ಸೀತೆಯಿಂದ ಅಮರನಾಗುವ ವರ ಪಡೆದ ಹನುಮಂತ… ಈಗ ಭೂಮಿಯಲ್ಲಿ ಇರೋದೆಲ್ಲಿ? ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸೀತಾ ದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ, ಮಹಾವೀರ್ ಭಜರಂಗಿ ಪವಿತ್ರ ಸ್ಥಳ ಒಂದರಲ್ಲಿ ತನ್ನ ವಾಸಸ್ಥಾನವನ್ನು ಆರಿಸಿಕೊಂಡನು. ಇಂದು ಭೂಮಿಯ ಮೇಲೆ ಆ ಸ್ಥಳ ಎಲ್ಲಿದೆ ಅನ್ನೋದನ್ನು ತಿಳಿಯೋಣ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸೀತಾ ದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ, ಮಹಾವೀರ್ ಭಜರಂಗಿ ಪವಿತ್ರ ಸ್ಥಳ ಒಂದರಲ್ಲಿ ತನ್ನ ವಾಸಸ್ಥಾನವನ್ನು ಆರಿಸಿಕೊಂಡನು. ಇಂದು ಭೂಮಿಯ ಮೇಲೆ ಆ ಸ್ಥಳ ಎಲ್ಲಿದೆ ಅನ್ನೋದನ್ನು ತಿಳಿಯೋಣ. 'ಸಂಕತ್ ಕಾಟ್ ಮಿಠಾಯಿ ಸಬ್ ಪೀರಾ, ಜೋ ಸುಮಿರೆ ಹನುಮಂತ್ ಬಲ್ಬಿರಾ'... ಹನುಮಾನ್ ಚಾಲೀಸಾದಲ್ಲಿ ( ) ಬರೆಯಲಾದ ಈ ಸಾಲುಗಳು ಹನುಮಂತನ ಧ್ಯಾನದಿಂದ ಜೀವನದ ಎಲ್ಲಾ ತೊಂದರೆಗಳನ್ನು ತೆಗೆದುಹಾಕಬಹುದು ಎಂದು ಹೇಳುತ್ತದೆ. ಹನುಮಂತನನ್ನು ಅಮರ ಅಥವಾ ಚಿರಂಜೀವಿ ಎಂದು ಹೇಳಲಾಗುತ್ತದೆ. ಕಲಿಯುಗದಲ್ಲಿ ಹನುಮಾನ್ ಜಿ ಅತ್ಯಂತ ಪರಿಪೂರ್ಣ ದೇವರು. ಹಿಂದೂ ಧರ್ಮದ ( ) ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ, ಹನುಮಂತನನ್ನು ಚಿರಂಜೀವಿ ಎಂದು ವಿವರಿಸಲಾಗಿದೆ. ಹನುಮಂತ ಅಮರತ್ವದ ವರವನ್ನು ಪಡೆದಿದ್ದಾರೆ. ಭಗವಾನ್ ರಾಮ ಮತ್ತು ಸೀತಾ ದೇವಿಯ ಸೇವೆಯಲ್ಲಿದ್ದ ಹನುಮಂತನಿಗೆ ಸೀತಾದೇವಿ ( ),ಅಮರರಾಗುವ ವರ ನೀಡಿದರು ಎಂಬ ನಂಬಿಕೆಗಳಿವೆ. ಹನುಮಾನ್ ಇನ್ನೂ ಕೂಡ ಭೂಮಿಯ ಮೇಲೆ ದೇವತೆಯಾಗಿ ಇದ್ದಾನೆ ಎಂದು ಹೇಳಲಾಗುತ್ತದೆ ಭೂಮಿಯ ಮೇಲೆ ಹನುಮಾನ್ ಎಲ್ಲಿದ್ದಾನೆ?ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಸೀತಾ ದೇವಿಯಿಂದ ಅಮರತ್ವದ ವರವನ್ನು ಪಡೆದ ನಂತರ, ಆಂಜನೇಯ ಭೂಮಿಯ ಮೇಲಿನ ಒಂದು ಪವಿತ್ರ ಸ್ಥಳವನ್ನು ತನ್ನ ವಾಸಸ್ಥಳವಾಗಿ ಆರಿಸಿಕೊಂಡನು. ಇಂದಿಗೂ ಆತ ಅಲ್ಲಿ ನೆಲೆಸಿದ್ದಾರೆ ಎನ್ನುವ ಬಲವಾದ ನಂಬಿಕೆ ಇದೆ. ಶ್ರೀಮದ್ ಭಾಗವತ ಪುರಾಣದ ಪ್ರಕಾರ, ಈ ಸ್ಥಳವು ಗಂಧಮಾದನ್ ( ) ಪರ್ವತವಾಗಿದೆ. ಕಲಿಯುಗದಲ್ಲಿ ಧರ್ಮದ ರಕ್ಷಕನಾದ ಮಹಾವೀರ ಬಜರಂಗಬಲಿ ಈ ಸ್ಥಳದಲ್ಲಿ ವಾಸಿಸುತ್ತಾನೆ. ಧರ್ಮಗ್ರಂಥಗಳ ಪ್ರಕಾರ, ಗಂಧಮಾದನ್ ಪರ್ವತವು ಕೈಲಾಸ ಪರ್ವತದ ಉತ್ತರ ದಿಕ್ಕಿನಲ್ಲಿದೆ. ಮಹರ್ಷಿ ಕಶ್ಯಪ್ ಧ್ಯಾನ ಮಾಡಿದ ಸ್ಥಳ ಇದೇ ಆಗಿದೆ. ಸದ್ಯ ಈ ಪರ್ವತ ತಮಿಳುನಾಡಿನ ರಾಮೇಶ್ವರಂ ನ ಪಂಬಮ್ ನಲ್ಲಿದೆ. ಇದನ್ನು ಹನುಮಂತ ಹಿಮಾಲಯದಿಂದ ಹೊತ್ತು ತಂದ ಎನ್ನುವ ಪ್ರತೀತಿ ಇದೆ. ಇದು ಔಷಧಗಳ ಪರ್ವತ ಎನ್ನುವ ನಂಬಿಕೆ ಕೂಡ ಇದೆ. ಇಲ್ಲಿ ಇಂದಿಗೂ ಹನುಮಂತ ನೆಲೆಸಿದ್ದಾನೆ ಎಂದು ಜನರು ನಂಬುತ್ತಾರೆ. ಹನುಮ ಜಯಂತಿಯಂದು ಹನುಮಂತನನ್ನು ಪೂಜಿಸುವುದು ಹೇಗೆ?ಇನ್ನು ಕೆಲವು ಜ್ಯೋತಿಷಿಗಳ ಪ್ರಕಾರ ಇಂದು ಹನುಮ ಜಯಂತಿ. ಹನುಮಾನ್ ಜಯಂತಿಯ ದಿನದಂದು, ಶ್ರೀ ರಾಮ ಮತ್ತು ಹನುಮಂತರ ಚಿತ್ರ ಅಥವಾ ಪ್ರತಿಮೆಯನ್ನು ಪೀಠದ ಮೇಲೆ ಸ್ಥಾಪಿಸಿ. ಅವರ ಮುಂದೆ ತುಪ್ಪದ ದೀಪ ಬೆಳಗಿಸಿ. ಅವರಿಗೆ ಹಣ್ಣುಗಳು, ಹೂವುಗಳು ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಬೇಕು. ಮೊದಲು ಶ್ರೀರಾಮನನ್ನು ( ) ಪೂಜಿಸಿ, ನಂತರ ಹನುಮಂತನನ್ನು ಪೂಜಿಸಬೇಕು. ಪೂಜೆಯ ನಂತರ, ನೀವು ಬಯಸಿದರೆ ಹನುಮಾನ್ ಚಾಲೀಸಾವನ್ನು ಸಹ ಪಠಿಸಬಹುದು. ಅಂತಿಮವಾಗಿ, ಹನುಮಂತನಿಗೆ ಆರತಿಯನ್ನು ಮಾಡಿ, ನಿಮ್ಮ ಇಚ್ಚೆಗಳನ್ನು ಹೇಳಿದರೆ, ಸಮಸ್ಯೆ ಈಡೇರುತ್ತದೆ ಎಂದು ಅರ್ಥ. ಹನುಮಂತನ ಪೂಜೆಯಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಭಗವಾನ್ ರಾಮನಿಲ್ಲದೆ ಹನುಮಂತನನ್ನು ಮಾತ್ರ ಪೂಜಿಸಬೇಡಿ. ಹನುಮಂತನನ್ನು ಪೂಜಿಸುವ ವ್ಯಕ್ತಿಯು ಸಾತ್ವಿಕನಾಗಿರಬೇಕು. ಮಹಿಳೆಯರು ಹನುಮಂತನಿಗೆ ಕುಂಕುಮವನ್ನು ಅರ್ಪಿಸಬಾರದು. ನೀವು ಅವರಿಗೆ ಕೆಂಪು ಹೂವುಗಳನ್ನು ಅರ್ಪಿಸಬಹುದು. ಇದರಿಂದಾ ಹನುಮಂತ ಸಂತಸಗೊಳ್ಳುತ್ತಾನೆ ಎನ್ನುವ ನಂಬಿಕೆ ಇದೆ.