ಮುಂದಿನ ಜನ್ಮದಲ್ಲಿ ಏನಾಗುತ್ತೀರಿ ತಿಳೀಬೇಕಾ? Puranದಲ್ಲಿದೆ ಮಾಹಿತಿ.. ಮನುಷ್ಯನ ಕರ್ಮಗಳು ಅವನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂಬ ಮಾತನ್ನು ಕೇಳಿಯೇ ಬೆಳೆದಿದ್ದೇವೆ. ಇದೇ ಮಾತನ್ನು ಗರುಡ ಪುರಾಣದಲ್ಲಿಯೂ ಹೇಳಲಾಗಿದೆ. ಹಾಗೆಯೇ ಈ ಜನ್ಮದಲ್ಲಿ ಮಾಡುವ ಯಾವ ಕರ್ಮಗಳು ಮುಂದಿನ ಜನ್ಮದಲ್ಲಿ ನಮ್ಮನ್ನು ಏನಾಗಿಸುತ್ತವೆ ಎಂದು ಕೂಡಾ ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಾರ್ಯಗಳ ಫಲವನ್ನು ಪಡೆಯುವುದು ಖಚಿತ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಮನುಷ್ಯನು ಭೂಮಿಯ ಮೇಲೆ ಮಾಡುವ ಕರ್ಮಗಳ ಆಧಾರದ ಮೇಲೆ ಅದರ ಫಲವನ್ನು ಪಡೆಯುತ್ತಾನೆ. ಗರುಡ ಪುರಾಣದಲ್ಲಿ ಮನುಷ್ಯನ ಕರ್ಮಗಳ ವೃತ್ತಾಂತವನ್ನು ಹೇಳಲಾಗಿದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಮಾತ್ರ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಇದರ ಪ್ರಕಾರ, ಒಬ್ಬ ವ್ಯಕ್ತಿಗೆ ಸ್ವರ್ಗ ಅಥವಾ ನರಕದಲ್ಲಿ ಸ್ಥಾನ ಸಿಗುವುದು ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಮಾತ್ರ. ಮನುಷ್ಯನ ಕರ್ಮಗಳು ಅವನ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂಬ ಮಾಹಿತಿಯನ್ನು ಗರುಡ ಪುರಾಣದಲ್ಲಿಯೂ ನೀಡಲಾಗಿದೆ. ಗರುಡ ಪುರಾಣದ ಆಧಾರದ ಮೇಲೆ, ಯಾವ ಕಾರ್ಯಗಳಿಂದಾಗಿ ಜನರು ಮುಂದಿನ ಜನ್ಮದಲ್ಲಿ ಪ್ರಾಣಿಗಳಾಗಿ ಭೂಮಿಗೆ ಬರುತ್ತಾರೆ ನೋಡೋಣ. ಮೋಕ್ಷ