2022ರಲ್ಲಿ ಉದ್ಯೋಗ ಬಿಡಲು ಶೇ.70ರಷ್ಟು ಮಹಿಳೆಯರು ಮುಂದು! 2022ರಲ್ಲಿ ಶೇ.70ರಷ್ಟು ಮಹಿಳಾ ಉದ್ಯೋಗಿಗಳು ಕೆಲಸ ಬಿಡುವ ಚಿಂತನೆ ನಡೆಸಿರುವುದು ಬಹಿರಂಗವಾಗಿದೆ. ಉದ್ಯೋಗ ಸಂಸ್ಥೆಗಳು ಫ್ಲೆಕ್ಸಿಬಿಲಿಟಿ ಒದಗಿಸದೇ ಇರುವುದು ಇದಕ್ಕೆ ಮುಖ್ಯ ಕಾರಣ. ನವದೆಹಲಿ (ಏ.13):ಹೆಸರಾಂತ ವೃತ್ತಿಪರ ಸಾಮಾಜಿಕ ಜಾಲತಾಣವಾದ ಲಿಂಕ್ಡ್ ಇನ್ (), ನಡೆಸಿದ ಸಂಶೋಧನೆಯಲ್ಲಿ 2022ರಲ್ಲಿ ಶೇ.70ರಷ್ಟು ಮಹಿಳಾ ಉದ್ಯೋಗಿಗಳು ಕೆಲಸ ಬಿಡುವ ಚಿಂತನೆ ನಡೆಸಿರುವುದು ಬಹಿರಂಗವಾಗಿದೆ. ಉದ್ಯೋಗ ಸಂಸ್ಥೆಗಳು ಫ್ಲೆಕ್ಸಿಬಿಲಿಟಿ ಒದಗಿಸದೇ ಇರುವುದು ಮಹಿಳಾ ಉದ್ಯೋಗಿಗಳು ಕೆಲಸ ಬಿಡುತ್ತಿರುವುದಕ್ಕೆ ಮುಖ್ಯ ಕಾರಣ. ಶೇ. 88 ಪ್ರತಿಶತ ಮಹಿಳಾ ಉದ್ಯೋಗಿಗಳು ಫ್ಲೆಕ್ಸಿಬಿಲಿಟಿಗಾಗಿ ಸಂಬಳ ಕಡಿತವನ್ನು ಎದುರಿಸುತ್ತಿದ್ದಾರೆ. ಮಹಿಳಾ ಉದ್ಯೋಗಿಗಳು ಕೆಲಸದ ಸಂಸ್ಥೆಯಿಂದ ಫ್ಲೆಕ್ಸಿಬಿಲಿಟಿಯನ್ನು ಬಯಸುತ್ತಿದ್ದು, ಅದೇ ಅವರ ಪ್ರಮುಖ ಆದ್ಯತೆಯಾಗಿದೆ. ಅದನ್ನು ನೀಡದ ಸಂಸ್ಥೆಯನ್ನು ಅದೇ ಕಾರಣಕ್ಕೆ ತೊರೆಯುತ್ತಿದ್ದಾರೆ. 2022: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಉದ್ಯೋಗಸಂಸ್ಥೆಗಳಿಗೆ ಇದೊಂದು ಕರೆಗಂಟೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಫ್ಲೆಕ್ಸಿಬಿಲಿಟಿಯನ್ನು ಉದ್ಯೋಗಿಗಳಿಗೆ ಒದಗಿಸದೇ ಹೋದಲ್ಲಿ, ಸಂಸ್ಥೆ ಉತ್ತಮ ಕೆಲಸಗಾರರನ್ನು ಕಳೆದುಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಭಾರತದಲ್ಲಿ 2,266 ಸಂದರ್ಶಕರನ್ನು ಆಧರಿಸಿದ ಸಂಶೋಧನೆ ನಡೆದಿದ್ದು, ಕೆಲಸ ಮಾಡುವ ಮಹಿಳೆಯರು ಸುಲಭವಾಗಿ ಕೆಲಸ ಮಾಡಲು ಭಾರೀ ದಂಡವನ್ನು ಪಾವತಿಸುತ್ತಿದ್ದಾರೆ ಎಂದು ಸಂದರ್ಶನದ ವೇಳೆ ತಿಳಿದುಬಂದಿದೆ. 10 ರಲ್ಲಿ 9 (88%) ಕೆಲಸ ಮಾಡುವ ಮಹಿಳೆಯರು ಮೃದುವಾಗಿ ಕೆಲಸ ಮಾಡಲು ಬಯಸುತ್ತಾರೆ ಎಂದು ಲಿಂಕ್ಡ್‌ಇನ್‌ನ ಸಂಶೋಧನೆಯಿಂದ ತಿಳಿದುಬಂದಿದೆ. 5 ರಲ್ಲಿ 2 (37%) ಅವರ ಹೊಂದಿಕೊಳ್ಳುವ ಕೆಲಸದ ವಿನಂತಿಯನ್ನು ನಿರಾಕರಿಸಲಾಗಿದೆ ಮತ್ತು 4 ರಲ್ಲಿ 1 (27%) ತಮ್ಮ ಮೇಲಧಿಕಾರಿಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಹೆಣಗಾಡಿದರು. ಸುಮಾರು 5 ರಲ್ಲಿ 2 ಮಹಿಳೆಯರು ತಮ್ಮ ಕೆಲಸ-ಜೀವನದ ಸಮತೋಲನವನ್ನು (ಶೇ 43) ಸುಧಾರಿಸುತ್ತದೆ ಮತ್ತು ಅವರ ವೃತ್ತಿಜೀವನವನ್ನು (ಶೇ 43) ಸುಧಾರಿಸುತ್ತದೆ ಎಂದು ಹೇಳಿದ್ದಾರೆ. ಆದರೆ 3 ರಲ್ಲಿ 1 ತಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ. ನಮ್ಯತೆ ಮತ್ತು ವೃತ್ತಿ ವಿರಾಮಗಳ ಅಗತ್ಯತೆಯ ಸುತ್ತಲಿನ ಕಳಂಕವನ್ನು ತೆಗೆದುಹಾಕಲು ಮತ್ತು ಉನ್ನತ ಪ್ರತಿಭೆಯನ್ನು ಕಳೆದುಕೊಳ್ಳಲು ಬಯಸದಿದ್ದರೆ ಬಲವಾದ ನಮ್ಯತೆ ನೀತಿಗಳನ್ನು ಪರಿಚಯಿಸಲು ಕಂಪನಿಗಳು ಮತ್ತು ನೇಮಕಾತಿದಾರರಿಗೆ ಇದು ಎಚ್ಚರಿಕೆಯ ಸಂಕೇತವಾಗಿದೆ. 2022 ಒಟ್ಟು 136 ಕಿರಿಯ ಇಂಜಿನಿಯರ್ ಹುದ್ದೆಗೆ ನೇಮಕಾತಿ ನರೇಗಾ ಉದ್ಯೋಗದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯ:ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ( )- ಮನರೇಗಾ ಯೋಜನೆಯಡಿ ಉದ್ಯೋಗ ಕೋರುವ ಲೈಂಗಿಕ ಅಲ್ಪಸಂಖ್ಯಾತರು ತಾರತಮ್ಯಕೊಳ್ಳಗಾಗುತ್ತಿದ್ದಾರೆ. ಪಂಚಾಯಿತಿಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಗೌರವ ನೀಡಲಾಗುತ್ತದೆ. ಆದರೆ, ಲೈಂಗಿಕ ಅಲ್ಪಸಂಖ್ಯಾತರು ಉದ್ಯೋಗ ಕೇಳಿದರೆ ಅಪಮಾನ ಮಾಡಲಾಗುತ್ತಿದೆ. ಹೊರಗಡೆ ನಿಲ್ಲಿಸಲಾಗುತ್ತಿದೆ. ಕೂಲಿ ಪಡೆಯಲು ಅನೇಕ ಬಾರಿ ಅಲೆಸಲಾಗುತ್ತಿದೆ ಎಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದ ಲೈಂಗಿಕ ಅಲ್ಪಸಂಖ್ಯಾತ ( ) ಮಹಿಳೆ ಚಾಂದಿನಿ ತನ್ನ ಕಥೆಯನ್ನು ಹೇಳುತ್ತಾಳೆ. ರಾಜ್ಯದ ವಿವಿಧೆಡೆ ಮನ್ರೇಗಾದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 40 ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಿದೆ. ರಸ್ತೆ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ಗೋಡೆ ನಿರ್ಮಾಣ, ಕೆರೆಗಳಲ್ಲಿ ಹೂಳೆತ್ತುವುದು ಮತ್ತಿತರ ಉದ್ಯೋಗಗಳಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದಾಗ್ಯೂ, ಲೈಂಗಿಕ ಅಲ್ಜಸಂಖ್ಯಾತ ಮಹಿಳೆಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಾರದಲ್ಲಿ ಬೆಳಗ್ಗೆ ಆರರಿಂದ ಮಧ್ಯಾಹ್ನದವರೆಗೂ ಆರು ದಿನಗಳ ಕಾಲ ಕೆಲಸ ಮಾಡುತ್ತೇವೆ. ಪ್ರತಿ ದಿನ 289 ರೂ. ಕೂಲಿಯನ್ನು ಸರ್ಕಾರ ನಿಗದಿಪಡಿಸಿದ್ದರೂ, ಇಡೀ ವಾರ ಮಾಡಿದ್ದ ಕೆಲಸಕ್ಕೆ ಕೇವಲ ರೂ. 600 ರಿಂದ 750 ನೀಡಲಾಗುತ್ತಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಅಥವಾ ಸದಸ್ಯರನ್ನು ಕೇಳಿದಾಗ ಅವರು ಬೈಯುತ್ತಾರೆ. ಕೆಲವೊಂದು ವೇಳೆ ನಾವು ಮಾಡಿದ್ದ ಕೆಲಸಕ್ಕಾಗಿ ಬೇಡಬೇಕಾದ ಪರಿಸ್ಥಿತಿ ಇದೆ ಎಂದು ಚಾಂದಿನಿ ಹೇಳಿದರು.