: ಬ್ರಹ್ಮಚಾರಿ ಆಂಜನೇಯನ ಪೂಜೆ ಮಾಡುವಾಗ ಮಹಿಳೆಯರು ಈ 4 ವಿಷಯ ನೆನಪಿಟ್ಕೊಳ್ಬೇಕು! ಭಗವಾನ್ ಹನುಮಂತನು ಮಹಿಳೆಯರಿಗೆ ಮುಟ್ಟಲು ಅನುಮತಿಸದ ಏಕೈಕ ಹಿಂದೂ ದೇವತೆ. ಆದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರು ಸಹ ಆಂಜನೇಯನನ್ನು ಪೂಜಿಸಬಹುದು. ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳನ್ನು ಪೂಜಿಸಲಾಗಿದ್ದರೂ ಭಗವಾನ್ ಹನುಮಂತನ ವಿಚಾರಕ್ಕೆ ಬಂದರೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಂಜನೇಯನ ಪೂಜೆಗೆ ಸಂಬಂಧಿಸಿದಂತೆ ವಿಶೇಷವಾಗಿ ಮಹಿಳೆಯರು ಅನೇಕ ನಿಯಮಗಳನ್ನು ಪಾಲಿಸಬೇಕು. ಮಂಗಳವಾರ ಆಂಜನೇಯನ ಪೂಜೆಗೆ ಪ್ರಶಸ್ತವಾದ ದಿನ. ಆದರೆ, ಹನುಮಂತ ಬಾಲ ಬ್ರಹ್ಮಚಾರಿಯಾಗಿರುವುದರಿಂದ ಯಾವುದೇ ಮಹಿಳೆ ಅವನನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ. ವಿವಾಹಿತ ಮಹಿಳೆಯರು ಮಾತ್ರ ಆಂಜನೇಯನನ್ನು ಪೂಜಿಸಬಹುದು. ಹನುಮಾನ್ ಚಾಲೀಸಾ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ, ಮಹಿಳೆಯರು ಹನುಮಾನ್ ಚಾಲೀಸಾವನ್ನು ಪಠಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಈ ವಿಷಯಕ್ಕೆ ಪುರಾವೆಗಳು ಎಲ್ಲಿಯೂ ಕಂಡುಬರುವುದಿಲ್ಲ. ಹೌದು, ಹನುಮಾನ್ ಬ್ರಹ್ಮಚಾರಿ ಎಂಬುದು ನಿಜ, ಆದರೆ ಹಿಂದೂ ಧರ್ಮಗ್ರಂಥಗಳಲ್ಲಿ ಕಂಡುಬರುವ ಕಥೆಗಳ ಪ್ರಕಾರ, ಹನುಮಾನ್‌ಗೆ ಒಬ್ಬ ಮಗನಿದ್ದನು. ಮೀನೊಂದು ಹನುಮಂತನ ಈ ಮಗನಿಗೆ ಜನ್ಮ ನೀಡಿತು. ದಂತಕಥೆಯ ಪ್ರಕಾರ, ಆಂಜನೇಯನು ಒಂದು ದಿನ ಸಮುದ್ರದ ಮೇಲೆ ಹಾದು ಹೋಗುತ್ತಿದ್ದಾಗ ಅವನ ಬೆವರಿನ ಒಂದು ಹನಿ ಮೀನಿನ ಹೊಟ್ಟೆಗೆ ಹೋಯಿತು. ಈ ಬೆವರಿನ ಹನಿಯಿಂದ, ಮೀನು ಮಕರಧ್ವಜ ಎಂಬ ಮಗನಿಗೆ ಜನ್ಮ ನೀಡಿತು. ಹಾಗೆ ನೋಡಿದರೆ ಹನುಮಂತನ ಬ್ರಹ್ಮಚರ್ಯ ಮುರಿದು ಬಿದ್ದಿತ್ತು. ಇದರ ಹೊರತಾಗಿಯೂ, ಹನುಮಂತ ಎಂದಿಗೂ ಸಂಸಾರ ಜೀವನದಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಯಾವಾಗಲೂ ತಾಯಿ ಸೀತಾ ಮತ್ತು ಭಗವಾನ್ ರಾಮನ ಸೇವೆ ಮಾಡುತ್ತಿದ್ದನು. : ಈ 3 ರಾಶಿಯ ಹೆಣ್ಮಕ್ಕಳು ಸಾಕ್ಷಾತ್ ಧೈರ್ಯವಾನ್ ಲಕ್ಷ್ಮೀದೇವಿಯರೇ! ಆದ್ದರಿಂದಲೇ ಇಂದಿಗೂ ಹನುಮಂತನನ್ನು ಬಾಲ ಬ್ರಹ್ಮಚಾರಿ ಎಂದು ಕರೆಯುತ್ತಾರೆ. ಮಹಿಳೆಯರು ಹನುಮಂತನನ್ನು ಪೂಜಿಸಬಾರದು ಎಂದು ಹಿಂದೂ ಧರ್ಮದ ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಬರೆಯಲಾಗಿಲ್ಲ. ಮಹಿಳೆಯರು ಹನುಮಂತನನ್ನು ಪೂಜಿಸಬಹುದು, ಆದರೆ ಪೂಜೆಯ ಸಮಯದಲ್ಲಿ ಅವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹಿಳೆಯರು ಹನುಮಂತನ ಉಪವಾಸವನ್ನು ಆಚರಿಸುವಂತಿಲ್ಲಮಹಿಳೆಯರು ಹನುಮಂತನ ಸಲುವಾಗಿ ಉಪವಾಸ ಆಚರಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ವಾಸ್ತವವಾಗಿ ಮಹಿಳೆಯರಿಗೆ ಋತುಚಕ್ರಗಳಿರುತ್ತವೆ ಮತ್ತು ಮಹಿಳೆಯು ಆಂಜನೇಯನಿಗಾಗಿ 9 ಉಪವಾಸವನ್ನು ಆಚರಿಸುವ ಆಚರಣೆಯನ್ನು ನಡೆಸಿದರೆ ಮತ್ತು ಮಧ್ಯದಲ್ಲಿ ಋತುಚಕ್ರವನ್ನು ಪಡೆದರೆ, ಈ ಆಚರಣೆಯು ಮುರಿದು ಹೋಗುತ್ತದೆ. ಅದಕ್ಕಾಗಿಯೇ ಮಹಿಳೆಯರು ಆತನಿಗಾಗಿ ಉಪವಾಸ ಮಾಡುವುದನ್ನು ನಿಷೇಧಿಸಲಾಗಿದೆ. ಮುಟ್ಟಾದಾಗ ಹನುಮಾನ್ ಚಾಲೀಸಾವನ್ನು ಓದಬಾರದು..ಮಹಿಳೆಯರು ಉಪವಾಸ ಮಾಡುವುದನ್ನು ಹೇಗೆ ನಿಷೇಧಿಸಲಾಗಿದೆಯೋ ಅದೇ ರೀತಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ, ಮಹಿಳೆಯು ಹನುಮಾನ್ ಚಾಲೀಸಾವನ್ನು ಸ್ಮರಿಸಿದರೂ, ಅದನ್ನು ಪಠಿಸಬಾರದು. : ಅರ್ಧ ನಾರೀಶ್ವರನಲ್ಲೇ ಇದೆ ಸಮಾನತೆಯ ಸಂದೇಶ ಹನುಮಂತನ ಮುಂದೆ ತಲೆ ಬಾಗಬೇಡಿ..ಹನುಮಾನ್ ಜೀ ತಾಯಿ ಸೀತೆಯನ್ನು ತಾಯಿ ಎಂದು ಪರಿಗಣಿಸುತ್ತಿದ್ದನು. ಅವನು ಬಾಲ ಬ್ರಹ್ಮಚಾರಿ, ಹಾಗಾಗಿ ಅವನಿಗೆ ಯಾವ ವಯಸ್ಸಿನ ಹೆಣ್ಣಾದರೂ ತಾಯಿಯಂತೆಯೇ ಇದ್ದಳು. ಅದಕ್ಕಾಗಿಯೇ ಭಗವಾನ್ ಹನುಮಂತನು ಸ್ವತಃ ಮಹಿಳೆಯರ ಮುಂದೆ ನಮಸ್ಕರಿಸಬಲ್ಲನು. ಆದರೆ ಅವನು ತನ್ನ ಮುಂದೆ ಮಹಿಳೆ ನಮಸ್ಕರಿಸುವುದನ್ನು ಅವನು ಸ್ವೀಕರಿಸುವುದಿಲ್ಲ. ಸ್ನಾನ ಮಾಡಿಸುವಂತಿಲ್ಲ ಮತ್ತು ಬಟ್ಟೆ ತೊಡಿಸುವಂತಿಲ್ಲಹಿಂದೂ ಸಂಪ್ರದಾಯಗಳಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳಿಗೆ ಜಲಾಭಿಷೇಕ ಮಾಡಿಸುವುದು ಒಂದು ಆಚರಣೆ ಎಂದು ಪರಿಗಣಿಸಲಾಗಿದೆ. ದೇವರ ಪೂಜೆಯು ನೀರಿನ ಅಭಿಷೇಕದಿಂದ ಪ್ರಾರಂಭವಾಗುತ್ತದೆ. ಮಹಿಳೆಯರು ಎಲ್ಲಾ ದೇವತೆಗಳಿಗೂ ನೀರನ್ನು ಅರ್ಪಿಸಬಹುದು, ಆದರೆ ಮಹಿಳೆಯರು ಎಂದಿಗೂ ಹನುಮಾನ್ ಮೂರ್ತಿಗೆ ನೀರನ್ನು ಅರ್ಪಿಸಬಾರದು. ಅದೇ ರೀತಿ ಮಹಿಳೆಯರು ಹನುಮಂತನಿಗೆ ವಸ್ತ್ರಗಳನ್ನು ಅರ್ಪಿಸಬಾರದು. ಹಾಗೆ ಮಾಡುವುದನ್ನು ಬ್ರಹ್ಮಚಾರಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ.