ಮೂಲ ರಾಮಾಯಣದಲ್ಲಿಲ್ಲದ ಲಕ್ಷ್ಮಣರೇಖೆ ಬಂದಿದ್ದು ತುಳಸಿದಾಸರ ರಾಮಚರಿತ ಮಾನಸದಿಂದ! ವಾಲ್ಮೀಕಿ ರಾಮಾಯಣದ ಬಳಿಕ ಹಲವಾರು ರಾಮನ ಕತೆಗಳ ಆವೃತ್ತಿ ಬಂದರೂ ತುಳಸಿದಾಸ ರಚಿತ ರಾಮಚರಿತ ಮಾನಸ ಬಹಳ ಪ್ರಸಿದ್ಧವಾದುದು. ಎರಡೂ ರಾಮನ ಕತೆಗಳನ್ನೇ ಹೇಳಿದರೂ ಎರಡರ ನಡುವೆ ಕೆಲ ಪ್ರಮುಖ ವ್ಯತ್ಯಾಸಗಳಿವೆ.. ವಾಲ್ಮೀಕಿ ರಾಮಾಯಣ ಮತ್ತು ರಾಮಚರಿತ ಮಾನಸಗಳು ರಾಮಾಯಣ ಸಾಹಿತ್ಯ ಪ್ರಪಂಚದಲ್ಲಿ ಅವಳಿ ನಕ್ಷತ್ರಗಳಾಗಿವೆ. ಇದನ್ನು ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ. ವಾಲ್ಮೀಕಿ ರಾಮಾಯಣವು ಶಿವನು ಪಾರ್ವತಿಗೆ ಯುಗಗಳ ಹಿಂದೆ ಹೇಳಿದ ಕೃತಿಯಾಗಿದೆ. ಇದು 24,000 ಶ್ಲೋಕಗಳಿಂದ ಕೂಡಿದೆ, ಇದನ್ನು ಏಳು ಕಂದಗಳು ಮತ್ತು 500 ಸರ್ಗಗಳಾಗಿ ವಿಂಗಡಿಸಲಾಗಿದೆ. ವಾಲ್ಮೀಕಿ ರಾಮಾಯಣದ ಹಲವು ಆವೃತ್ತಿಗಳು ಬಂದಿವೆ. ಅದರಲ್ಲಿ ತುಳಸಿದಾಸರು ರಚಿಸಿದ ರಾಮಚರಿತ ಮಾನಸ ಮೂಲ ರಾಮಾಯಣದಂತೆಯೇ ಜನಪ್ರಿಯವಾಗಿದೆ. ಆದಾಗ್ಯೂ, ಈ ಎರಡೂ ಪಠ್ಯಗಳಲ್ಲಿ ಕೆಲವು ಸಣ್ಣ ವ್ಯತ್ಯಾಸಗಳಿವೆ. ಅದು ಹೆಚ್ಚು ವ್ಯತ್ಯಾಸವನ್ನು ಉಂಟುಮಾಡುವುದಿಲ್ಲವಾದರೂ ಉಲ್ಲೇಖಕ್ಕೆ ಯೋಗ್ಯವಾಗಿದೆ. ತರ್ಕಬದ್ಧ ಕೋನದಿಂದ ಗ್ರಹಿಸಿದ ಬದಲಾವಣೆಗಳು ಇಲ್ಲಿವೆ. ಭಾಷೆವಾಲ್ಮೀಕಿ ರಾಮಾಯಣದ ನಿಖರವಾದ ದಿನಾಂಕ ಸ್ಪಷ್ಟವಾಗಿಲ್ಲ. ಆದರೆ ಧರ್ಮಗ್ರಂಥದ ಮಾಹಿತಿಯ ಪ್ರಕಾರ ಇದನ್ನು ತ್ರೇತಾಯುಗದಲ್ಲಿ ಬರೆಯಲಾಗಿದೆ. ಗೋಸ್ವಾಮಿ ತುಳಸಿದಾಸರು 16ನೇ ಶತಮಾನದಲ್ಲಿ ಅವಧಿ ಉಪಭಾಷೆಯಲ್ಲಿ ರಾಮಚರಿತಮಾನಸ ರಚಿಸಿದ್ದಾರೆ. ತುಳಸೀದಾಸರು ಸಂಸ್ಕೃತದಲ್ಲಿ ಪಾಂಡಿತ್ಯಪೂರ್ಣ ವಿದ್ವಾಂಸರಾಗಿದ್ದರೂ, ಅವರು ಅವಧಿಯಲ್ಲೇ ಬರೆಯಲು ಆರಿಸಿಕೊಂಡರು. ಅದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಲುಪುತ್ತದೆ ಎಂದು ಅವರು ಭಾವಿಸಿದರು. : ಲೈಂಗಿಕ ಬಯಕೆ ಈಡೇರದ ಮಹಿಳೆ ಬೇಗ ಮುದುಕಿಯಾಗ್ತಾಳಂತೆ! ಲಂಕಾ ಕಾಂಡವಾಲ್ಮೀಕಿ ರಾಮಾಯಣವು 7 ಕಾಂಡಗಳು ಅಥವಾ ಸಂಪುಟಗಳ ಸರಣಿಯಾಗಿದೆ. ಅವು ಕ್ರಮವಾಗಿ ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಮತ್ತು ಉತ್ತರ ಕಾಂಡ. ರಾಮಚರಿತ ಮಾನಸ ಸಹ 7 ಕಾಂಡಗಳನ್ನು ಹೊಂದಿದೆ. ಆದರೆ ಇಲ್ಲಿ ಯುದ್ಧ ಕಾಂಡವನ್ನು ಲಂಕಾ ಕಾಂಡ ಎಂದು ಮರುನಾಮಕರಣ ಮಾಡಲಾಗಿದೆ. ಲಕ್ಷ್ಮಣ ರೇಖೆವಾಲ್ಮೀಕಿ ಲಕ್ಷ್ಮಣ ರೇಖೆಯ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುವುದಿಲ್ಲ. ಬದಲಾಗಿ ಶ್ಲೋಕಗಳಲ್ಲಿ ಲಕ್ಷ್ಮಣನು ಕೈ ಮುಗಿದು ಕಣ್ಣೀರು ಸುರಿಸುತ್ತಾ ಸೀತೆಯನ್ನು ಅಲ್ಲಿಯೇ ಬಿಟ್ಟು ಹೋದನೆಂದು ವಿವರಿಸುತ್ತಾರೆ. ರಾಮನು ಚಿನ್ನದ ಜಿಂಕೆಯನ್ನು ಹುಡುಕಲು ಹೊರಟಿದ್ದ ಸಮಯದಲ್ಲಿ ಉದ್ರಿಕ್ತ ಸೀತೆಯನ್ನು ಶಾಂತಗೊಳಿಸಲು ಅವನಿಗೆ ಸಾಧ್ಯವಾಗಲಿಲ್ಲ. ತುಳಸಿದಾಸರು ರಾಮಚರಿತಮಾನಸದಲ್ಲಿ ಲಕ್ಷ್ಮಣ ರೇಖಾ ಪರಿಕಲ್ಪನೆಯನ್ನು ಪರಿಚಯಿಸಿದರು. ಇದು ಓದುಗರ ಕಲ್ಪನೆಯನ್ನು ಸೆಳೆಯಿತು ಮತ್ತು ಸ್ವಯಂ ನಿಯಂತ್ರಣದ ಅಗತ್ಯವಿರುವ ಸಂದರ್ಭಗಳನ್ನು ವಿವರಿಸಲು ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಸೀತಾ ದೇವಿಯನ್ನು ರಕ್ಷಿಸುವ ಉದ್ದೇಶದಿಂದ ಲಕ್ಷ್ಮಣನು ಸೀತಾದೇವಿಯ ಸುತ್ತ ರೇಖೆಯನ್ನು ಎಳೆದಿದ್ದಾನೆ ಎಂದು ತುಳಸಿದಾಸರು ಉಲ್ಲೇಖಿಸಿದ್ದಾರೆ. ಹನುಮಂತನ ಚಿತ್ರಣಈ ಎರಡೂ ಆವೃತ್ತಿಗಳಲ್ಲಿ ಹನುಮಂತನ ಚಿತ್ರಣವು ವಿಭಿನ್ನವಾಗಿದೆ. ರಾಮಾಯಣದಲ್ಲಿ, ಹನುಮಂತನನ್ನು ವಿಶೇಷ ಶಕ್ತಿಯುಳ್ಳ ವಾನರರ ಬುಡಕಟ್ಟಿನ ವ್ಯಕ್ತಿಯಾಗಿ ಚಿತ್ರಿಸಲಾಗಿದೆ.ತುಳಸಿದಾಸರು ಹನುಮಂತನನ್ನು ಮಂಗ ಎಂದು ಬಣ್ಣಿಸಿದರು. ಇದು ಹನುಮಂತನಿಗೆ ಅಗೌರವ ತೋರಿದಂತಿದೆ. ಆದರೆ ವಾಸ್ತವದಲ್ಲಿ, ತುಳಸಿದಾಸರು ಹನುಮಾನ್ ಚಾಲೀಸಾ ಮತ್ತು ಹನುಮಾನ್ ಬಾಹುಕ್ ಅನ್ನು ರಚಿಸಿದ ಹನುಮಂತನ ಮಹಾನ್ ಭಕ್ತರಾಗಿದ್ದರು. ಸೀತೆಯ ವಿವಾಹವಾಲ್ಮೀಕಿ ರಾಮಾಯಣದ ಪ್ರಕಾರ ಜನಕ ರಾಜನು ಸೀತೆಯ ಸ್ವಯಂವರವನ್ನು ಎಂದಿಗೂ ನಡೆಸಲಿಲ್ಲ. ಒಮ್ಮೆ ರಾಮನು ಶಿವಧನಸ್ಸನ್ನು ಎತ್ತಿ ಮುರಿಯಲು ಶಕ್ತನಾದುದನ್ನು ಕಂಡು ತನ್ನ ಮಗಳು ಸೀತೆಯನ್ನು ರಾಮನಿಗೆ ಮದುವೆ ಮಾಡಿಕೊಟ್ಟನು.ರಾಮ ಚರಿತ ಮಾನಸದಲ್ಲಿ ಸೀತೆಗೆ ಸ್ವಯಂವರವನ್ನು ಆಯೋಜಿಸುವ ಬಗ್ಗೆ ಮಾತನಾಡುತ್ತಾರೆ ಮತ್ತು ಧನಸ್ಸನ್ನು ಎತ್ತುವ ಮತ್ತು ಸೀತೆಯನ್ನು ಮದುವೆಯಾಗುವ ಸಾಹಸವನ್ನು ಸಾಧಿಸಲು ಸಮರ್ಥರಾದ ರಾಜಕುಮಾರರಲ್ಲಿ ರಾಮ ಒಬ್ಬನಾಗಿರುತ್ತಾನೆ. ಸೀತೆಯ ಚಿತ್ರಣವಾಲ್ಮೀಕಿ ಸೀತೆಯನ್ನು ಸಮರ್ಥ ಮತ್ತು ಧೈರ್ಯಶಾಲಿ ಮಹಿಳೆ ಎಂದು ಚಿತ್ರಿಸಿದ್ದಾರೆ. ರಾಮಚರಿತಮಾನಸದಲ್ಲಿ ಅವಳನ್ನು ವಿಧೇಯ ಮತ್ತು ಮೃದುವಾಗಿ ಮಾತನಾಡುವವಳು ಎಂದು ತೋರಿಸಲಾಗಿದೆ. ಬಹುಶಃ ಅವರ ಸೀತೆಯ ಚಿತ್ರಣವು 16ನೇ ಶತಮಾನದ ಪರಿಪೂರ್ಣ ಮಹಿಳೆಯ ಆದರ್ಶಗಳಿಂದ ಪ್ರಭಾವಿತವಾಗಿದೆ. ಯಾರೋ ಮಾಟಮಂತ್ರ ಮಾಡಿಸಿದ್ದಾರೆಂದು ಬೆಚ್ಚಿದ್ದೀರಾ? ಹೀಗೆ ನಿಮ್ಮನ್ನು ರಕ್ಷಿಸಿಕೊಳ್ಳಿ.. ಸೀತೆಯ ಅಪಹರಣವಾಲ್ಮೀಕಿ ರಾಮಾಯಣ ಹೇಳುವಂತೆ ಸೀತೆಯನ್ನು ನಿಜವಾಗಿಯೂ ರಾವಣ ಅಪಹರಿಸಿದ್ದನು. ಆದರೆ ತುಳಸಿದಾಸ ರಾಮಚರಿತಮಾನಸದಲ್ಲಿ ಹೇಳುವಂತೆ ರಾಮನು ಅವಳನ್ನು ಅಗ್ನಿದೇವನೊಂದಿಗೆ ಸುರಕ್ಷಿತವಾಗಿರಿಸಿದನು ಮತ್ತು ಮಾಯಾ ಸೀತೆಯನ್ನು ರಾವಣನೊಂದಿಗೆ ಕಳುಹಿಸಿದನು. ಅಗ್ನಿಪರೀಕ್ಷೆಯಲ್ಲಿ ನಿಜವಾದ ಸೀತೆ ಬೆಂಕಿಯಿಂದ ಹೊರಬಂದಳು. ರಾಮನ ಚಿತ್ರಣವಾಲ್ಮೀಕಿ ರಾಮಾಯಣವು ತನ್ನ ಹೆಚ್ಚಿನ ಶ್ಲೋಕಗಳಲ್ಲಿ ರಾಮನನ್ನು ಪರಿಪೂರ್ಣ ಮನುಷ್ಯ ಎಂದು ಚಿತ್ರಿಸುತ್ತದೆ. ಆದರೆ ತುಳಸಿದಾಸರು ರಾಮನನ್ನು ವಿಷ್ಣುವಿನ ಅವತಾರ ಎಂದು ವಿವರಿಸುತ್ತಾರೆ.ವಾಲ್ಮೀಕಿಯ ಪ್ರಕಾರ, ರಾಮನು ನಿಯಮಿತವಾದ ಸಮರ್ಪಿತ ಅಭ್ಯಾಸದಿಂದ ಶಸ್ತ್ರ ಮತ್ತು ಶಾಸ್ತ್ರದ ಮೇಲೆ ಪಾಂಡಿತ್ಯವನ್ನು ಗಳಿಸಿದನು. ಆದರೆ ತುಳಸಿದಾಸರು ರಾಮನು ತನ್ನ ಜನ್ಮದಿಂದ ಪರಿಪೂರ್ಣತೆಯ ಪ್ರತಿಭಾನ್ವಿತನಾಗಿ ಜನಿಸಿದನು ಎಂದು ಹೇಳುತ್ತಾರೆ. ಈ ತಾರೆಯರಿಗಾಗಿ ನಿರ್ಮಾಣವಾಗಿವೆ ದೇವಾಲಯ! ಪಾತ್ರಗಳ ಕೊನೆವಾಲ್ಮೀಕಿ ರಾಮಾಯಣದಲ್ಲಿ ರಾಮನು ಲಕ್ಷ್ಮಣನ ಜೊತೆಯಲ್ಲಿ ಸರಯೂ ನದಿಯಲ್ಲಿ ತನ್ನ ಮೃತದೇಹವನ್ನು ಬಿಟ್ಟನು ಮತ್ತು ಸೀತೆ ತಾಯಿ ಭೂಮಿಯಲ್ಲಿ ಕಣ್ಮರೆಯಾದಳು ಎಂದು ಉಲ್ಲೇಖಿಸುತ್ತದೆ. ಇಲ್ಲಿಗೆ ರಾಮಾಯಣ ಮುಗಿಯುತ್ತದೆ. ಆದರೆ ರಾಮಚರಿತಮಾನಸವು ಲವ ಮತ್ತು ಕುಶರ ಜನ್ಮದ ವಿವರಣೆಯೊಂದಿಗೆ ಕೊನೆಗೊಳ್ಳುತ್ತದೆ ಮತ್ತು ಅದನ್ನು ಮೀರಿ ಮುಂದುವರಿಯುವುದಿಲ್ಲ. ವಾಲ್ಮೀಕಿ ರಾಮಾಯಣವು ರಾಮಾಯಣ ಮಹಾಕಾವ್ಯದ ಮೂಲವಾಗಿದೆ. ಆದರೆ ರಾಮಚರಿತಮಾನಸ ಎಂಬುದು ತುಳಸೀದಾಸರು ಹನುಮಂತನಿಂದ ಕೇಳಿದ ಮತ್ತು ನಂತರ ಬರೆದ ಆವೃತ್ತಿಯಾಗಿದೆ.