' : ಕತ್ತರಿಸಿದ ಗಣೇಶನ ತಲೆ ಏನಾಯಿತು? ಶಿವ ಗಣೇಶನ ತಲೆ ಕತ್ತರಿಸಿದ್ದು, ನಂತರ ಆನೆಯ ತಲೆ ಇಟ್ಟಿದ್ದು ಗೊತ್ತೇ ಇದೆ. ಆದರೆ, ಮುಂಚಿನ ಗಣೇಶನ ಮನುಷ್ಯ ತಲೆ ಏನಾಯಿತು, ಅದೆಲ್ಲಿದೆ ಎಂಬ ವಿವರ ನಿಮಗೆ ಗೊತ್ತೇ? ನಾವು ತಿಳಿಸುತ್ತೇವೆ ಬನ್ನಿ. ಗಣಪತಿ ಪ್ರಥಮ ಪೂಜಿತ. ಅವನು ಎಲ್ಲ ಹಿಂದೂಗಳ ಅಚ್ಚುಮೆಚ್ಚಿನ ದೇವರು. ಮನೆಮಗನಂತೆ ಜನ ಗಣೇಶನಿಗೆ ಪ್ರೀತಿ ತೋರಿಸುತ್ತಾರೆ. ಸಿದ್ಧಿ, ಬುದ್ಧಿಗೆ ಒಡೆಯ ಎಂದು ಪೂಜಿಸುತ್ತಾರೆ. ಶ್ರೀ ಗಣೇಶನ ಜನ್ಮ ವೃತ್ತಾಂತವು ತುಂಬಾ ಆಸಕ್ತಿದಾಯಕವಾಗಿದೆ ಮತ್ತು ಈ ಕಥೆ ಎಲ್ಲರಿಗೂ ತಿಳಿದಿದೆ. ತನ್ನ ಕೈಲಾಸದ ಮನೆಗೆ ಹೋಗಲು ಅವಕಾಶ ಕೊಡದ ಶ್ರೀ ಗಣೇಶನ ತಲೆಯನ್ನು ಮಹಾದೇವನು ಅವನ ಮುಂಡದಿಂದ ಬೇರ್ಪಡಿಸಿದನು ಮತ್ತು ನಂತರ ಅವನ ಮೂಲ ತಲೆಯ ಬದಲಿಗೆ, ಅವನಿಗೆ ಗಜದ ತಲೆಯನ್ನು ನೀಡಲಾಯಿತು, ಅಂದರೆ ಆನೆಯ ತಲೆಯನ್ನು ಗಣಪತಿಗೆ ನೀಡಿ ಜೀವ ಕೊಡಲಾಯಿತು.ಗಮನಿಸಬೇಕಾದ ವಿಷಯವೆಂದರೆ ಗಜಾನನನಿಗೆ ಆನೆಯ ತಲೆಯನ್ನು ನೀಡಲಾಯಿತು, ಆದರೆ ಅವನ ನಿಜವಾದ ತಲೆ ಏನಾಯಿತು ಮತ್ತು ಅದು ಪ್ರಸ್ತುತ ಎಲ್ಲಿದೆ ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಭಾರತ ಸೇರಿದಂತೆ ಇತರ ದೇಶಗಳಲ್ಲಿ ಗಣಪತಿಯ ಅನೇಕ ದೇವಾಲಯಗಳಿವೆ( ), ಅವನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಆದರೆ ಗಣೇಶನ ಅದೇ ದೇಹದಿಂದ ಬೇರ್ಪಟ್ಟ ತಲೆಯನ್ನು ಪೂಜಿಸುವ ದೇವಾಲಯವೂ ಇದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಈ ದೇವಾಲಯವು ಒಂದು ಗುಹೆಯಲ್ಲಿ ಬಹಳ ಆಳದಲ್ಲಿದೆ, ಅಲ್ಲಿಗೆ ಎಲ್ಲರಿಂದಲೂ ಹೋಗಲು ಸಾಧ್ಯವಿಲ್ಲ. ಹಿಂದೂ ಧರ್ಮದ ಐದು ಶಕ್ತಿಯುತ ಹಾವುಗಳು ಇವೇ ನೋಡಿ.. ದಂತಕಥೆಯ ಪ್ರಕಾರ, ಶಿವನು ತನ್ನ ತ್ರಿಶೂಲದಿಂದ ಗಣೇಶನ ತಲೆಯನ್ನು ಮುಂಡದಿಂದ ಬೇರ್ಪಡಿಸಿದಾಗ, ತಲೆಯು ಭೂಮಿಯ ಕೆಳಗಿರುವ ಪಾತಾಳದ ಗುಹೆಯೊಂದಕ್ಕೆ ಬಿದ್ದಿತು. ನಂತರ ಈ ಗುಹೆಯನ್ನು ಆದಿಶಂಕರಾಚಾರ್ಯರು ಪತ್ತೆ ಮಾಡಿದರು.ಆದಿ ಶಂಕರಾಚಾರ್ಯರು 1191ನಲ್ಲಿ ಈ ಗುಹೆಯನ್ನು ಕಂಡುಕೊಂಡಾಗ, ಅವರು ಗಣೇಶನ ತಲೆಯನ್ನು ಅಲ್ಲಿ ಪ್ರತಿಷ್ಠಾಪಿಸಿದರು ಮತ್ತು ಇಲ್ಲಿ ಅವರ ತಲೆಯನ್ನು ಪೂಜಿಸುವ ಆಚರಣೆಯನ್ನು ಪ್ರಾರಂಭಿಸಿದರು. ಈಗ ಈ ಗುಹೆಯನ್ನು ಪಾತಾಳ ಭುವನೇಶ್ವರ ಎಂದು ಕರೆಯಲಾಗುತ್ತದೆ. ಪಾತಾಳ ಭುವನೇಶ್ವರ ದೇವಸ್ಥಾನ( )ಪಾತಾಳ ಭುವನೇಶ್ವರ ಎಂದು ಪ್ರಸಿದ್ಧವಾಗಿರುವ ಈ ಸ್ಥಳವು ಉತ್ತರಾಖಂಡದ ಪಿಥೋರಗಢದ ಗಂಗೊಳ್ಳಿಹತ್‌ನಿಂದ 14 ಕಿಲೋಮೀಟರ್ ದೂರದಲ್ಲಿದೆ. ಶಿವನು ಸ್ವತಃ ಇಲ್ಲಿ ಗಣೇಶನ ತಲೆಯನ್ನು ರಕ್ಷಿಸುತ್ತಾನೆ ಮತ್ತು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯೂ ಇದೆ. ಈ ದೇವಾಲಯದಲ್ಲಿರುವ ಗುಹೆಯು ಕೇವಲ ಗುಹೆಯಾಗಿರದೆ ಅನೇಕ ಗುಹೆಗಳನ್ನು ಸಂಪರ್ಕಿಸುವ ಸಾಲುಗಳ ಸರಣಿಯಾಗಿದೆ. ನೀವು ಈ ದೇವಾಲಯದ ಆಚೆ ಹೋದರೆ, ಕೆಳಗೆ ಇನ್ನೂ ಹೆಚ್ಚಿನ ಗುಹೆಗಳಿವೆ. ಸ್ಥಳೀಯ ದಂತಕಥೆಗಳ ಪ್ರಕಾರ ಅವುಗಳ ಮೂಲಕ ಹಾದುಹೋಗುವ ಮೂಲಕ ನೇರವಾಗಿ ಕೈಲಾಸವನ್ನು ತಲುಪಬಹುದು. 2022: ವರ್ಷದ ಕಡೆಯ ಪ್ರದೋಷ ವ್ರತ, ಈ ತಪ್ಪುಗಳನ್ನು ಮಾಡ್ಬೇಡಿ!ಈ ಗುಹೆಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ತಲೆಯನ್ನು ಆದಿ ಗಣೇಶನ ಹೆಸರಿನಿಂದ ಸಂಬೋಧಿಸಲಾಗಿದೆ. ಆದಿ ಗಣೇಶನ ತಲೆಯನ್ನು ನೋಡಿದ ನಂತರ ಅವನ ತಲೆಯನ್ನು ಯಾರು ಪೂಜಿಸುತ್ತಾರೋ ಅವರ ಆಂತರಿಕ ಅಹಂಕಾರವು ನಾಶವಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ವಿಗ್ರಹದ ರೂಪದಲ್ಲಿ ಇಲಿಯನ್ನು ಕಾಣಬಹುದು. ಪಾತಾಳ ಭುವನೇಶ್ವರ ಗುಹೆಯಲ್ಲಿ ಕಲ್ಲಿನಿಂದ ಕತ್ತರಿಸಿದ ಗಣೇಶನ ವಿಗ್ರಹದ ಮೇಲೆ, 108 ದಳಗಳ ಶಾವಷ್ಟಕ ದಳ ಬ್ರಹ್ಮಕಮಲವನ್ನು ಅಲಂಕರಿಸಲಾಗಿದೆ. ಈ ಕಾರಣದಿಂದಾಗಿ, ಬ್ರಹ್ಮಕಮಲದ ನೀರು ಗಣೇಶನ ಕಲ್ಲಿನಂತಹ ತಲೆಯ ಮೇಲೆ ದೈವಿಕ ಹನಿಗಳನ್ನು ತೊಟ್ಟಿಕ್ಕುತ್ತದೆ. ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.