ಪೂಜಾ ಮಾರ್ಗ: ಶ್ರೀಮಂತರಾಗಲು ಈ ಮರಗಳನ್ನು ಪೂಜಿಸಿ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ, ಕೆಲವು ಮರಗಳನ್ನು ಪೂಜೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅವುಗಳನ್ನು ಪೂಜಿಸುವುದರಿಂದ ಸಮೃದ್ಧ ಜೀವನ ನಡೆಸಬಹುದು. ನಮ್ಮ ಜೀವನದಲ್ಲಿ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಮರಗಳಿಂದ ಆಮ್ಲಜನಕ ಉತ್ಪತ್ತಿಯಾಗುವ ಸ್ಥಳದಲ್ಲಿ, ಭೂಮಿಯ ಮಾಲಿನ್ಯವನ್ನು ತೊಡೆದು ಹಾಕುವಲ್ಲಿ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುತ್ತಲೂ ಮರಗಳಿದ್ದರೆ ಮಾನಸಿಕ ತೃಪ್ತಿ ಮತ್ತು ಜೀವನದಲ್ಲಿ ಸಮತೋಲನ ಸಿಗುತ್ತದೆ. ಹಿಂದೂ ಧರ್ಮದಲ್ಲಿ, ಮರವನ್ನು ದೇವರುಗಳ ವಾಸಸ್ಥಾನವೆಂದು ನಂಬಲಾಗಿದೆ. ಕೆಲವು ಮರಗಳನ್ನು ಪೂಜೆಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಮರಗಳನ್ನು ಪೂಜಿಸುವುದರಿಂದ ಜೀವನದ ಎಲ್ಲ ತೊಂದರೆಗಳು ದೂರವಾಗುತ್ತವೆ. ಈ ಮರಗಳು ಯಾವುವು ಎಂದು ತಿಳಿಯೋಣ. ತುಳಸಿಯ ಕೆಳಗೆ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಿಇದು ಗಿಡವೇ ಆದರೂ ಪ್ರತಿ ಹಿಂದೂಗಳ ಮನೆಯಲ್ಲಿರಲೇಬೇಕಾದ ಗಿಡವಾಗಿದೆ. ನಿಯಮಿತವಾದ ತುಳಸಿ ಪೂಜೆಯು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ತುಳಸಿ ಗಿಡ ವಿಷ್ಣುವಿಗೆ ಬಹಳ ಪ್ರಿಯ. ತುಳಸಿಯ ಆಸ್ವಾದನೆಯಿಲ್ಲದೆ ಭಗವಾನ್ ವಿಷ್ಣುವಿನ ಆರಾಧನೆಯನ್ನು ಅಪೂರ್ಣವೆಂದು ಪರಿಗಣಿಸಲಾಗಿದೆ. ಆಲದ ಮರಆಲವನ್ನು ಬ್ರಹ್ಮ, ವಿಷ್ಣು ಮತ್ತು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ. ವಿಷ್ಣುವು ಅದರ ತೊಗಟೆಯಲ್ಲಿ, ಬ್ರಹ್ಮನು ಮೂಲದಲ್ಲಿ ಮತ್ತು ಶಿವನು ಶಾಖೆಗಳಲ್ಲಿ ನೆಲೆಸಿದ್ದಾರೆ. ನೀವು ನಿಯಮಿತವಾಗಿ ಆಲವನ್ನು ಪೂಜಿಸಿದರೆ, ನಿಮ್ಮ ಜೀವನದಲ್ಲಿನ ಅಡೆತಡೆಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಈ ಮರವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಬಹಳ ಶಿಸ್ತಿನ ಸ್ವಭಾವ ಈ 5 ರಾಶಿಯವರದ್ದು.. ಶಮೀ ವೃಕ್ಷಪ್ರತಿದಿನ ಸಂಜೆ ಮನೆಯ ದೇವಸ್ಥಾನದಲ್ಲಿರುವ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿದ ನಂತರ ಶಮೀ ಮರದ ಕೆಳಗೆ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ವ್ಯಾಪಾರ ಪ್ರಗತಿಯಾಗುತ್ತದೆ. ಪ್ರತಿ ಶನಿವಾರದಂದು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಶನಿಯ ಸ್ಥಿತಿಯು ಸಹ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಅಶ್ವತ್ಥ ಮರಪ್ರತಿ ಶನಿವಾರ, ಅಶ್ವತ್ಥ ಮರದ ಮೇಲೆ ದೀಪವನ್ನು ಬೆಳಗಿಸುವುದರಿಂದ ಶನಿ ಗ್ರಹದ ಸ್ಥಿತಿಯಲ್ಲಿ ಪ್ರಯೋಜನವಾಗುತ್ತದೆ. ಪೂರ್ವಜರು ಅಶ್ವತ್ಥ ಮರದ ಮೇಲೆ ನೆಲೆಸಿದ್ದಾರೆ ಮತ್ತು ಅಶ್ವತ್ಥ ಮರವನ್ನು ಪೂಜಿಸುವುದರಿಂದ ನಮ್ಮ ಪ್ರಾರ್ಥನೆಗಳು ನೇರವಾಗಿ ಅವರನ್ನು ತಲುಪುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ ಅವರ ಆಶೀರ್ವಾದ ಪಡೆಯುತ್ತೇವೆ. ಬಾಳೆ ಮರಗುರುವಾರದಂದು ಬಾಳೆ ಮರವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಗುರುವಾರದಂದು ವ್ರತ ಆಚರಿಸಿ ಬಾಳೆಗಿಡವನ್ನು ಪೂಜಿಸುವವರೂ ನೀರು ಅರ್ಪಿಸುತ್ತಾರೆ. ಬಾಳೆ ಮರವನ್ನು ಪೂಜಿಸುವುದರಿಂದ ಗುರುವು ಬಲಶಾಲಿಯಾಗುತ್ತಾನೆ ಎಂದು ಹೇಳಲಾಗುತ್ತದೆ, ಆದರೆ ಭಗವಾನ್ ವಿಷ್ಣುವು ಸಹ ಪ್ರಸನ್ನನಾಗುತ್ತಾನೆ. : ನೀವು ಸತ್ತಂತೆ ಕನಸು ಬಿದ್ರೆ ಏನದರ ಸೂಚನೆ? ರಕ್ತ ಚಂದನದ ಮರಮನೆಯ ಪೂಜೆಪುನಸ್ಕಾರಗಳಲ್ಲಿ ಚಂದನದ ಪ್ರಾಮುಖ್ಯತೆ ಹಿರಿದು. ಚಂದನ ಮರವು ಸೂರ್ಯ ಗ್ರಹಕ್ಕೆ ಸಂಬಂಧಿಸಿದೆ. ಜಾತಕದಲ್ಲಿ ಸೂರ್ಯನ ಬಲ ಕಡಿಮೆಯಿದ್ದಾಗ ಈ ಚಂದನ ಮರವನ್ನು ಪೂಜಿಸುವುದರಿಂದ ಸೂರ್ಯನ ಆಶೀರ್ವಾದ ಪಡೆಯಬಹುದು. ಸೂರ್ಯ ಒಲಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯವಿದ್ದರೆ ಮತ್ತೆಲ್ಲವನ್ನೂ ಗಳಿಸುವ ಶಕ್ತಿ ಇರುತ್ತದೆ. ದಾಳಿಂಬೆ ಮರಯಾವುದೇ ದೇವರ ಯಂತ್ರ ತಯಾರಿಸಲು ದಾಳಿಂಬೆ ಮರದ ತೊಗಟೆ ಬೇಕೇ ಬೇಕು. ಈ ಮರವನ್ನು ಪೂಜಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಕಡಿಮೆಯಾಗಿ ಸಕಾರಾತ್ಮಕತೆ ಹರಡುತ್ತದೆ. ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.