: ಈ ಭಾನುವಾರದ ಕ್ರಮಗಳು ಜಾತಕಕ್ಕೆ ಸೂರ್ಯಬಲ ತಂದು ಅದೃಷ್ಟ ಹೆಚ್ಚಿಸುತ್ತವೆ.. ಜಾತಕದಲ್ಲಿ ರವಿ ಬಲವಾಗಿದ್ದರೆ, ಅದೃಷ್ಟಕ್ಕೆ ಕೊರತೆ ಇರುವುದಿಲ್ಲ. ರವಿಯನ್ನು ಬಲಪಡಿಸಿಕೊಳ್ಳಲು ಭಾನುವಾರ ಕೆಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ಆ ಕ್ರಮಗಳೇನು ತಿಳಿದು ಆಚರಿಸಿ.. ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸಲು, ಭಾನುವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ಜಾತಕದಲ್ಲಿ ಸೂರ್ಯನ ಸ್ಥಾನವು ಬಲವಾಗಿರುತ್ತದೆ. ಸೂರ್ಯನ ಬಲವಿದ್ದಾಗ ಬಹುತೇಕ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗಿ ಮಾಡುವ ಕೆಲಸಗಳಲ್ಲೂ ಶುಭಫಲಗಳು ಕಾಣಿಸಿಕೊಳ್ಳುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಸೂರ್ಯ ದೇವರನ್ನು ನಿಯಮಿತವಾಗಿ ಪೂಜಿಸಲು ಸಾಧ್ಯವಾಗದಿದ್ದರೆ, ಭಾನುವಾರದಂದು ಪೂಜಿಸುವುದರಿಂದ, ವಾರದ ಎಲ್ಲಾ ಏಳು ದಿನಗಳವರೆಗೆ ಪುನರಾವರ್ತಿತ ಪುಣ್ಯವನ್ನು ಪಡೆಯುತ್ತೀರಿ. ಜ್ಯೋತಿಷ್ಯದಲ್ಲಿ ಹೇಳಿದ ಕೆಲವು ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಸೂರ್ಯ ದೇವರ ಆಶೀರ್ವಾದದೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ಸಿಗುತ್ತದೆ. ಭಾನುವಾರದಂದು ಈ ಸೂರ್ಯನ ಪರಿಹಾರಗಳನ್ನು ಮಾಡಬೇಕು..