2022: ಹಬ್ಬದಲ್ಲಿ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳೋದು ತುಂಬಾ ಅಶುಭ ವಿಜಯದಶಮಿಯ 10 ದಿನಗಳ ಕಾಲ ಆಚರಿಸುವ ವಿಜೃಂಭಣೆಯ ಹಬ್ಬವಾಗಿದೆ. ಹಬ್ಬದ ಸಮಯದಲ್ಲಿ ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ, ಅವು ಅಶುಭವಾಗಿದ್ದು, ಮನೆಗೆ ಧನಾತ್ಮಕತೆ ಬರುವುದನ್ನು ತಡೆಯುತ್ತವೆ. ಶಾರದೀಯ ನವರಾತ್ರಿಯ ಹಬ್ಬವು ಸೋಮವಾರ, 26ನೇ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುತ್ತದೆ, ಇದು 4ನೇ ಅಕ್ಟೋಬರ್ 2022ರವರೆಗೆ ಇರುತ್ತದೆ. ನಂತರ ವಿಜಯದಶಮಿ ಇರುತ್ತದೆ. ನವರಾತ್ರಿಯ ಒಂಬತ್ತು ದಿನಗಳು ಮಾ ದುರ್ಗೆಯನ್ನು ಪೂಜಿಸಲು ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ಒಂಬತ್ತು ದಿನಗಳಲ್ಲಿ ಮಾ ದುರ್ಗೆಯ ಆರಾಧನೆಯಲ್ಲಿ ಅನೇಕ ವಿಷಯಗಳನ್ನು ಕಾಳಜಿ ವಹಿಸುವುದು ಅವಶ್ಯಕ. ಇದೇ ವೇಳೆ ನವರಾತ್ರಿ ಆರಂಭಕ್ಕೂ ಮುನ್ನ ಮನೆಯ ಪೂಜಾ ಕೋಣೆಯ ಸ್ವಚ್ಛತೆ ಜತೆಗೆ ಮನೆಯ ಸ್ವಚ್ಛತೆ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ಮತ್ತೊಂದೆಡೆ, ಜ್ಯೋತಿಷ್ಯದ ಪ್ರಕಾರ, ನವರಾತ್ರಿಯ ಮೊದಲ ದಿನ, ಕಲಶವನ್ನು ಸ್ಥಾಪಿಸುವ ಮೊದಲು ಮನೆಯಿಂದ ಕೆಲವು ವಸ್ತುಗಳನ್ನು ತೆಗೆದು ಹಾಕಬೇಕು. ಹಾಗಾದರೆ ನವರಾತ್ರಿಯಲ್ಲಿ ಮನೆಯಲ್ಲಿ ಯಾವ ವಸ್ತುಗಳನ್ನು ಇಡುವುದು ಶುಭವಲ್ಲ ಎಂದು ತಿಳಿಯೋಣ. ಹಳಸಿದ ಆಹಾರ( )ನವರಾತ್ರಿಯಂದು ದೇವಿಯ ಸ್ಥಾಪನೆಯ ಮೊದಲು, ನಿಮ್ಮ ಮನೆಯಲ್ಲಿ ಯಾವುದೇ ಆಹಾರ ಅಥವಾ ಪಾನೀಯವು ಕೆಟ್ಟಿದ್ದರೆ ಅಥವಾ ಅಡುಗೆಮನೆಯಲ್ಲಿ ಯಾವುದೇ ಹಳಸಿದ ಆಹಾರವಿದ್ದರೆ ಅದನ್ನು ಮನೆಯಿಂದ ಹೊರ ತೆಗೆಯಿರಿ. ಬೆಳ್ಳುಳ್ಳಿ-ಈರುಳ್ಳಿ(-)ಜ್ಯೋತಿಷ್ಯ, ನವರಾತ್ರಿಯ ಒಂಬತ್ತು ದಿನಗಳು ಮನೆಯ ವಾತಾವರಣವು ಶುದ್ಧವಾಗಿರಬೇಕು ಮತ್ತು ಧನಾತ್ಮಕವಾಗಿರಬೇಕು. ಅದೇ ಸಮಯದಲ್ಲಿ, ನವರಾತ್ರಿ ಪೂಜೆಯ ಸಮಯದಲ್ಲಿ ಒಂಬತ್ತು ದಿನಗಳವರೆಗೆ ಮನೆಯಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ತಯಾರಿಸಬೇಕು. ಈ ಕಾರಣಕ್ಕಾಗಿ, ನವರಾತ್ರಿಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಮಾಂಸ, ಮದ್ಯ ಇತ್ಯಾದಿಗಳನ್ನು ಸೇವಿಸುವುದು ಮಾತ್ರವಲ್ಲ, ಅವುಗಳನ್ನು ಮನೆಯಲ್ಲಿ ಇಡುವುದು ಕೂಡಾ ಅಶುಭವೆಂದು ಪರಿಗಣಿಸಲಾಗಿದೆ. ಮನಸ್ಸು ದುರ್ಬಲವಾಗಿರೋ ರಾಶಿಗೆ ಮುತ್ತು ಧರಿಸಿದ್ರೆ ಅದೃಷ್ಟವೋ ಅದೃಷ್ಟ ಮುರಿದ ವಿಗ್ರಹಗಳು ಅಥವಾ ಚಿತ್ರಗಳು( )ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆ ಅಥವಾ ಪೂಜಾ ಕೋಣೆಯನ್ನು ಸ್ವಚ್ಛಗೊಳಿಸುವಾಗ, ಯಾವುದೇ ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳು ಮುರಿದು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗಿದ್ದಲ್ಲಿ, ತಕ್ಷಣ ಅದನ್ನು ಮನೆಯಿಂದ ತೆಗೆದು ನದಿ ಅಥವಾ ಕೊಳದಲ್ಲಿ ಮುಳುಗಿಸಿ. ಇಲ್ಲದಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಮುರಿದ ವಿಗ್ರಹಗಳನ್ನು ಯಾವುದಾದರೂ ನದಿಯ ಬುಡದಲ್ಲಿ ಬಿಡಿ. ಹಳೆಯ ಬೂಟುಗಳು ಮತ್ತು ಚಪ್ಪಲಿಗಳು( )ನವರಾತ್ರಿಯ ಸಮಯದಲ್ಲಿ ಹಳೆಯ ಪಾದರಕ್ಷೆಗಳು ಅಥವಾ ಚಪ್ಪಲಿಗಳು, ಒಡೆದ ಗಾಜಿನ ಸಾಮಾನುಗಳನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅವನ್ನು ಎಸೆಯಿರಿ. ಬಳಕೆಗೆ ಬಾರದ ಅವುಗಳ ಮೇಲೆ ಅನಗತ್ಯ ಮೋಹ ಬೇಡ. ನದಿ ಬದಿಯ ಕಲ್ಲುಗಳುನದಿಬದಿಯ ಕಲ್ಲುಗಳು ಮನೆಗೆ ಕೆಡುಕನ್ನುಂಟು ಮಾಡುತ್ತವೆ ಎನ್ನಲಾಗುತ್ತದೆ. ಯಾವುದೋ ಹವ್ಯಾಸದ ಕಾರಣಕ್ಕೋ, ಅಥವಾ ಸುಂದರವಾಗಿವೆ ಎಂದೋ ಅವನ್ನು ಮನೆಯಲ್ಲಿಟ್ಟುಕೊಳ್ಳಬೇಡಿ. ನವರಾತ್ರಿಯ ಸಂದರ್ಭದಲ್ಲಿ ಈ ಕಲ್ಲುಗಳನ್ನು ಹೊರಗೆ ಹಾಕಿ. ಈ ರಾಶಿಗಳು ಬರುವ ದಿನದಲ್ಲಿ ಹಣಕಾಸಿನ ಅಡಚಣೆಗೆ ನಲುಗುತ್ತವೆ! ನಿಮ್ಮ ರಾಶಿ ಇದರಲ್ಲಿದ್ಯಾ? ಜೇಡರ ಬಲೆ(' )ಜೇಡರ ಬಲೆಗಳನ್ನು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲದೆ ವಾಸ್ತು ಶಾಸ್ತ್ರದ ಪ್ರಕಾರವೂ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಜೇಡರ ಬಲೆಗಳ ರಚನೆಯು ಅದರಲ್ಲಿ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ, ಇದರಿಂದಾಗಿ ನಕಾರಾತ್ಮಕತೆಯು ಮನೆಯ ಉಳಿದ ಭಾಗಗಳಿಗೆ ಹರಡುತ್ತದೆ. ಇಂಥ ಕೊಳಕಾದ ಮನೆಗೆ ದೇವಿಯನ್ನು ಆಹ್ವಾನಿಸುವುದು ತರವಲ್ಲ. ಹಾಗಾಗಿ, ಮೊದಲು ಜೇಡರ ಬಲೆಗಳನ್ನು ತೆಗೆಯಿರಿ. ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.