: ಈ ಏಳು ದಿನ ಪತಿ -ಪತ್ನಿ ಹತ್ತಿರಾನೆ ಬರಬಾರದಂತೆ! ಗ್ರಂಥಗಳಲ್ಲಿ ಗಂಡ ಹೆಂಡತಿ ಸಂಬಂಧದ ಬಗ್ಗೆ ತುಂಬಾ ಮಾಹಿತಿ ನೀಡಲಾಗಿದೆ. ಕೆಲವು ಶಾಸ್ತ್ರದಲ್ಲಿ ಪತಿ ಪತ್ನಿಯರು ಯಾವ ದಿನದಂದು ಸಂಬಂಧ ಬೆಳೆಸಬಾರದು ಅನ್ನೋದನ್ನು ತಿಳಿಸಿದ್ದಾರೆ. ಅದರ ಬಗ್ಗೆ ತಿಳಿಯೋಣ. ಗ್ರಂಥಗಳಲ್ಲಿ ಗಂಡ ಹೆಂಡತಿ ಸಂಬಂಧದ ಬಗ್ಗೆ ತುಂಬಾ ಮಾಹಿತಿ ನೀಡಲಾಗಿದೆ. ಕೆಲವು ಶಾಸ್ತ್ರದಲ್ಲಿ ಪತಿ ಪತ್ನಿಯರು ಯಾವ ದಿನದಂದು ಸಂಬಂಧ ಬೆಳೆಸಬಾರದು ಅನ್ನೋದನ್ನು ತಿಳಿಸಿದ್ದಾರೆ. ಅದರ ಬಗ್ಗೆ ತಿಳಿಯೋಣ. ಗ್ರಂಥಗಳಲ್ಲಿ ಗೃಹಸ್ಥ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಲಾಗಿದೆ. ಇದರಲ್ಲಿ ಪತಿ ಮತ್ತು ಪತ್ನಿ ( ) ಯಾವ ದಿನದಂದು ಜೊತೆಯಾಗಿರಬಾರದು ಅಂದರೆ ಸಂಬಂಧ ಬೆಳೆಸಬಾರದು ಅನ್ನೋದನ್ನು ತಿಳಿಸಿದ್ದಾರೆ. ಅದರ ಬಗ್ಗೆ ನಿಮಗೂ ತಿಳಿದಿರಲಿ. ಅಮವಾಸ್ಯೆ:ಧರ್ಮ ಗ್ರಂಥದ ಅನುಸಾರ ಅಮವಾಸ್ಯೆಯ ತಿಥಿಯಂದು ಗಂಡ ಮತ್ತು ಹೆಂಡತಿ ಜೊತೆಯಾಗಿರಬಾರದು ಎಂದು ತಿಳಿಸಲಾಗಿದೆ. ಅವರಿಬ್ಬರು ಬೇರೆ ಬೇರೆಯಾಗಿರಬೇಕು. ಈ ತಿಥಿಯ ದೇವರು ಪಿತೃ ದೇವತೆ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ವ ಇದೆ. ಹುಣ್ಣಿಮೆ:ಗ್ರಂಥಗಳಲ್ಲಿ ಹುಣ್ಣಿಮೆ ( ) ತಿಥಿಯ ಬಗ್ಗೆ ಸಹ ತಿಳಿಸಲಾಗಿದೆ. ಈ ತಿಥಿಯ ದೇವತೆ ಚಂದ್ರ. ಈ ದಿನ ಪೂಜೆ ಮಾಡಲು ಅತ್ಯುತ್ತಮ ದಿನವೆಂದು ಹೇಳಲಾಗುತ್ತದೆ. ಹಾಗಾಗಿ ಈ ದಿನ ಗಂಡ ಹೆಂಡತಿ ಒಟ್ಟಿಗೆ ಸೇರಬಾರದು. ಏಕಾದಶಿ:ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಯನ್ನು ತುಂಬಾನೆ ಪವಿತ್ರವೆಂದು ಹೇಳಲಾಗುತ್ತದೆ. ಈ ದಿನ ವೃತ ಮಾಡಬೇಕೆಂದು ಹೇಳಲಾಗುತ್ತದೆ. ಒಂದು ವೇಳೆ ವೃತ ಮಾಡಲು ಸಾಧ್ಯವಾಗದಿದ್ದರೆ, ಬ್ರಹ್ಮಚರ್ಯವನ್ನು ಪಾಲಿಸಬೇಕೆಂದು ತಿಳಿಸಿದೆ. ಗ್ರಹಣ:ಯಾವಾಗಲಾದರೂ ಚಂದ್ರ ಅಥವಾ ಸೂರ್ಯ ಗ್ರಹಣ () ಇದ್ದ ಸಂದರ್ಭದಲ್ಲೂ ಸಹ ಪತಿ ಮತ್ತು ಪತ್ನಿ ಸಂಬಂಧ ಬೆಳೆಸುವುದನ್ನು ಮಹಾಪಾಪ ಎನ್ನಲಾಗುತ್ತದೆ. ಹೀಗೆ ಮಾಡೋದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಸಂಕ್ರಾಂತಿ:ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ಸಂದರ್ಭವನ್ನು ಸಂಕ್ರಾಂತಿ ಎಂದು ಹೇಳಲಾಗುತ್ತದೆ. ವರ್ಷದಲ್ಲಿ 12 ಸಂಕ್ರಾಂತಿ ಬರುತ್ತದೆ. ಈ ದಿನಗಳಂದು ಸ್ನಾನ -ದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ದಿನ ಬ್ರಹ್ಮಚರ್ಯ ಪಾಲಿಸೋದು ಉತ್ತಮ. ವೃತ ಮಾಡೋ ಸಂದರ್ಭ:ಪತಿ ಅಥವಾ ಪತ್ನಿ ಯಾವುದೇ ವೃತ ಮಾಡಿದರೆ ಆ ದಿನ ಒಬ್ಬರು ಜೊತೆಯಾಗಿರಬಾರದು. ವೃತದ ಸಂದರ್ಭದಲ್ಲಿ ಬ್ರಹ್ಮಚರ್ಯ ಪಾಲಿಸಬೇಕೆಂದು ಹೇಳಲಾಗುತ್ತದೆ.