ಶಿವಲಿಂಗದ ಮೇಲೆ ನೀರು ಹನಿ ಹನಿಯಾಗಿ ತೊಟ್ಟಿಕ್ಕುವ ಹಿಂದಿನ ಕಾರಣವೇನು? ಶಿವಲಿಂಗದ ಮೇಲೆ ಹನಿ ಹನಿಯಾಗಿ ನೀರು ತೊಟ್ಟಿಕ್ಕುತ್ತಿರುತ್ತದೆ. ಇದರ ಹಿಂದಿನ ಕಾರಣವೇನು? ಇದರ ಪ್ರಾಮುಖ್ಯತೆ ಏನು? ಇಡೀ ಭೂ ಲೋಕದ ರಕ್ಷಕನಾದ ಶಿವ. ಅವನನ್ನು ಮಹಾದೇವ, ದೇವರ ದೇವ ಎಂದು ಕರೆಯಲಾಗುತ್ತದೆ. ಹಿಂದೂಗಳು ಶಿವನನ್ನು ಮುಖ್ಯವಾಗಿ ಲಿಂಗದ ರೂಪದಲ್ಲಿ ಪೂಜಿಸುತ್ತಾರೆ. ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ, ಮುಖ್ಯವಾಗಿ ಲಿಂಗದ ಮೇಲೆ ತಾಮ್ರದ ಪಾತ್ರೆ ನೇತಾಡುತ್ತದೆ ಮತ್ತು ಅದರ ಮೇಲೆ ನಿಯಮಿತ ಮಧ್ಯಂತರದಲ್ಲಿ ನೀರು/ಹಾಲು ತೊಟ್ಟಿಕ್ಕುತ್ತದೆ. ಅಲ್ಲದೆ, ಭಕ್ತರು ಅದರ ಮೇಲೆ ನೀರು ಮತ್ತು ಹಾಲು ಸುರಿಯುತ್ತಾರೆ. ನೀರು ಹನಿ ಹನಿಯಾಗಿ ಶಿವನ ತಲೆ ಮೇಲೆ ಏಕೆ ಜಿನುಗುತ್ತಿರುತ್ತದೆ? ಶಿವಲಿಂಗದ ಮೇಲೆ ನೀರು ಏಕೆ ಜಿನುಗುತ್ತಿರುತ್ತದೆ?ಶಿವಪುರಾಣ ಮತ್ತು ಇತರ ಧಾರ್ಮಿಕ ಗ್ರಂಥಗಳ ಪ್ರಕಾರ, ಕಲಶದಿಂದ ತೊಟ್ಟಿಕ್ಕುವ ನೀರು ಸಾಗರದ ಮಂಥನಕ್ಕೆ ಸಂಬಂಧಿಸಿದೆ. ದೇವತೆಗಳು ಮತ್ತು ಅಸುರರ ನಡುವೆ ಸಾಗರವು ಮಂಥನವಾದಾಗ ಅಮೃತವು ಹೊರ ಬರುವ ಮೊದಲು ಹಾಲಾಹಲದ ವಿಷದ ಪಾತ್ರೆಯು ಹೊರಬಂದಿತು. ಹಾಲಾಹಲದ ವಿಷದ ಕುಂಡ ಹೊರಬಂದಾಗ, ಈ ವಿಷವನ್ನು ಈಗ ಏನು ಮಾಡಬೇಕೆಂದು ಎಲ್ಲಾ ದೇವತೆಗಳು ಮತ್ತು ಅಸುರರು ಚಿಂತಿತರಾದರು.ಸಾಗರ ಮಂಥನದ ನಿಯಮದ ಪ್ರಕಾರ, ಯಾರಾದರೂ ವಿಷವನ್ನು ಧರಿಸಿದಾಗ ಮಾತ್ರ ಮಂಥನದಿಂದ ಕೇವಲ ಅಮೃತವು ಹೊರಹೊಮ್ಮುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇವತೆ ಮತ್ತು ಅಸುರನ ಸಲಹೆ ಮತ್ತು ಸಂಭಾಷಣೆಯ ನಂತರ, ಎಲ್ಲರೂ ಶಿವನನ್ನು ನೆನಪಿಸಿಕೊಂಡರು ಮತ್ತು ಎಲ್ಲರೂ ಶಿವನಿಗೆ ವಿಷವನ್ನು ಕುಡಿಯಲು ಪ್ರಾರ್ಥಿಸಿದರು. ಏಕೆಂದರೆ, ಆ ವಿಷ ಇಡೀ ಬ್ರಹ್ಮಾಂಡವನ್ನು ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. ಅಂಥ ವಿಷವನ್ನು ಶಿವನ ಹೊರತಾಗಿ ಮತ್ಯಾರಿಗೂ ತೆದುಕೊಳ್ಳುವ ಶಕ್ತಿ ಇರಲಿಲ್ಲ. : ಮನಿ ಪ್ಲಾಂಟ್‌ನೊಂದಿಗೆ ಈ ಗಿಡ ಬೆಳೆಸಿದ್ರೆ ಆರೋಗ್ಯದ ಜೊತೆ ಹಣವೂ ಹೆಚ್ಚುತ್ತೆ.. ಶಿವನು ದೇವತೆಗಳು ಮತ್ತು ಅಸುರರ ಪ್ರಾರ್ಥನೆಯನ್ನು ಸ್ವೀಕರಿಸಿ ವಿಷವನ್ನು ಸೇವಿಸಿದನು. ವಿಷವನ್ನು ಕುಡಿದ ನಂತರ, ಶಿವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿತು. ಅಲ್ಲಿಂದ ಕೆಳಗೆ ಹೋಗದಂತೆ ಪಾರ್ವತಿ ದೇವಿ ತಡೆದಳು. ಆದರೂ ಅವನ ಇಡೀ ದೇಹವು ಉರಿಯಲು ಪ್ರಾರಂಭಿಸಿತು. ನಂತರ ಅವರ ತಲೆ ಮತ್ತು ದೇಹವನ್ನು ತಂಪಾಗಿಸಲು ಮತ್ತು ಶಾಂತಗೊಳಿಸಲು ಜಲಾಭಿಷೇಕವನ್ನು ಮಾಡಲಾಯಿತು. ನೀರನ್ನು ಸುರಿಯುವ ಮೂಲಕ, ಅವನು ಸುಡುವ ಸಂವೇದನೆಯಿಂದ ಪರಿಹಾರವನ್ನು ಪಡೆದನು. ನಂತರದಿಂದ ಶಿವನಿಗೆ ಜಲಾಭಿಷೇಕ ತುಂಬಾ ಇಷ್ಟವಾಯಿತು. ವಿಷವನ್ನು ಸೇವಿಸಿದ ನಂತರ ಅವನ ಗಂಟಲು ನೀಲಿ ಬಣ್ಣಕ್ಕೆ ತಿರುಗಿದ್ದರಿಂದ ಶಿವನಿಗೆ ನೀಲಕಂಠ ಎಂದು ಹೆಸರಿಸಲಾಯಿತು. ಆಧ್ಯಾತ್ಮಿಕ ಕಾರಣಭಗವಾನ್ ಶಿವನು ತಪಸ್ವಿ ದೇವರು. ಅವನು ತನ್ನ ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಾನೆ. ಅವನು ಪ್ರಾಪಂಚಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ, ಆದರೆ ಪ್ರಪಂಚದ ಸರಿಯಾದ ಕಾರ್ಯ ನಿರ್ವಹಣೆಗೆ ಅವನ ಗಮನವು ಅವಶ್ಯಕವಾಗಿದೆ. ಆದ್ದರಿಂದ, ನಿರಂತರವಾಗಿ ತೊಟ್ಟಿಕ್ಕುವ ನೀರು ಅವನನ್ನು ಎಚ್ಚರವಾಗಿರಿಸುತ್ತದೆ ಮತ್ತು ಪ್ರಾಪಂಚಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳುತ್ತದೆ. : ಪ್ರದೋಷ ವ್ರತದಿಂದ ತಂದೆಯ ದಿನದವರೆಗೆ.. ಜೂನ್ ಹಬ್ಬಹರಿದಿನಗಳ ಪಟ್ಟಿ ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.