಕ್ತಿಗಳು ಕೆಲವೊಮ್ಮೆ ಹೊರಬಂದು ನರಕಕ್ಕೆ ಹೋಗುತ್ತಾರೆ. ಆದ್ದರಿಂದ ನಮ್ಮ ಪ್ರೀತಿಯ ದೇವರೊಂದಿಗೆ ಎಲ್ಲಾ ಧರ್ಮಗಳಿಗೆ ಗೌರವ () ವನ್ನು ನೀಡಬೇಕು ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದು ಭಯಾನಕ ವಾಸ್ತವ: ಶವದೊಂದಿಗೆ ‘ಅಘೋರಿ’ಗಳ ದೈಹಿಕ ಸಂಭೋಗ ಏಕೆ? ಏಕಾದಶಿ ಉಪವಾಸ ಪುರಾಣಗಳಲ್ಲಿ ಏಕಾದಶಿ ಉಪವಾಸ 9Ekadashi ) ದ ಉಲ್ಲೇಖವಿದೆ. ಗರುಡ ಪುರಾಣದಲ್ಲಿಯೂ ಇದರ ಮಹಿಮೆಯನ್ನು ವಿವರವಾಗಿ ತಿಳಿಸಲಾಗಿದೆ. ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಯು ತನ್ನ ಎಲ್ಲಾ ತೊಂದರೆಗಳನ್ನು ತೊಡೆದು ಹಾಕುತ್ತಾನೆ ಎಂದು ನಂಬಲಾಗಿದೆ. ಏಕಾದಶಿ ಉಪವಾಸ ಮಾಡುವುದರಿಂದ ಜೀವನದಲ್ಲಿ ಸಂತೋಷ () ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ತುಳಸಿಯ ಮಹತ್ವ ತುಳಸಿ () ಯನ್ನು ವಿಷ್ಣು ಪ್ರಿಯಳೆಂದು ಕರೆಯುತ್ತಾರೆ. ತುಳಸಿ ಪೂಜೆಯಿಂದ ಲಕ್ಷ್ಮಿ ಮನೆಗೆ ಬರುತ್ತಾಳೆ. ತುಳಸಿಯ ಮಹತ್ವವನ್ನು ಸನಾತನ ಧರ್ಮದ ಅನೇಕ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ತುಳಸಿಯನ್ನು ಮನೆಯಲ್ಲಿಟ್ಟರೆ ಅನೇಕ ರೋಗ () ಗಳಿಂದ ಮುಕ್ತಿ ದೊರೆಯುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. 'ಆತ್ಮ ಸಂಗಾತಿ'ಗಾಗಿ ಹಂಬಲ ಏಕೆ?: ಸದ್ಗುರು ಏನು ಹೇಳುತ್ತಾರೆ? ಪೂಜೆ ಮತ್ತು ಧ್ಯಾನ ಗರುಡ ಪುರಾಣದ ಪ್ರಕಾರ ಬೆಳಗ್ಗೆ ಎದ್ದು ಪೂಜೆ () ಮಾಡಿ ಉಳಿದ ಕೆಲಸಗಳನ್ನು ಮಾಡಬೇಕು. ಹಾಗೂ ಪೂಜೆಯ ಸಮಯದಲ್ಲಿ ಸ್ವಲ್ಪ ಧ್ಯಾನ ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ () ಲಭಿಸಲಿದೆ ಎಂದು ನಂಬಲಾಗಿದೆ.