2022: ಈ ವರ್ಷ ಮದುವೆಗೆ ಪ್ರಶಸ್ತ ಮುಹೂರ್ತಗಳು ಯಾವಾಗಿವೆ? ಸಧ್ಯ ಚಾತುರ್ಮಾಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಗವಾನ್ ವಿಷ್ಣುವು ಯೋಗನಿದ್ರೆಯಲ್ಲಿರುತ್ತಾನೆ. ಹಾಗಾಗಿ, ಈ ಸಮಯದಲ್ಲಿ ವಿವಾಹ ಸೇರಿದಂತೆ ಶುಭ ಕಾರ್ಯಗಳು ಹೆಚ್ಚಾಗಿ ನಡೆಯುವುದಿಲ್ಲ. ಚಾತುರ್ಮಾಸ ಮುಗಿಯುವುದು ಯಾವಾಗ? ಈ ವರ್ಷದಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು ಯಾವೆಲ್ಲ ದಿನಗಳಲ್ಲಿ ಇದೆ? ಈಗ ಚಾತುರ್ಮಾಸ ನಡೆಯುತ್ತಿದೆ. ಚಾತುರ್ಮಾಸ ಎಂದರೆ ನಾಲ್ಕು ಮಾಸಗಳು. ಈ ಮಾಸಗಳು ವ್ರತ, ಪೂಜೆ ಇತ್ಯಾದಿಗೆ ಬಹಳ ಮಹತ್ವದ್ದಾಗಿದ್ದರೂ, ಈ ಸಮಯದಲ್ಲಿ ಸಾಮಾನ್ಯವಾಗಿ ವಿವಾಹ, ಉಪನಯನ, ಚೌಲ, ನಾಮಕರಣ, ನಿಶ್ಚಿತಾರ್ಥ ಇತ್ಯಾದಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಕಾರಣ ಚಾತುರ್ಮಾಸದಲ್ಲಿ ಅಂದರೆ ದೇವಶಯನಿ ಏಕಾದಶಿಯಿಂದ ದೇವುತಾನಿ ಏಕಾದಶಿವರೆಗೆ ವಿಷ್ಣುವು ಕ್ಷೀರ ಸಾಗರದಲ್ಲಿ ಯೋಗ ನಿದ್ರೆಯಲ್ಲಿ ತೊಡಗಿರುತ್ತಾನೆ. ಚಾತುರ್ಮಾಸವು ಭಕ್ತರನ್ನು ಆತ್ಮಾವಲೋಕನ ಮಾಡಲು, ಧ್ಯಾನ ಮಾಡಲು, ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಮತ್ತು ವ್ರತಗಳನ್ನು ಆಚರಿಸಲು ಪ್ರೋತ್ಸಾಹಿಸುತ್ತದೆ. ಈ ವರ್ಷದ ಚಾತುರ್ಮಾಸ ಜುಲೈ 10 ರಿಂದ ಪ್ರಾರಂಭವಾಗಿದೆ. ಮತ್ತು ಇದು ನವೆಂಬರ್ 4 ರಂದು ಅಂದರೆ ದೇವುತಾನಿ ಏಕಾದಶಿಯಂದು ಕೊನೆಗೊಳ್ಳುತ್ತದೆ. ಶ್ರಾವಣ, ಭಾದ್ರಪದ, ಆಶ್ವೀಜ ಮತ್ತು ಕಾರ್ತೀಕ ಮಾಸಗಳೇ ಚಾತುರ್ಮಾಸಗಳು. ತದ ನಂತರದಲ್ಲಿ ಅಂದರೆ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ವಿವಾಹಾದಿ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ.ಹಾಗಿದ್ದರೆ, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮನೆಯಲ್ಲಿ ಶುಭ ಕಾರ್ಯ ನಡೆಸಲು, ವಿವಾಹಕ್ಕೆ ಶುಭ ಮುಹೂರ್ತಗಳು ಯಾವೆಲ್ಲ ದಿನಾಂಕದಲ್ಲಿ ಇವೆ ಎಂದು ತಿಳಿಯೋಣ. ವಿವಾಹ ಮುಹೂರ್ತ 2022( 2022)ದೇವುತಾನಿ ಏಕಾದಶಿಯ ನಂತರ, ಅಂದರೆ ನವೆಂಬರ್ 4ರ ನಂತರ ವಿಷ್ಣುವು ಯೋಗನಿದ್ರೆಯಿಂದ ಏಳುತ್ತಾನೆ. ತದನಂತರದಲ್ಲಿ ತುಳಸಿ ವಿವಾಹ ಪೂರೈಸಿದ ಬಳಿಕ ಮದುವೆಗೆ ಮಂಗಳಕರ ಸಮಯಗಳು ಶುರುವಾಗುತ್ತವೆ.ಜ್ಯೋತಿಷ್ಯ ಶಾಸ್ತ್ರದ ತಜ್ಞರ ಪ್ರಕಾರ, ಈ ಬಾರಿಯ ದೇವುತಾನಿ ಏಕಾದಶಿಯ ದಿನವು ಮದುವೆಗೆ ಮಂಗಳಕರವಲ್ಲ. ವಾಸ್ತವವಾಗಿ ಶುಕ್ರವು ದೇವಶಯನಿ ಏಕಾದಶಿಯಂದು ನೆಲೆಗೊಂಡಿದೆ. ಮದುವೆಗೆ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಶುಭ ಸ್ಥಾನವೂ ಬಹಳ ಮುಖ್ಯವಾಗಿದೆ.ಹಾಗಾಗಿ, ಈ ವರ್ಷ ವಿವಾಹಕ್ಕೆ ಶುಭ ಮುಹೂರ್ತವು ನವೆಂಬರ್ 21ರಿಂದ ಪ್ರಾರಂಭವಾಗಲಿದೆ. ಗುರುವಾರ ವ್ರತದಿಂದ ಅವಿವಾಹಿತರಿಗೆ ಹೆಚ್ಚುತ್ತೆ ಗುರುಬಲ, ಬೇಗ ವಿವಾಹ ಸಾಧ್ಯ ನವೆಂಬರ್ 2022 ರಲ್ಲಿ ಮದುವೆಗೆ ಶುಭ ಮುಹೂರ್ತ( )21 ನವೆಂಬರ್ 202224 ನವೆಂಬರ್ 202225 ನವೆಂಬರ್ 202227 ನವೆಂಬರ್ 2022 ಡಿಸೆಂಬರ್ 2022ರಲ್ಲಿ ಮದುವೆಗೆ ಶುಭ ದಿನಾಂಕ( )2 ಡಿಸೆಂಬರ್ 20227 ಡಿಸೆಂಬರ್ 20228 ಡಿಸೆಂಬರ್ 20229 ಡಿಸೆಂಬರ್ 202214 ಡಿಸೆಂಬರ್ 2022 ದೇವುತಾನಿ ಏಕಾದಶಿ( )ದೇವುತಾನಿ ಏಕಾದಶಿ 2022 ಅನ್ನು ದೇವಪ್ರಬೋಧಿನಿ ಏಕಾದಶಿ ಎಂದೂ ಕರೆಯುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಮಾತಾ ತುಳಸಿ ಮತ್ತು ಶಾಲಿಗ್ರಾಮದ ವಿವಾಹದ ಸಂಪ್ರದಾಯವಿದೆ. ದೇವತೆಗಳನ್ನು ಪೂಜಿಸದೆ ಯಾವುದೇ ಶುಭ ಕಾರ್ಯಗಳು ಸಾಧ್ಯವಿಲ್ಲ. ಚಾತುರ್ಮಾಸದಲ್ಲಿ ವಿಷ್ಣುವು ಕ್ಷೀರ ಸಾಗರದಲ್ಲಿ ನಿದ್ರಿಸುತ್ತಾನೆ. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮವು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದು ಮಾಂಗ್ಲಿಕ್ ಕೃತಿಗಳ ಮೇಲೂ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಚಾತುರ್ಮಾಸದಲ್ಲಿ 4 ತಿಂಗಳ ಕಾಲ ಮಾಂಗಲ್ಯ ಕಾರ್ಯಗಳು ನಡೆಯುವುದಿಲ್ಲ. ಪುರಾಣದ ನಂಬಿಕೆಯ ಪ್ರಕಾರ, ದೇವುತನಿ ಏಕಾದಶಿಯಿಂದ, ಎಲ್ಲಾ ದೇವತೆಗಳು ಮತ್ತು ನವಗ್ರಹಗಳು ಜಾಗೃತ ಸ್ಥಿತಿಯಲ್ಲಿ ಉಳಿಯುತ್ತವೆ. ನಂತರ ಶುಭ ಕಾರ್ಯ ಪ್ರಾರಂಭವಾಗುತ್ತದೆ. : ಈ ಮೂವರಿಗೆ ಹಣ ನೀಡಿದ್ರೆ ಅದೆಂದೂ ಹಿಂದೆ ಬರೋಲ್ಲ! ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.