: ವಿವಾದದಿಂದ ನಿರ್ಮಾಣದವರೆಗೆ- ನೀವು ತಿಳಿಯಬೇಕಾದ್ದು.. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರದಿಂದ ಸಾಗಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿವೆ. ದೇಶಾದ್ಯಂತ ರಾಮಭಕ್ತರು ಈ ದೇವಾಲಯದಲ್ಲಿ ರಾಮನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ರಾಮನವಮಿ ಸನ್ನಿಹಿತವಾಗಿರುವ ಈ ಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರ ಕಂಡ ವಿವಾದಗಳನ್ನು ನೋಡೋಣ. ಬಹುನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣವು ಆಗಸ್ಟ್ 5, 2020ರಂದು ಪ್ರಾರಂಭವಾಗಿದೆ. ಈಗಾಗಲೇ ಇದರ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ದೇಶಾದ್ಯಂತ ರಾಮ ಭಕ್ತರು ದೇವಾಲಯದಲ್ಲಿ ರಾಮನನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಗಣ್ಯರ ಸಮ್ಮುಖದಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಮಾಡಿದ್ದು, ಕಾಮಗಾರಿಯ ಮೇಲ್ವಿಚಾರಣೆಯನ್ನು ಮಾಡುತ್ತಲೇ ಇದ್ದಾರೆ. ರಾಮನವಮಿಯ ಈ ಸಂದರ್ಭದಲ್ಲಿ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವಲ್ಲಿ ಎದುರಾದ ವಿವಾದಗಳಿಂದ ಹಿಡಿದು ನಿರ್ಮಾಣದವರೆಗಿನ ಚಿತ್ರಣವನ್ನೊಮ್ಮೆ ಮೆಲುಕು ಹಾಕೋಣ ಬನ್ನಿ. ದೇವಸ್ಥಾನ ಹೇಗಿರುತ್ತದೆ?ಭವ್ಯವಾದ ರಾಮಮಂದಿರವನ್ನು ಚಂದ್ರಕಾಂತ್ ಸೋಂಪುರ ವಿನ್ಯಾಸಗೊಳಿಸಿದ್ದಾರೆ. ಕಲ್ಲಿನ ಕೆಲಸಗಳು, ಕಲಾತ್ಮಕ ಕೆತ್ತನೆಗಳು ಮತ್ತು ಶಿಲ್ಪಕಲೆಗಳಲ್ಲಿ ಪರಿಣತಿ ಹೊಂದಿರುವ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ದೇವಾಲಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಶ್ರೀ ರಾಮ ಜನ್ಮಭೂಮಿ ಮಂದಿರವು ದೈವಿಕತೆ ಮತ್ತು ಭವ್ಯತೆಯ ದ್ಯೋತಕವಾಗಲಿದೆ' ಎಂದಿದ್ದಾರೆ. ಅಲ್ಲದೆ, ಪ್ರಮುಖ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, 'ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇವಾಲಯದ ವಿನ್ಯಾಸವನ್ನು ಮಾರ್ಪಡಿಸಲಾಗಿದೆ. ಈಗ ಅದು ಮೂಲತಃ ಯೋಜಿಸಿದ್ದಕ್ಕಿಂತ ಸುಮಾರು ದ್ವಿಗುಣವಾಗಿರುತ್ತದೆ. ಭವ್ಯವಾದ ಸ್ಮಾರಕವನ್ನು ನಾಗರಾ ಶೈಲಿಯ ವಾಸ್ತುಶಿಲ್ಪದಲ್ಲಿ ವಿನ್ಯಾಸಗೊಳಿಸಲಾಗುವುದು ಮತ್ತು ಎರಡು ಗುಮ್ಮಟಗಳ ಬದಲಿಗೆ ಐದು ಗುಮ್ಮಟಗಳನ್ನು ಹೊಂದಿರುತ್ತದೆ' ಎಂದು ತಿಳಿಸಿದ್ದಾರೆ. 2023: ರಾಮರಾಜ್ಯ ಹೇಗಿರತ್ತೆ ಅಂದ್ರೆ? ಅಯೋಧ್ಯೆಯಲ್ಲಿ ಐತಿಹಾಸಿಕ ದೇವಾಲಯವನ್ನು ಏಕೆ ನಿರ್ಮಿಸಲಾಗುತ್ತಿದೆ?ಅಯೋಧ್ಯೆಯು ಭಗವಾನ್ ವಿಷ್ಣುವಿನ ಅವತಾರ ಶ್ರೀರಾಮನ ಜನ್ಮಸ್ಥಳ. ರಾಮಾಯಣ ಸೇರಿದಂತೆ ಹಲವಾರು ಹಿಂದೂ ಧರ್ಮಗ್ರಂಥಗಳು ಮತ್ತು ಪವಿತ್ರ ಪುಸ್ತಕಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪವಿತ್ರ ನಗರದಲ್ಲಿ ಐತಿಹಾಸಿಕ ದೇವಾಲಯವನ್ನು ನಿರ್ಮಿಸಬೇಕು ಎಂಬುದು ಪ್ರತಿಯೊಬ್ಬ ಹಿಂದೂವಿನ ಮನದ ಇಂಗಿತವಾಗಿತ್ತು. ರಾಮಮಂದಿರದ ಸುತ್ತ ವಿವಾದಗಳುದುರದೃಷ್ಟವಶಾತ್, ರಾಮಮಂದಿರ ನಿರ್ಮಾಣ ವಿಷಯವಾಗಿ ಅಯೋಧ್ಯೆಯಲ್ಲಿ ವಿವಾದಗಳು ನಡೆದವು. ರಾಮಜನ್ಮಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣವಾದಾಗಿನಿಂದ ವಿವಾದಗಳು ಆರಂಭವಾದವು. ಇದು 1850ರ ದಶಕದಲ್ಲಿ ಬಾಬರಿ ಮಸೀದಿಯ ಮೇಲೆ ಮೊದಲ ದಾಳಿಯಾದಾಗ ಪ್ರಾರಂಭವಾಯಿತು. ಅಲ್ಲಿಂದ ಮುಂದಕ್ಕೆ, ಹಿಂದೂ ಸ್ಥಳೀಯರು ನಿವೇಶನದ ಸ್ವಾಧೀನಕ್ಕಾಗಿ ಸಾಂದರ್ಭಿಕ ಬೇಡಿಕೆಗಳನ್ನು ಮಾಡಲು ಪ್ರಾರಂಭಿಸಿದರು. 1949ರಲ್ಲಿ ಗೋರಖನಾಥ ಮಠದ ಸಂತ ದಿಗ್ವಿಜಯ್ ನಾಥ್ ಅವರು ಅಖಿಲ ಭಾರತೀಯ ರಾಮಾಯಣ ಮಹಾಸಭಾ ಎಂಬ ಹಿಂದೂ ಮಹಾಸಭಾದೊಂದಿಗೆ ಕೈಜೋಡಿಸಿದರು. ನಂತರ ಅವರು 9 ದಿನಗಳ ಸುದೀರ್ಘ ಹಿಂದೂ ಸಮಾರಂಭವನ್ನು ಆಯೋಜಿಸಿದರು ಮತ್ತು ಅದರ ಕೊನೆಯಲ್ಲಿ, ಹಿಂದೂ ಕಾರ್ಯಕರ್ತರು ಮಸೀದಿಗೆ ನುಗ್ಗಿ ರಾಮ ಮತ್ತು ಸೀತೆಯ ವಿಗ್ರಹಗಳನ್ನು ಇರಿಸಿದರು. 2023: 4 ಯೋಗಗಳ ಸಂಯೋಗ; ಈ ರಾಶಿಗಳಿಗೆ ರಾಮನ ವಿಶೇಷ ಕೃಪೆ ಬಾಬರಿ ಮಸೀದಿ ಧ್ವಂಸರಾಜಕೀಯ ನಾಯಕರು ಮತ್ತು ಧಾರ್ಮಿಕ ಗುಂಪುಗಳ ನೇತೃತ್ವದ ಅನೇಕ ಪ್ರಯತ್ನಗಳು ಮತ್ತು ಚಳುವಳಿಗಳ ನಂತರ, ಭಾರತೀಯ ಜನತಾ ಪಕ್ಷ ಪ್ರಚಾರದ ರಾಜಕೀಯ ಮುಖವಾಯಿತು. ಬಿಜೆಪಿ ನಾಯಕ . . ಅಡ್ವಾಣಿಯವರು ತಮ್ಮ ಪ್ರಯತ್ನದಿಂದ ಹೃದಯಗಳನ್ನು ಗೆದ್ದರು, ಆದರೆ ಅದು 1990ರಲ್ಲಿ ಕೋಮು ಗಲಭೆಯಲ್ಲಿ ಕೊನೆಗೊಂಡಿತು. ಸಾಕಷ್ಟು ವಿವಾದ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದ ಚುನಾವಣೆಯ ನಂತರ, 6 ಡಿಸೆಂಬರ್ 1992ರಂದು ಬಾಬರಿ ಮಸೀದಿ ಧ್ವಂಸವಾಯಿತು. ಸುಪ್ರೀಂ ಕೋರ್ಟ್ ತೀರ್ಪುಇದೆಲ್ಲದರ ನಡುವೆ ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುದೀರ್ಘ ಕಾಯುವಿಕೆಯ ನಂತರ, ಸುಪ್ರೀಂ ಕೋರ್ಟ್ 9 ನವೆಂಬರ್ 2019ರಂದು ಅಂತಿಮ ತೀರ್ಪನ್ನು ನೀಡಿತು. ತನ್ನ ತೀರ್ಪಿನಲ್ಲಿ, ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದೂ ದೇವಾಲಯವನ್ನು ನಿರ್ಮಿಸಲು ಟ್ರಸ್ಟ್‌ಗೆ ಹಸ್ತಾಂತರಿಸಬೇಕೆಂದು ಆದೇಶಿಸಿದೆ. ಅಷ್ಟೇ ಅಲ್ಲ, ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಬೋರ್ಡ್‌ಗೆ ಪರ್ಯಾಯವಾಗಿ 5 ಎಕರೆ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು. ಕೊನೆಯದಾಗಿ, ಗೌರವಾನ್ವಿತ ಸುಪ್ರೀಂ ಕೋರ್ಟ್ 12 ಡಿಸೆಂಬರ್ 2019 ರಂದು ತೀರ್ಪನ್ನು ಮರುಪರಿಶೀಲಿಸಲು ಕೋರಿದ್ದ ಎಲ್ಲಾ 18 ಅರ್ಜಿಗಳನ್ನು ವಜಾಗೊಳಿಸಿತು.