ಅಂಗೈಯಲ್ಲಿ ಈ ಗುರುತು ಇದ್ರೆ ಜೀವನದಲ್ಲಿ ಅಶುಭ! ಕೈ ರೇಖೆಗಳ ಮಧ್ಯದಲ್ಲಿ ಕೆಲವು ಗುರುತುಗಳು ಅಥವಾ ಕೆಲವು ಸಮತಲ ರೇಖೆಗಳಿವೆ, ಅದು ಒಬ್ಬರ ದುರಾದೃಷ್ಟಕ್ಕೆ ಕಾರಣವಾಗುತ್ತೆ. ಅಂತಹ ರೇಖೆಗಳು ಮತ್ತು ಗುರುತುಗಳನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತೆ. ಅದರ ಕಾರಣದಿಂದಾಗಿ, ಹಣಕಾಸಿನ ಸಮಸ್ಯೆ ಮತ್ತು ವೃತ್ತಿ ಜೀವನದಲ್ಲಿ ರಿಪೀಟೆಡ್ ಫೇಲ್ಯೂರ್ ಕಾಣುತ್ತಾರೆ. ಈ ಗುರುತುಗಳು ಯಾವುವು ಮತ್ತು ಅವು ಎಲ್ಲಿವೆ ಎಂದು ತಿಳಿದುಕೊಳ್ಳೋಣ. ಕೈ ರೇಖೆಗಳ ಮಧ್ಯದಲ್ಲಿ ಕೆಲವು ಗುರುತುಗಳು ಅಥವಾ ಕೆಲವು ಸಮತಲ ರೇಖೆಗಳಿವೆ, ಅದು ಒಬ್ಬರ ದುರಾದೃಷ್ಟಕ್ಕೆ ಕಾರಣವಾಗುತ್ತೆ. ಅಂತಹ ರೇಖೆಗಳು ಮತ್ತು ಗುರುತುಗಳನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತೆ. ಅದರ ಕಾರಣದಿಂದಾಗಿ, ಹಣಕಾಸಿನ ಸಮಸ್ಯೆ ಮತ್ತು ವೃತ್ತಿ ಜೀವನದಲ್ಲಿ ರಿಪೀಟೆಡ್ ಫೇಲ್ಯೂರ್ ಕಾಣುತ್ತಾರೆ. ಈ ಗುರುತುಗಳು ಯಾವುವು ಮತ್ತು ಅವು ಎಲ್ಲಿವೆ ಎಂದು ತಿಳಿದುಕೊಳ್ಳೋಣ. ವ್ಯಕ್ತಿಯ ಹಣೆಬರಹವನ್ನು ತೆರೆಯುವ ಮತ್ತು ಅವನನ್ನು ರಾಜನನ್ನಾಗಿ ಮಾಡುವ ಕೆಲವು ರೇಖೆಗಳು ನಮ್ಮೆಲ್ಲರ ಕೈಯಲ್ಲಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ,ದುರಾದೃಷ್ಟಕ್ಕೆ() ಕಾರಣವಾದ ಕೆಲವು ರೇಖೆಗಳಿವೆ. ಈ ರೇಖೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತೆ ಮತ್ತು ಅವುಗಳಿಂದಾಗಿ, ಒಬ್ಬ ವ್ಯಕ್ತಿ ಆರ್ಥಿಕ ಸಮಸ್ಯೆ ಎದುರಿಸುತ್ತಾನೆ. ವೈವಾಹಿಕ ಜೀವನವೂ ದುಃಖಕರವಾಗಿರುತ್ತೆ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳುಂಟಾಗುತ್ತೆ. ಅಂತಹ ರೇಖೆಗಳು ಮತ್ತು ಗುರುತುಗಳು ಯಾವುವು ಎಂದು ನೋಡಿ. ರಾಹುವಿನ() ರೇಖೆತಮ್ಮ ಕೈಯಲ್ಲಿ ಈ ರೇಖೆ ಹೊಂದಿರುವವರು, ಅವರ ಇಡೀ ಜೀವನವನ್ನುಆತಂಕಮತ್ತು ಅಡೆತಡೆಗಳ ನಡುವೆ ಕಳೆಯುತ್ತಾರೆ. ಈ ರೇಖೆಯನ್ನು ಚಿಂತೆ ರೇಖೆ, ಅಡೆತಡೆ ರೇಖೆ ಅಥವಾ ಒತ್ತಡ ರೇಖೆ ಎಂದೂ ಕರೆಯಲಾಗುತ್ತೆ. ಈ ರೇಖೆಯು ಮಂಗಳ ಪರ್ವತದ ಕೆಳಭಾಗದಿಂದ ಪ್ರಾರಂಭವಾಗುತ್ತೆ. ಈ ರೇಖೆ ಜೀವನ ರೇಖೆಯಿಂದ ಪ್ರಾರಂಭವಾಗುತ್ತೆ. ಪ್ರತಿಯೊಬ್ಬರ ಕೈಯಲ್ಲೂ ಈ ರೇಖೆ ಇರೋದಿಲ್ಲ. ಅನೇಕ ಜನರು ತಮ್ಮ ಕೈಯಲ್ಲಿ ಕೆಲವು ರೇಖೆಗಳನ್ನು ಹೊಂದಿರುತ್ತಾರೆ, ಹೆಬ್ಬೆರಳಿನ ಕೆಳಭಾಗದಿಂದ ಪ್ರಾರಂಭಿಸಿ ಜೀವನ ರೇಖೆಯ ಕಡೆಗೆ ಚಲಿಸುತ್ತೆ. ಅಂತಹ ರೇಖೆಗಳನ್ನು ಆತಂಕದ ರೇಖೆಗಳು ಎಂದು ಕರೆಯಲಾಗುತ್ತೆ. ಎಲ್ಲಾ ಚಿಂತೆ ರೇಖೆಗಳು ತೊಂದರೆಯಲ್ಲದಿದ್ದರೂ, ಜೀವನ ರೇಖೆಯನ್ನು ದಾಟುವ ರೇಖೆಗಳು ಮುಖ್ಯ. ಈ ಕಾರಣದಿಂದಾಗಿ, ವ್ಯಕ್ತಿ ಆಗಾಗ್ಗೆಆರೋಗ್ಯ ಸಮಸ್ಯೆಗಳನ್ನು( ) ಎದುರಿಸಬೇಕಾಗುತ್ತೆ. ನಿಮ್ಮ ಕೈಯಲ್ಲಿ ಸಾಕಷ್ಟು ಸಮತಲ ರೇಖೆಗಳಿದ್ಯಾ ನೋಡಿಇತರ ರೇಖೆಗಳನ್ನು ಕತ್ತರಿಸುವ ಸಾಕಷ್ಟು ಸಮತಲ ರೇಖೆಗಳನ್ನು ತಮ್ಮ ಕೈಯಲ್ಲಿ ಹೊಂದಿರುವ ಜನರು, ತಮ್ಮ ಜೀವನದಲ್ಲಿ ಪದೇ ಪದೇವೈಫಲ್ಯಗಳನ್ನು() ಹೊಂದುತ್ತಾರೆ. ಅಂತಹ ಜನರ ಜೀವನವು ತುಂಬಾ ಜಟಿಲವಾಗಿದೆ. ಕೈಯಲ್ಲಿ ಅನೇಕ ಸಮತಲ ಕರ್ಣೀಯ ರೇಖೆಗಳನ್ನು ಹೊಂದಿದ್ದರೆ ವ್ಯಕ್ತಿಯ ಜೀವನವು ಯಾವಾಗಲೂ ಕೆಟ್ಟದಾಗಿ ಸಿಲುಕಿಕೊಳ್ಳುತ್ತೆ ಮತ್ತು ಅವರು ಪ್ರತಿ ಒಳ್ಳೆಯ ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದರ ಸಂಕೇತವಾಗಿದೆ. ಅಂತಹ ಜನರಿಗೆಹೊಟ್ಟೆಯ() ಕಾಯಿಲೆ, ಭಯ, ಹೆದರಿಕೆ ಮತ್ತು ಅಧಿಕ ರಕ್ತದೊತ್ತಡವಿರಲಿದೆ. ಶನಿ ಪರ್ವತದ ಮೇಲಿನ ಗುರುತುಅಂಗೈಯಲ್ಲಿರುವ ಶನಿ ಪರ್ವತದ ಮೇಲೆ ಇರುವ ಗುರುತು ಮತ್ತು ರೇಖೆಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತೆ. ಕೈಯಲ್ಲಿ ಶನಿ ಪರ್ವತದ ಮೇಲೆ ಅಡ್ಡ ಗುರುತನ್ನು ಹೊಂದಿರುವ ಜನರನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತೆ ಎಂದು ಹೇಳಲಾಗುತ್ತೆ. ಅಂತಹ ಜನರು ಭವಿಷ್ಯದಲ್ಲಿ ಅಪಖ್ಯಾತಿಯನ್ನು ಎದುರಿಸಬೇಕಾಗುತ್ತೆ. ದೊಡ್ಡ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಬಹುದು(). ಅಂತಹ ಜನರ ಜೀವನದ ಅಂತ್ಯವು ತುಂಬಾ ಕೆಟ್ಟದಾಗಿರಲಿದೆ. ಸೂರ್ಯ ರೇಖೆಯಲ್ಲಿರುವ ದ್ವೀಪತಮ್ಮ ಕೈಯಲ್ಲಿ ಸೂರ್ಯನ ರೇಖೆಯ ಮೇಲೆ ಅಶುಭ ಗುರುತನ್ನು ಹೊಂದಿರುವವರ ಜೀವನದಲ್ಲಿ ಯಾವಾಗಲೂ ಹಣಕ್ಕಾಗಿ() ಜಗಳವಿರಲಿದೆ. ಅವರು ಬ್ಯಾಂಕಿನಲ್ಲಿ ದಿವಾಳಿಯಾಗಬೇಕಾಗಬಹುದು. ಅಂತಹ ಜನರು ಸಾಲದ ಹೊರೆಯಿಂದ ಬಳಲುತ್ತಾರೆ. ಅಂತಹ ಜನರು ವ್ಯವಹಾರದಲ್ಲಿ ತಪ್ಪು ನಿರ್ಧಾರಗಳಿಂದಾಗಿ ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತೆ. ಅಲ್ಲದೇ ಅವರು ಆಗಾಗ್ಗೆ ತಮ್ಮ ಜೀವನದಲ್ಲಿ ಪಿತೂರಿಯ ಬಲಿಪಶುಗಳಾಗುತ್ತಾರೆ. ಅವರುಕಣ್ಣುಗಳಿಗೆ() ಸಂಬಂಧಿಸಿದ ಸಮಸ್ಯೆಗಳನ್ನು ಹೊಂದುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅಪಖ್ಯಾತಿಯನ್ನು ಸಹ ಎದುರಿಸಬೇಕಾಗಬಹುದು. ಕವಲೊಡೆದ ವಿವಾಹ ()ರೇಖೆಒಬ್ಬರ ಕೈಯಲ್ಲಿ ವಿವಾಹ ರೇಖೆಯನ್ನು ಹಲವಾರು ಶಾಖೆಗಳಾಗಿ ವಿಂಗಡಿಸಿದರೆ, ಅದು ಆ ವ್ಯಕ್ತಿಯ ದುರಂತ ವೈವಾಹಿಕ ಜೀವನವನ್ನು ಸೂಚಿಸುತ್ತೆ. ಅಂತಹ ಜನರು ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಡುತ್ತಾರೆ. ಅಥವಾ ವಿವಿಧ ನಗರಗಳಲ್ಲಿನ ಉದ್ಯೋಗಗಳಿಂದಾಗಿ, ದೂರವಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಅನೇಕ ಬಾರಿ, ವಿಚ್ಛೇದನದ ಪರಿಸ್ಥಿತಿ ಉಂಟಾಗಬಹುದು.