ರೋಗಗಳಿಂದ ಮುಕ್ತಿ ನೀಡುವ ಆರೋಗ್ಯ ವ್ರತ ಈ ಈ ವ್ರತಕ್ಕೂ ಮಹಾಭಾರತಕ್ಕೂ ಸಂಬಂಧವಿದೆ.. ಈ ವ್ರತ ಮಾಡೋದ್ರಿಂದ ಎಂಥದೇ ಕಾಯಿಲೆಗಳೂ ದೂರಾಗಿ ಆರೋಗ್ಯ ನಳನಳಿಸುತ್ತದೆ. ಇಷ್ಟಕ್ಕೂ ಈ ವ್ರತ ಯಾವುದು, ಆಚರಣೆ ಹೇಗೆ, ಎಷ್ಟು ಸಮಯ ಮಾಡಬೇಕು ತಿಳೀರಿ.. ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಇದ್ದರೆ ಯಾರೊಬ್ಬರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಎಲ್ಲರಲ್ಲೂ ಸದಾ ಆತಂಕ, ಚಿಂತೆ ಮನೆ ಮಾಡಿರುತ್ತದೆ. ಇಂಥ ಸಂದರ್ಭದಲ್ಲಿ ಕೈಗೊಳ್ಳಬಹುದಾದ ವ್ರತವೇ ಆರೋಗ್ಯ ವ್ರತ.ಆರೋಗ್ಯ ವ್ರತದ ಆಚರಣೆಯಿಂದ ಯಾವುದೇ ಗುಣಪಡಿಸಲಾಗದ ರೋಗಗಳೂ ಗುಣವಾಗುತ್ತವೆ. ಇದಕ್ಕೆ ಆಶಾ ದಶಮಿ ಎಂದೂ ಹೇಳಲಾಗುತ್ತದೆ. ಆಶಾ ದಶಮಿ ಉಪವಾಸವು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಗುಣಪಡಿಸಲಾಗದ ರೋಗಗಳನ್ನೂ ತೊಡೆದು ಹಾಕುತ್ತದೆ. ಇದನ್ನು ಅತ್ಯಂತ ಪವಿತ್ರವಾದ ಉಪವಾಸವೆಂದು ಪರಿಗಣಿಸಲಾಗಿದೆ. ಯಾವುದೇ ತಿಂಗಳಲ್ಲಿ, ಈ ಉಪವಾಸವನ್ನು ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಇದನ್ನು ಪ್ರತಿ ತಿಂಗಳು ಮಾಡಬೇಕು. ನಿಮ್ಮ ಇಷ್ಟಾರ್ಥ ನೆರವೇರುವವರೆಗೆ ಈ ಉಪವಾಸವನ್ನು ಆಚರಿಸಬೇಕು. ಈ ಉಪವಾಸವನ್ನು ಯಾವುದೇ ತಿಂಗಳಲ್ಲಿ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರಾರಂಭಿಸಬೇಕು. ಈ ಉಪವಾಸದ ಪರಿಣಾಮದಿಂದ ಎಲ್ಲಾ ಕಾರ್ಯಗಳಲ್ಲಿ ಸಾಧನೆಯನ್ನು ಸಾಧಿಸಲಾಗುತ್ತದೆ. ಏಕಾಗಿ ಕೈಗೊಳ್ಳಬೇಕು?ಆಶಾ ದಶಮಿ ಉಪವಾಸವನ್ನು ಉತ್ತಮ ವರ ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಮಾಡಲಾಗುತ್ತದೆ. ಶ್ರೀಕೃಷ್ಣನು ಅರ್ಜುನನಿಗೆ ಈ ಉಪವಾಸದ ಮಹತ್ವವನ್ನು ಹೇಳಿದ್ದಾನೆ. ಆಶಾ ದಶಮಿ ಉಪವಾಸವನ್ನು ಮುಗಿಸುವ ಮೂಲಕ, ಹುಡುಗಿಗೆ ಅತ್ಯುತ್ತಮ ಪತಿ ಸಿಗುತ್ತಾನೆ. ಗಂಡನು ಪ್ರಯಾಣಕ್ಕೆ ಹೋಗಿ ಬೇಗನೆ ಹಿಂತಿರುಗದಿದ್ದರೆ. , ಈ ವ್ರತದಿಂದ ಆತನನ್ನು ಶೀಘ್ರವಾಗಿ ಪಡೆಯಬಹುದು. ಈ ವ್ರತವನ್ನು ಆರು ತಿಂಗಳು, ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ಆಚರಿಸಬೇಕು. ಆಗಸ್ಟ್ 7ರಂದು ಶ್ರಾವಣ ಮಾಸದ ಶುಕ್ಲ ಪಕ್ಷದಂದು ಆಶಾ ದಶಮಿ ಆರಂಭಿಸಿದರೆ ಮುಂದಿನ ಎರಡು ವರ್ಷಗಳವರೆಗೆ ಈ ವ್ರತ ಆಚರಿಸಬಹುದು. ಸಣ್ಣಪುಟ್ಟದ್ದಕ್ಕೂ ನೋಯುವ, ಸಿಟ್ಟಾಗುವ, ಅಳುವ ರಾಶಿಚಕ್ರಗಳಿವು.. ಪೂಜಾ ವಿಧಾನ( )ಯಾವುದೇ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರಾತಃಕಾಲ ಸ್ನಾನ ಮಾಡಿ ದೇವಾನುದೇವತೆಗಳನ್ನು ಪೂಜಿಸಿ ರಾತ್ರಿ ಹತ್ತು ದಿಕ್ಕುಗಳಲ್ಲಿಯೂ ತುಪ್ಪದ ದೀಪ, ಧೂಪ-ದೀಪ, ನೈವೇಧ್ಯ, ಹಣ್ಣು ಇತ್ಯಾದಿಗಳನ್ನು ಇಟ್ಟು ಹತ್ತು ಆಶಾದೇವತೆಗಳನ್ನು ಹೂ, ಕುಂಕುಮ, ಶ್ರೀಗಂಧ ಇತ್ಯಾದಿಗಳಿಂದ ಪೂಜಿಸಬೇಕು. ತನ್ನ ಕಾರ್ಯದ ಸಾಫಲ್ಯಕ್ಕಾಗಿ ಪ್ರಾರ್ಥಿಸಬೇಕು. ಈ ಇಡೀ ದಿನ ಉಪವಾಸ ಇರಬೇಕು. ಈ ಮಂತ್ರದಿಂದ ಪೂಜೆ ಮಾಡಿ'ಆಶಾಶಶಃ ಸದಾ ಸಂತು ಸಿದ್ಧ್ಯಂತಂ ಮೇ ಮನೋರ್ಥ: ಭವತೀನಾಂ ಪ್ರಸಾದೇನ್ ಸದ್ ಕಲ್ಯಾಣಮಸ್ತ್ವಿತಿ'. ಅದರ ಅರ್ಥವೇನೆಂದರೆ, 'ಓ ಆಶಾ ಮಹಿಳೆಯರೇ, ನನ್ನ ಎಲ್ಲಾ ಭರವಸೆಗಳು, ನನ್ನ ಇಷ್ಟಾರ್ಥಗಳು ಯಾವಾಗಲೂ ಯಶಸ್ವಿಯಾಗಲಿ. ವ್ರತ ಕತೆ( )ಭಗವಾನ್ ಕೃಷ್ಣನು ಅರ್ಜುನನಿಗೆ ವಿವರಿಸಿದ ಆಶಾ ದಶಮಿಯ ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಬ್ಬ ರಾಜ ನಿಷಾದ ದೇಶವನ್ನು ಆಳುತ್ತಿದ್ದನು, ಅವನ ಹೆಸರು ನಳ. ಅವನ ಸಹೋದರ ಪುಷ್ಕರನು ಅವನನ್ನು ಯುದ್ಧದಲ್ಲಿ ಸೋಲಿಸಿದಾಗ, ನಳ ತನ್ನ ಪತ್ನಿ ದಮಯಂತಿಯೊಂದಿಗೆ ರಾಜ್ಯದಿಂದ ಹೊರಟು ಹೋದನು. ಕಾಡಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ನಳ ಕಾಣೆಯಾದನು. ಇದರಿಂದ ದಮಯಂತಿ ವಿಚಲಿತಳಾಗಿ ನೋವನ್ನನುಭವಿಸಿದಳು. ಪತಿಯನ್ನು ಮರಳಿ ಪಡೆವ ವಿಪರೀತ ಹಂಬಲದಲ್ಲಿದ್ದಾಗ ಬ್ರಾಹ್ಮಣರೊಬ್ಬರು ಆಶಾ ದಶಮಿ ವ್ರತದ ಬಗ್ಗೆ ಆಕೆಗೆ ಹೇಳಿದರು. ಆಕೆ ಆಶಾ ದಶಮಿ ವ್ರತ ಕೈಗೊಳ್ಳುತ್ತಿದ್ದಂತೆಯೇ ಪತಿ ನಳ ಮರಳಿ ಬಂದನು. ನಂತರ ಅವರಿಬ್ಬರೂ ಸುಖವಾಗಿದ್ದರು.ಗುರು ಪೂರ್ಣಿಮಾ 2022: ಗುರುವಿನ ಎದುರು ಮರೆತೂ ಈ 7 ತಪ್ಪುಗಳನ್ನು ಮಾಡ್ಬೇಡಿ ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.