ಬಾಲ್ಯವಿವಾಹಕ್ಕೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್, ಪರೀಕ್ಷೆಗೆ ಹಾಜರ್! ಶಿಕ್ಷಣ ನೆಪದಲ್ಲಿ ಮದುವೆ ನಿರಾಕರಿಸುತ್ತಾಳೋ ಎಂಬ ಮುಂದಾಲೋಚನೆ ಮಾಡಿದ ಮನೆಯವರು ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಮದುವೆ ಮಾಡಲು ಮುಂದಾಗಿದ್ದರು. ಆದರೆ ಆಕೆ ಅಲ್ಲಿಂದ ತಪ್ಪಿಸಿಕೊಂಡು ಪರೀಕ್ಷೆ ಬರೆದಿದ್ದಾಳೆ. ಕೋಲ್ಕತಾ (ಮಾ.11):ಶಿಕ್ಷಣದ () ಮಹತ್ವವನ್ನು ಒತ್ತಿ ಸಾರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮದುವೆಗೆ ಒತ್ತಾಯಿಸಿ ಟೀನೇಜ್ ಹುಡುಗಿಯನ್ನು ಮನೆಯವರು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು. ಆಕೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ( ) ಇದ್ದರೂ ಮನೆಯವರು ಪರೀಕ್ಷೆ ಬರೆಯಲು ಬಿಟ್ಟಿರಲಿಲ್ಲ. ಪರೀಕ್ಷೆ ಬರೆದು ಉತ್ತೀರ್ಣಳಾಗಿ ಎಲ್ಲಿ ಶಿಕ್ಷಣ ನೆಪದಲ್ಲಿ ಮದುವೆ ನಿರಾಕರಿಸುತ್ತಾರೋ ಎನ್ನುವುದು ಮನೆಯವರ ಆತಂಕವಾಗಿತ್ತು. ಕಡೆಗೂ ಮನೆಯವರ ಕಣ್ತಪ್ಪಿಸಿ ಹುಡುಗಿ ಬಂಧನದಿಂದ ಎಸ್ಕೇಪ್ ಆಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಪಶ್ಚಿಮ ಬಂಗಾಳದ ( ) ಪೂರ್ವ ಬುರ್ದ್ವಾನ್ ಜಿಲ್ಲೆಯ ಔಷ್‌ಗ್ರಾಮ್‌ನಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷೆ ಬರೆಯಲೇ ಬೇಕೆಂಬ ಹಠದಿಂದ ಕೋಣೆಯಿಂದ ಆಕೆ ತಪ್ಪಿಸಿಕೊಂಡು, ಮನೆಯವರ ಕಣ್ತಪ್ಪಿಸಿ ಪರಿಕ್ಷಾ ಕೊಠಡಿಗೆ ಬಂದಳು, ಆದರೆ ಪ್ರವೇಶ ಪತ್ರ ಮತ್ತು ನೋಂದಣಿ ಪ್ರಮಾಣಪತ್ರವನ್ನು ತನ್ನೊಂದಿಗೆ ತರಲು ಸಾಧ್ಯವಾಗದ ಕಾರಣ ಬಾಲಕಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಿಲ್ಲ. ಹೀಗಾಗಿ ಬಾಲಕಿ ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಳು. ಪೊಲೀಸ್ () ಸಿಬ್ಬಂದಿ ಆಕೆಯ ಮನೆಗೆ ತೆರಳಿ ದಾಖಲೆಗಳನ್ನು ತಂದ ನಂತರ ಪರೀಕ್ಷೆ ಬರೆಯಲು ಅನುಮತಿ ನೀಡಲಾಯ್ತು. ಘಟನೆ ಬಳಿ ಬಾಲಕಿಯ ಮನೆಗೆ ತೆರಳಿದ ಪೊಲೀಸರು ಹುಡುಗಿಯ ಮನೆಯವರಿಗೆ ಎಚ್ಚರಿಕೆ ನೀಡಿದರು. ಅಪ್ರಾಪ್ತ ಬಾಲಕಿಯ ಮದುವೆಗೆ ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿ ಬುದ್ದಿ ಹೇಳಿದ್ದಾರೆ. ಅತ್ಯಾಚಾರ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ರಾಜ್ಯ ಹೈಕೋರ್ಟ್ ಅನುಮತಿ! ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬಾಲಕಿ, ನನ್ನನ್ನು ಕೋಣೆಯೊಂದರಲ್ಲಿ ಬಂಧಿಸಿಡಲಾಗಿತ್ತು. ಬಹಳ ಹೊತ್ತಿನ ನಂತರ ನನಗೆ ವಾಶ್‌ರೂಮ್‌ಗೆ ಹೋಗಲು ಅವಕಾಶ ಮಾಡಿಕೊಟ್ಟರು. ಅದರ ಲಾಭ ಪಡೆದು ನಾನು ಕೋಣೆಯಿಂದ ತಪ್ಪಿಸಿಕೊಂಡು ಪರೀಕ್ಷಾ ಕೇಂದ್ರದ ಕಡೆಗೆ ಓಡತೊಡಗಿದೆ. ದಾರಿಯಲ್ಲಿ, ನಾನು ನನ್ನ ಸ್ನೇಹಿತರೊಬ್ಬರನ್ನು ಭೇಟಿಯಾದೆ ಮತ್ತು ಆಕೆ ತನ್ನ ಸೈಕಲ್‌ನಲ್ಲಿ ನನಗೆ ಪರೀಕ್ಷಾ ಕೇಂದ್ರ ತಲುಪಲು ಸಹಾಯ ಮಾಡಿದಳು ಎಂದಿದ್ದಾಳೆ. ಬಾಲಕಿಯ ತಂದೆ ದಿನ ಕೂಲಿ ನೌಕರರಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಆಕೆಗೆ ದಾಖಲೆಗಳನ್ನು ಪಡೆಯಲು ಸಹಾಯ ಮಾಡಿದ್ದಲ್ಲದೆ, ಆಹಾರವನ್ನು ಕೂಡ ನೀಡಿದರು. ಸಂಕಷ್ಟದಲ್ಲಿರುವ ಹುಡುಗಿಯನ್ನು ನಾವು ನೋಡಿದೆವು. ಅವಳಿಗೆ ಬಹಳ ಹಸಿವಾಗಿತ್ತು. ತನ್ನ ಸಂಕಟವನ್ನು ವಿವರಿಸುವಾಗ, ಅವಳು ಮೂರ್ಛೆ ಹೋದಳು. ದಣಿದ ಆಕೆಗೆ ಅ ಊಟ ಕೊಟ್ಟು ಸಮಾಧಾನ ಮಾಡಿ, ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತರುವುದಾಗಿ ನಾವು ಆಕೆಗೆ ಭರವಸೆ ನೀಡಿದೆವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. : ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಸೇನೆಗೆ ಸೇರಲು ಬಯಸುವ ಗುರಿ ಹೊಂದಿರುವ ಬಾಲಕಿ ಸೋಮವಾರ ಆರಂಭವಾದ ಮೊದಲ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದಳು. ಬಳಿಕ ಆಕೆಗೆ ಮದುವೆ ಮಾಡಲು ತೀರ್ಮಾನಿಸಿದ್ದರು. ಅದಾದ ನಂತರ ಈ ಘಟನೆ ನಡೆದಿತ್ತು. ಬಂಗಾಳಿ ಮತ್ತು ಇಂಗ್ಲಿಷ್ ಪರೀಕ್ಷೆ ಬರೆದಿದ್ದು ನನ್ನ ಉತ್ತರಗಳಿಂದ ನಾನು ತೃಪ್ತನಾಗಿದ್ದೇನೆ. ಬುಧವಾರ, ನನ್ನ ಮದುವೆಯನ್ನು ನಿಶ್ಚಯಿಸಲು ನನ್ನ ತಂದೆ ನೆರೆಹೊರೆಯವರನ್ನು ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು. ನನ್ನ ಅತ್ತೆ ಮತ್ತು ಅತ್ತಿಗೆ ನನ್ನನ್ನು ಕೋಣೆಯೊಂದರಲ್ಲಿ ಬಂಧಿಸಿಟ್ಟರು ಎಂದು ಬಾಲಕಿ ಹೇಳಿದ್ದಾಳೆ. ಗಾರೆ ಮೇಸ್ತ್ರಿಯ ಸಹಾಯಕನಾಗಿ ಕೆಲಸ ಮಾಡುವ ಬಾಲಕಿಯ ಸಹೋದರನೊಬ್ಬ , ನಾವು ಬಡವರು. ಸೂಕ್ತ ವರ ಸಿಕ್ಕಾಗ ಅವಳ ಮದುವೆ ನಿಶ್ಚಯಿಸಿದೆವು. ಆದರೆ ಆಕೆಗೆ 18 ವರ್ಷ ತುಂಬುವ ಮೊದಲು ಅವಳ ಮದುವೆಯನ್ನು ಮಾಡಬೇಡಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಹೀಗಾಗಿ ನಾವು ಅವಳ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾನೆ.