: ನೀವು ಸಂಜೆ ಪೂಜೆ ಮಾಡುವವರಾದರೆ, ಈ ನಿಯಮ ತಪ್ಪಬೇಡಿ! ಬೆಳಿಗ್ಗೆ ಮತ್ತು ಸಂಜೆ ಮಾಡುವ ಪೂಜಾ ವಿಧಾನದಲ್ಲಿ ಹಲವು ವ್ಯತ್ಯಾಸಗಳಿವೆ. ಶಾಸ್ತ್ರಗಳ ಪ್ರಕಾರ, ಸಾಯಂಕಾಲವೂ ಪೂಜಿಸುವವರು ಕೆಲವು ವಿಶೇಷವಾದ ವಿಷಯಗಳನ್ನು ನೋಡಿಕೊಳ್ಳಬೇಕು. ಬೆಳಗ್ಗೆ ಬೇಗ ಸ್ನಾನ ಮಾಡಿ ದೇವರ ಪೂಜೆ ಮಾಡುವ ಅಭ್ಯಾಸ ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿರುತ್ತದೆ. ಕೆಲವರು ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಪೂಜೆ ಮಾಡುತ್ತಾರೆ. ಮತ್ತೆ ಕೆಲವರು ಈಗಿನ ಬ್ಯುಸಿ ಜೀವನಶೈಲಿಗೆ ಒಗ್ಗಿ, ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿ ಪೂಜೆ ಮಾಡಲಾಗದೆ ಸಂಜೆ ಹೊತ್ತು ಮನೆಗೆ ಮರಳಿದ ಮೇಲೆ ದೇವರ ಪೂಜೆ ಮಾಡುತ್ತಾರೆ. ನಿತ್ಯ ದೇವರ ಪೂಜೆಯು ಮನಸ್ಸಿಗೂ, ಮನೆಗೂ ಶಾಂತಿ ತರುತ್ತದೆ. ಒಂದು ವೇಳೆ ನೀವೂ ಕಾರಣಾಂತರಗಳಿಂದ ಸಂಜೆ ಹೊತ್ತು ಪೂಜೆ ಮಾಡುವವರಾದರೆ ಕೆಲವು ವಿಷಯಗಳನ್ನು( ) ನೆನಪಿನಲ್ಲಿಟ್ಟುಕೊಳ್ಳಬೇಕು. ಬೆಳಿಗ್ಗೆ ಮತ್ತು ಸಂಜೆ ಪೂಜೆ ಹೇಗೆ ವಿಭಿನ್ನವಾಗಿದೆ?ದೈವಿಕ ಶಕ್ತಿಗಳು ಬೆಳಿಗ್ಗೆ ಬಲವಾಗಿರುತ್ತವೆ ಮತ್ತು ಸಂಜೆಯ ಸಮಯದಲ್ಲಿ ರಾಕ್ಷಸ ಶಕ್ತಿಗಳು ಬಲವಾಗಿರುತ್ತವೆ. ಈ ರೀತಿಯಾಗಿ ಎರಡೂ ಕಾಲದ ಪೂಜೆಗೆ ಮಹತ್ವವಿದೆ. ದೇವರನ್ನು ಮೆಚ್ಚಿಸಲು ಬೆಳಿಗ್ಗೆ ಪೂಜೆ, ಸಂಜೆ ಭೂತದ ಪ್ರಭಾವವನ್ನು ಕಡಿಮೆ ಮಾಡಲು ಪೂಜಿಸಲಾಗುತ್ತದೆ. ಬೆಳಗ್ಗೆ ಮಾಡುವ ಪೂಜೆ ಮತ್ತು ಸಂಜೆ ಮಾಡುವ ಪೂಜೆಯಲ್ಲಿ ಹಲವು ವ್ಯತ್ಯಾಸಗಳಿವೆ. ಶಾಸ್ತ್ರಗಳ ಪ್ರಕಾರ, ಸಾಯಂಕಾಲವೂ ಪೂಜಿಸುವವರು ಕೆಲವು ವಿಶೇಷವಾದ ನಿಮಯಗಳನ್ನು ಪಾಲಿಸಬೇಕು. : ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಹಾಕುವುದು ಯಾಕೆ ? ಸ್ನಾನ ಮಾಡಬೇಕುಸಂಜೆಯ ಹೊತ್ತು ಪೂಜಿಸುವ ಮುನ್ನ ಸ್ನಾನ ಮಾಡಬೇಕು. ಬೆಳಗ್ಗೆ ಸ್ನಾನವಾಗಿದೆ ಎಂದು ಹಾಗೆಯೇ ದೇವರ ಕೋಣೆಗೆ ನುಗ್ಗಬಾರದು. ಸ್ನಾನ ಮಾಡಿ ಸಂಪೂರ್ಣ ಶುದ್ಧರಾಗಿಯೇ ದೇವರ ಕೋಣೆಗೆ ಪ್ರವೇಶಿಸಬೇಕು. ಸಂಜೆಯ ಪೂಜೆಯಲ್ಲಿ ಶಂಖ ಊದಬೇಡಿ, ಗಂಟೆ ಬಡಿಯಬೇಡಿಬೆಳಿಗ್ಗೆ ಪೂಜೆಯಲ್ಲಿ ಶಂಖ() ಮತ್ತು ಗಂಟೆಯನ್ನು ಊದಬೇಕು. ಏಕೆಂದರೆ ಅದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ, ಆದರೆ ಸಂಜೆ ಪೂಜೆ ಗಂಟೆ ಮತ್ತು ಶಂಖವನ್ನು ನುಡಿಸಬಾರದು. ಸೂರ್ಯಾಸ್ತದ ನಂತರ ದೇವತೆಗಳು ನಿದ್ರೆಗೆ ಹೋಗುತ್ತಾರೆ ಮತ್ತು ಶಂಖ ಅಥವಾ ಗಂಟೆಯ ಶಬ್ದದಿಂದ ಅವರ ವಿಶ್ರಾಂತಿಗೆ ತೊಂದರೆಯಾಗುತ್ತದೆ ಎಂದು ನಂಬಲಾಗಿದೆ. ಸೂರ್ಯ ದೇವರನ್ನು ಪೂಜಿಸಬೇಡಿಶಾಸ್ತ್ರಗಳಲ್ಲಿ ಸೂರ್ಯ ದೇವರನ್ನು ಮುಂಜಾನೆ ಪೂಜಿಸಿ ನೀರು ಅರ್ಪಿಸಬೇಕೆಂಬ ನಿಯಮವಿದೆ. ಸೂರ್ಯಾಸ್ತದ ನಂತರ ಸೂರ್ಯ ದೇವರನ್ನು( ) ಪೂಜಿಸಬಾರದು, ಅದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದರ ಹೊರತಾಗಿ ಸಂಜೆಯ ಪೂಜೆಯಲ್ಲಿ ತುಳಸಿಯನ್ನು ಎಂದಿಗೂ ಬಳಸಬೇಡಿ. ಏಕೆಂದರೆ ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಸಂಜೆ ಪೂಜೆಗೆ ಹೂಗಳನ್ನು ಕೀಳಬಾರದುಬೆಳಿಗ್ಗೆ ಭಗವಂತನಿಗೆ ತಾಜಾ ಹೂವುಗಳನ್ನು() ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಸಂಜೆ ಪೂಜೆಗೆ ಹೂವುಗಳನ್ನು ಕೀಳಬಾರದು. ಶಾಸ್ತ್ರಗಳ ಪ್ರಕಾರ, ಸಂಜೆ ಹೂವುಗಳನ್ನು ಕೀಳುವುದು ಅಶುಭ, ಆದ್ದರಿಂದ ಸಂಜೆ ಪೂಜೆಯಲ್ಲಿ ದೇವರಿಗೆ ಹೂವುಗಳನ್ನು ಅರ್ಪಿಸಬಾರದು. ಇಲ್ಲವೇ ಬೆಳಗ್ಗೆಯೇ ಹೂವನ್ನು ಕಿತ್ತಿಟ್ಟು ಅವನ್ನು ಸಂಜೆಗೆ ಬಳಸಬೇಕು. ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ! ಸಂಜೆ ಪೂಜೆಯ ಸಮಯ ಯಾವುದು?ಸಂಜೆಯ ಪೂಜೆಯನ್ನು ಸೂರ್ಯಾಸ್ತದ ನಂತರ ಮತ್ತು ಕತ್ತಲೆಯ ಮೊದಲು ಮಾಡಬೇಕು. ಈ ಅವಧಿಯನ್ನು ಸಂಧ್ಯಾಕಾಲ ಎಂದು ಕರೆಯಲಾಗುತ್ತದೆ. ಎರಡು ದೀಪ ಹಚ್ಚಿಸಂಜೆ ಪೂಜೆಯಲ್ಲಿ ಎರಡು ದೀಪಗಳನ್ನು ಹಚ್ಚಿ. ಒಂದು ತುಪ್ಪದ ದೀಪ ಮತ್ತು ಇನ್ನೊಂದು ಎಣ್ಣೆಯ ದೀಪ ಹಚ್ಚಬೇಕು. ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.